ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಕುಪ್ಪೆ ಗ್ರಾಮದಲ್ಲಿ ಸೀತಾದೇವಿ ಎನ್ನಲಾದ ವಿಗ್ರಹ, ಹುಲಿಯಪ್ಪ ವಿಗ್ರಹ ಹಾಗೂ ಕೆಲವು ದೇವಳದ ಬಿಡಿ ಭಾಗಗಳು ಸುಮಾರು 8-9ನೇ ಶತಮಾನದ ಲಕ್ಷಣ ಸೂಚಿಸುತ್ತಿದ್ದು ಇಲ್ಲಿನ ಅನೇಕ ವಿಗ್ರಹಗಳನ್ನು ಹಿಂದೆ ಧರ್ಮಸ್ಥಳದ ಮಂಜೂಷಕ್ಕೆ ರವಾನಿಸಿ ರಕ್ಷಿಸಲಾಗಿದೆ. ಪ್ರಸ್ತುತ ಇಲ್ಲಿ 12-14ನೇ ಶತಮಾನದ ಇನ್ನೂ ಕೆಲವು ಶಿಥಿಲಗೊಂಡ ದೇಗುಲಗಳ ರಕ್ಷಣೆಯಾಗಬೇಕಿದೆ ಎಂದು ತಾಲ್ಲೂಕು ಪಂಚಾಯ್ತಿ ಜೀವವೈವಿಧ್ಯ ನಿರ್ವಹಣ ಸಮಿತಿಯ ಸದಸ್ಯ, ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಇತಿಹಾಸ ಕ್ಷೇತ್ರ ಕುಪ್ಪೆ ಗ್ರಾಮದ ಪ್ರಾಚೀನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಇಒ ಕುಮಾರ್ ಹಾಗೂ ಹೆಗ್ಗೋಡು ಗ್ರಾಪಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.

Also read: ಕಾಳಿ ನದಿಯಲ್ಲಿ ಮೊಸಳೆ ಹೊತ್ತೊಯ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ!
ಈ ಆವರಣದಲ್ಲಿ ಸಭಾಭವನ ಹಾಗೂ ನವಗ್ರಹ, ರಾಶಿ ವನದ ನಿರ್ಮಾಣವಾಗಬೇಕು ಎಂದು ಛತ್ರಪತಿ ಪಾಟೀಲ್ ಮನವಿ ಮಾಡಿದರು.
ಇಲ್ಲಿನ ಪವಿತ್ರ ಕಲ್ಯಾಣಿಯ ಜೀರ್ಣೋದ್ಧಾರ ಕ್ರಿಯೆಗೆ ಎನ್ಆರ್ಇಜಿಯಲ್ಲಿ ಅವಕಾಶವಿದ್ದು, ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ನಡೆಸುವಂತೆ ಹೆಗ್ಗೋಡು ಗ್ರಾಪಂ ಕಾರ್ಯದರ್ಶಿ ರವಿಯವರಿಗೆ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸೂಚಿಸಿದರು.

ಯೋಜನೆ ಕುರಿತಂತೆ ತಾಪಂ ಅಭಿಯಂತರ ರಮೇಶ್ ಕ್ರಿಯಾಯೋಜನೆ ಸಿದ್ಧತೆ ನಡೆಸಿದರು. ಅನಿಲ್ ಸಿ. ಪಾಟೀಲ್ ಹಾಗೂ ಗ್ರಾಮದ ಅನೇಕರಿದ್ದರು.
ವರದಿ: ಮಧುರಾಮ್, ಸೊರಬ












Discussion about this post