Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಎದೆಯೆತ್ತರ ಬೆಳೆದ ಮಗನನ್ನು ಬಲಿ ಪಡೆದ ಪ್ರವಾ(ಯಾ)ಸ: ನಿಮ್ಮ ಕರುಳು ಚುರುಕ್ ಎನ್ನುವ ಲೇಖನ

July 2, 2019
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಈಗಂತೂ ಮಗುವಿನಿಂದ ಹಿಡಿದು ವಯೋವೃದ್ಧರ ತನಕ ಪ್ರವಾಸಗಳ ಸನ್ನಿ ಹಿಡಿದಿದೆ. ಸದಾ ಪ್ರವಾಸ ಮಾಡುತ್ತಲೇ ಇರಬೇಕು, ಅದನ್ನು ಬೇರೆಯವರೂ ಮೆಚ್ಚಬೇಕು ಅನ್ನುವ ಗೀಳು ಅಂಟಿಸಿಕೊಂಡ ಪೀಳಿಗೆ ಜಾಸ್ತಿ. ಅದರಲ್ಲೂ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನುಗಳು ದೊರಕುತ್ತಿರುವ ನಂತರವತೂ ಜೀವನದ ಪ್ರತಿ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಹೆಚ್ಚು ಶಹಬ್ಬಾಸ್‌ಗಿರಿ, ಮೆಚ್ಚುಗೆ ಮಾತುಗಳ ಪಡೆಯುವ ಹುಚ್ಚು ಅತಿರೇಕಕ್ಕೆ ಹೋಗಿದೆ.

ಅಪಾಯ ತಂದೊಡ್ಡುವ ಸೆಲ್ಫಿ ಫೋಟೋಗಳ ಕಥೆಯು ಇದರ ಒಂದು ಭಾಗ. ಹೆಚ್ಚು ಮೆಚ್ಚುಗೆ ಸಿಗುತ್ತದೆ ಎಂದು ಅನಾಹುತಕಾರಿ ಕೆಲಸ ಮಾಡುವುದು ಅಥವಾ ತನ್ನ ಚಿತ್ರಗಳ ಯಾರು ಮೆಚ್ಚುವುದಿಲ್ಲ ಎಂದು ಕೀಳರಿಮೆಗೆ ಒಳಗಾಗುವುದು ಸರ್ವೇ ಸಾಮಾನ್ಯವಾಗಿದೆ.

ಪ್ರವಾಸಗಳ ವಿಷಯ ಮುಂದುವರೆದಂತೆ, ಪ್ರತಿ ಕ್ಷೇತ್ರದಲ್ಲೂ ವಾರಾಂತ್ಯಗಳಿಗೆ ಕಾಯುವ ದೊಡ್ಡ ಬಳಗವೇ ಇದೆ. ಅದು ತಪ್ಪು ಅಂತೇನಿಲ್ಲ. ಖುಷಿಯ ಕ್ಷಣಗಳ ಸೃಷ್ಟಿಸಿ, ಸವಿಯುವುದು ಜೀವನದ ಒಂದು ಭಾಗವಾಗಿದೆ. ಈ ರೋಮಾಂಚನಕಾರಿ ಕೆಲಸಗಳನ್ನು ಮಾಡುವ ಗೀಳು ಅಂಟಿಸಿಕೊಂಡು ಬದುಕನ್ನು ಅಪಾಯಕ್ಕೆ ಒಡ್ಡಿಕೊಳ್ಳಬಾರದು. ಅಂತಹ ಸಂದರ್ಭಗಳಲ್ಲಿ ನಂಬಿರುವ ಜೀವಗಳ ಬಿಟ್ಟು ಹೊರಡುವ ಕ್ಷಣ ಎಲ್ಲಿಂದಲೋ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅಂತಹುದೇ ಒಂದು ಘಟನೆ ನಡೆದು ಹೋಗಿದೆ. ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಗಮ್ಯ ತಲುಪಿಸಿದ ವ್ಯಕ್ತಿಯ ಬಾಳ ದೋಣಿ ದಾರಿ ತಪ್ಪಿದೆ. ಅವನ ಹಾದಿ ಹಿಡಿದು ನಾಳೆಗಳ ನೊಗ ಹೊರಬೇಕಾದ ಚಂದದ ಮಗ ವಿಧಿಯ ಮಾತಿಗೆ ಓಗೊಟ್ಟು ನಡೆದಿದ್ದಾನೆ. ಕನಸುಗಳ ಜೋಪಡಿಯಲ್ಲಿ ನಾಳೆಗಳ ಬೆಳಕು ಮಾಯವಾಗಿದೆ. ಕತ್ತಲೆ ದಾಂಗುಡಿಯಿಟ್ಟಿದೆ.

ಅಪಘಾತಗಳ ಸುದ್ದಿ ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಆದರೆ ಅದರಲ್ಲಿ ಶೇ.75ರಷ್ಟು ಘಟನೆಗಳು ಅಜಾಗರೂಕತೆಯಿಂದಲೇ ದುರಂತಕ್ಕೆ ದಾರಿಯಾಗುತ್ತವೆ ಎಂಬುದು ಅಷ್ಟೇ ಸತ್ಯ. ಇತ್ತೀಚಿನ ಒಂದು ಘಟನೆ. ವಾರಾಂತ್ಯಕ್ಕೆ ಊಟಿಗೆ ಹೊರಡಲು ಯೋಜನೆ ಹಾಕಿಕೊಂಡ ಯುವಕ ಯುವತಿಯರು ಅನಾಮತ್ತಾಗಿ ಬೆಂಗಳೂರು, ಶಿವಮೊಗ್ಗ ಮತ್ತು ಮೈಸೂರುಗಳಲ್ಲಿರುವ ಸ್ನೇಹಿತರ, ಬಂಧುಗಳ ಸಂಪರ್ಕಿಸಿ ಹೊರಡಲು ಅನುವಾಗುತ್ತದೆ. ತಂಡದ ಕೊನೆಯ ಸದಸ್ಯನ ಕರೆತರಲು ಮೈಸೂರಿನ ಬಸ್ ನಿಲ್ದಾಣಕ್ಕೆ ತೆರಳುವ ಇಪ್ಪತ್ತೇಳರ ಹರೆಯದ ಯುವಕ ಬೈಕ್’ನಲ್ಲಿ ತೆರಳುತ್ತಾನೆ.

ಸಮಯ ಸುಮಾರು ಬೆಳಗಿನ ಜಾವ 2.45. ಇನ್ನೇನು ಕರೆದುಕೊಂಡು ಹೊರಡಬೇಕು ವೇಗವಾಗಿ ಬಂದ ಕಾರು ಅವನನ್ನು ಅರೆ ಜೀವ ಮಾಡಿಬಿಡುತ್ತದೆ. ಸುಮಾರು ಆರು ದಿನಗಳಷ್ಟು ಒದ್ದಾಡುವ ಆ ಎಳೆ ಜೀವ ಬಾರದ ಲೋಕಕ್ಕೆ ಹೊರಟು ಹೋಗುತ್ತದೆ. ಯಾರನ್ನು ಹೊಣೆ ಮಾಡುವುದು? ಪ್ರವಾಸಗಳ ಹುಚ್ಚು ಹಿಡಿಸಿಕೊಂಡ ಆ ಯುವಕ ಯುವತಿಯರನ್ನೇ? ಅಥವಾ ಮಧ್ಯರಾತ್ರಿ ಬಂದ ಸದಸ್ಯನ? ಅಥವಾ ಅತಿ ವೇಗವಾಗಿ ಬಂದು ಅಪಘಾತ ಮಾಡಿ ನಿಲ್ಲಿಸದೇ ಹೋದ ಆ ಆಗಂತುಕನನ್ನೇ? ಅಥವಾ ಯಾವುದೇ ಸಿಸಿಟಿವಿ ದಾಖಲೆ ಸಿಗಗೊಡದಂತೆ ಮಾಡಿದ ಆ ತೆರೆಮರೆಯ ವ್ಯವಸ್ಥೆಯನ್ನೇ? ಈ ವ್ಯವಸ್ಥೆಯೇ ಹಾಗೆ ಶಕ್ತಿವಂತರ ಗುಲಾಮಗಿರಿ ಮಾಡುತ್ತದೆ. ಅಮಾಯಕರ ಉಸಿರು ಬಿಗಿಯುತ್ತದೆ.

ಕಣ್ಣೆದುರೇ ಎದೆಯೆತ್ತರಕ್ಕೆ ಬೆಳೆದ ಮಗ, ಕಂಗಳಲಿ ಕನಸುಗಳ ಹೊತ್ತು ತಿರುಗಿದ ಮಗ ಇಂದು ಅದೇ ಮನೆಯ ಅಂಗಳದಲ್ಲಿ ಅತ್ತು ಕರೆದರೂ ಓಗೊಡದೆ ಹೆಣವಾಗಿ ಮಲಗಿದ್ದಾನೆ. ತಂದೆಯ ಕಣ್ಣೀರು ಬತ್ತಿ ಹೋಗಿದೆ. ಈ ಅಪಘಾತಗಳಿಗಿಂತಲೂ ಘೋರ ಏನು ಗೊತ್ತಾ? ಜೀವಂತ ಇರುವಾಗಲೇ ಇನ್ನು ಚಿಕಿತ್ಸೆ ಮಾಡಲಾಗದು ಎಂದು ಹೇಳಿದಾಗ ವಾಪಸ್ಸು ಮನೆಗೆ ತರುವುದು. ಊಹಿಸಿದರೆ ಕರುಳು ಚುರುಕ್ ಅನ್ನುತ್ತದೆ. ಇನ್ನು ಆ ತಂದೆಯ ಗತಿ ಏನು? ಕಳೆದ ವರ್ಷ ಮಗಳ ಮದುವೆ ಮಾಡಿ, ಮಗನ ಓದಿಸುತ್ತ, ಚಾಲಕ ವೃತ್ತಿಯ ಜೊತೆ ಒಂದಿಷ್ಟು ವ್ಯವಸಾಯ ಮಾಡಿ ನೂರಾರು ಆಸೆಗಳ ಬುತ್ತಿ ಕಟ್ಟಿಕೊಂಡು ಕೂತಿದ್ದ ಆ ಕುಟುಂಬ ಅಕ್ಷರಶಃ ನುಚ್ಚುನೂರಾಗಿದೆ.

ನಾಲ್ಕು ದಿನ ಮರುಗುವ ಈ ಸಮಾಜ ಮರೆತು ಬಿಡುತ್ತದೆ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಒಂದು, ಇಂತಹ ದೊಡ್ಡ ಅಪಘಾತ ನಡೆದರೂ ಮೈಸೂರು ಮಹಾನಗರಿಯ ಮುಖ್ಯ ರಸ್ತೆಯಲ್ಲಿ ಒಂದೂ ದಾಖಲೆ ಸಿಗದೇ ಹೋದದ್ದು. ಎಷ್ಟು ನಿರ್ದಾಕ್ಷಿಣ್ಯವಾಗಿ, ವ್ಯವಸ್ಥಿತವಾಗಿ ಘಟನೆಯನ್ನು ಮುಚ್ಚಿ ಹಾಕಿದಿರಿ? ಛೆ, ನಿಮಗೆ ನನ್ನ ಧಿಕ್ಕಾರ.

ಎರಡು, ಅರಿತೋ ಅರಿಯದೆಯೋ ಪೂರ್ವ ತಯಾರಿಗಳಿಲ್ಲದೇ, ಬೇಜವಾಬ್ದಾರಿಯಿಂದ ಕೈಗೊಳ್ಳುವ ಪ್ರವಾಸಗಳ ಕುರಿತು. ಅದು ತಪ್ಪು ಎಂದಲ್ಲ. ಅದಕ್ಕೂ ಒಂದು ಮಿತಿ ಇರಲಿ. ಬೆಳಗಿನ ಜಾವ, ರಾತ್ರಿ ವೇಳೆಯ ದೂರ ಪ್ರಯಾಣಗಳಿಂದ ದೂರ ಇರುವುದು ಒಳ್ಳೆಯದು. ನೀರವ ಮೌನ ತುಂಬಿದ ಅಮಾಯಕನ ಸಾವಿನ ಆ ಮನೆ ಅಜಾಗರೂಕತೆ, ವಿಧಿಯ ವಿಪರ್ಯಾಸ, ತಂದೆಯ ಕಣ್ಣೀರು ಎಲ್ಲವನ್ನೂ ಕಣ್ಣೆದುರೇ ತಂದು ನಿಲ್ಲಿಸಿ ಬಿಡುತ್ತದೆ. ದಯವಿಟ್ಟು ಪ್ರವಾಸಗಳಿಗೆ ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತವಾಗಿ ಹೊರಡಿ. ನಿಮ್ಮನ್ನು ನೀವೇ ಕಾಯಬೇಕು ಮತ್ತು ನಿಮ್ಮನ್ನು ನಂಬಿದವರನ್ನು ಸಹ. ಮತ್ತು ಹಣದ ಅವಶ್ಯಕತೆ ಇದೆ ಎಂದಾಗ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.

-ಲೇಖನ: ಸಚಿನ್ ಪಾರ್ಶ್ವನಾಥ್, 
  ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ

Tags: BENGALURUKannada ArticlemysoreRoad AccidentSelfieShivamoggaSocial mediaಅಪಘಾತರಸ್ತೆ ಅಪಘಾತಸಾಮಾಜಿಕ ಜಾಲತಾಣಸೆಲ್ಫಿ
Previous Post

ಮಣ್ಣೆತ್ತಿನ ಅಮಾವಾಸ್ಯೆ – ಅನ್ನದಾತನ ಭಕ್ತಿ ಭಾವದ ಪ್ರತೀಕ

Next Post

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್! ಡಿ ಬಾಸ್ ಟ್ವೀಟ್ ಮರ್ಮವೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್! ಡಿ ಬಾಸ್ ಟ್ವೀಟ್ ಮರ್ಮವೇನು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
File Image

ಅಧಿಕಾರಿಗಳ ವರ್ಗಾವಣೆ | ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

June 20, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!