No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Monday, January 26, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸ್ವತಃ ಮೋದಿಯವರಿಂದಲೇ ಪ್ರಶಂಸೆ ಪಡೆದ ಯುವ ನಕ್ಷತ್ರ ‘ಹಾರಿಕಾ’ ದೇಶಭಕ್ತಿ ರಾಷ್ಟ್ರಕ್ಕೇ ಮಾದರಿ

ಶಿವರಾತ್ರಿ ಕಾರ್ಯಕ್ರಮಕ್ಕೆ ಇಂದು ಭದ್ರಾವತಿಗೆ ಆಗಮಿಸಲಿದ್ದಾಳೆ ಯುವ ವಾಗ್ಮಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 20, 2020
in Special Articles
0
ಸ್ವತಃ ಮೋದಿಯವರಿಂದಲೇ ಪ್ರಶಂಸೆ ಪಡೆದ ಯುವ ನಕ್ಷತ್ರ ‘ಹಾರಿಕಾ’ ದೇಶಭಕ್ತಿ ರಾಷ್ಟ್ರಕ್ಕೇ ಮಾದರಿ

File Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮೊಬೈಲ್, ಇಂಟರ್’ನೆಟ್, ಫೇಸ್’ಬುಕ್, ವಾಟ್ಸಪ್ ಸೇರಿದಂತೆ ತಂತ್ರಜ್ಞಾನದ ಮಾಯೆಯೇ ಇಂದಿನ ಮಕ್ಕಳಲ್ಲಿ ಆವರಿಸಿಕೊಂಡಿರುವ ಸಂದರ್ಭದಲ್ಲಿ ಇವೆಲ್ಲಕ್ಕೂ ಅಪವಾದ ಎಂಬಂತೆ ದೇಶಭಕ್ತಿ, ಕಲೆಯನ್ನೇ ಉಸಿರಾಗಿಸಿಕೊಂಡ ಹಾರಿಕಾ ಮಂಜುನಾಥ್ ಎಂಬ ಬಾಲೆ ಇಂದಿನ ಲೇಖನದ ಕೇಂದ್ರ ಬಿಂದು.

ಬೆಂಗಳೂರಿನ ಜೆಪಿ ನಗರದ ನಿವಾಸಿ ಆಟೋ ಚಾಲಕರಾಗಿರುವ ಮಂಜುನಾಥ್ ಹಾಗೂ ಗೃಹಿಣಿ ರುಕ್ಮಿಣಿ ದಂಪತಿಗಳ ಪುತ್ರಿ ಹಾರಿಕಾ, ವಿದ್ಯಾಕಿರಣ ಪಬ್ಲಿಕ್ ಶಾಲೆಯಲ್ಲಿ 8ನೆಯ ತರಗತಿಯಲ್ಲಿ ಓದುತ್ತಿದ್ದಾಳೆ.

ಈಕೆ ಐದು ವರ್ಷದವಳಿರುವಾಗಲೇ ರಾಜೀವ್ ದೀಕ್ಷಿತ್ ಸೇರಿದಂತೆ ಹಲವು ರಾಷ್ಟ್ರ ನಾಯಕರ ಭಾಷಣಗಳನ್ನು ಗಮನವಿಟ್ಟು ಆಲಿಸುತ್ತಿದ್ದಳು. ಜೊತೆಯಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಸೋದರಿ ನಿವೇದಿತಾ ಅವರಂತಹವರ ಭಾವಚಿತ್ರಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದಳು. ಇದನ್ನು ಗಮನಿಸಿದ ಇವಳ ಪೋಷಕರು ಈಕೆಯ ಆಸಕ್ತಿಗೆ ನೀರೆರೆದು ಪೋಷಿಸಲು ಆರಂಭಿಸಿದರು.


5ನೆಯ ತರಗತಿಯಲ್ಲಿದ್ದಾಗ ಸುಮ್ಮನೆ ಸ್ವಾತಂತ್ರ ಬರಲಿಲ್ಲ ಎಂಬ ವಿಚಾರದ ಬಗ್ಗೆ ಈಕೆ ಮಾತನಾಡಿದ ನಂತರ ಇವಳ ಪ್ರತಿಭೆಯ ತಾಕತ್ತು ಅನಾವರಣಗೊಂಡಿತ್ತು. ಇದನ್ನು ಗಮನಿಸಿದ ರಾಮಕೃಷ್ಣಾಶ್ರಮದ ಮಂಗಳಾನಂದರು, ತುಮಕೂರಿನ ವೀರೇಶಾನಂದರು ಹಾಗೂ ಧಾರವಾಡದ ವಿಜಯಾನಂದ ಸರಸ್ವತಿ ಸ್ವಾಮಿಗಳು ಈಕೆಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಅಲ್ಲಿಂದ ಆರಂಭವಾದ ಈಕೆಯ ಭಾಷಣದ ಪಯಣ, ಶಿವಮೊಗ್ಗ, ಕೊಪ್ಪಳ, ಹಾಸನ, ದೊಡ್ಡಬಳ್ಳಾಪುರ, ಯಾದಗಿರಿ, ಕುಂದಾಪುರ, ಬಾಗಲಕೋಟೆ, ರಾಮದುರ್ಗ, ಬೆಳಗಾವಿ, ಧಾರವಾಡಗಳಲ್ಲಿ ಸಾಗಿದ್ದು, ಶಿವರಾತ್ರಿಯ ಅಂಗವಾಗಿ ಭದ್ರಾವತಿಯಲ್ಲಿನ ಕಾರ್ಯಕ್ರಮಕ್ಕೆ ಫೆ.21ರಂದು ಆಗಮಿಸುತ್ತಿದ್ದಾಳೆ.

ಈವರೆಗೂ ಸುಮಾರು 200 ಶಾಲಾ ಕಾರ್ಯಕ್ರಮ ಹಾಗೂ 100ಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡಿ, ದೇಶ ಭಕ್ತರ ಮನಗೆದ್ದಿದ್ದಾಳೆ.


2016ರಲ್ಲಿ ನೋಟು ರದ್ದತಿಯಾದ ನಂತರ ಕೇಂದ್ರ ಸರ್ಕಾರ ಕ್ಯಾಶ್’ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡಿ, ಪ್ರೋತ್ಸಾಹ ನೀಡಿತು. ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ಕೊಂಚ ತೊಂದರೆಯೂ ಸಹ ಆಗಿತ್ತು. ಈ ವೇಳೆ ಯುಪಿಐ ಆಪ್ ಮೂಲಕ ಅಂದರೆ ಡಿಜಿಟಲ್ ವ್ಯವಹಾರ ಹಾಗೂ ಅದರ ಉಪಯೋಗ ಕುರಿತಾಗಿ ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ ಹಾಗೂ ಸಣ್ಣ ವ್ಯಾಪಾರಸ್ತರ ಬಳಿ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದಳು. ಈ ವೇಳೆ ಕ್ಯಾಶ್’ಲೆಸ್ ಕುರಿತಾಗಿ ಜಾಗೃತಿ ಮೂಡಿಸಿದ ಈಕೆಯ ಸಾಧನೆ ಕೇಂದ್ರ ಸರ್ಕಾರವನ್ನು ತಲುಪಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈಕೆಯ ಸಾಧನೆಯನ್ನು ಕೊಂಡಾಡಿ ಟ್ವೀಟ್ ಮಾಡಿದ ನಂತರ ಹಾರಿಕಾ ದೇಶಕ್ಕೇ ಪರಿಚಯಗೊಂಡಳು.

ಇನ್ನು, ಹಾರಿಕಾಳ ಸಾಧನೆಯನ್ನು ಗಮನಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವತಃ ಈಕೆಯನ್ನು ಭೇಟಿಯಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಯುವ ವಾಗ್ಮಿಯಾಗಿರುವ ಈಕೆ, ನಾಟಕ, ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಜೊತೆಯಲ್ಲಿ ಖ್ಯಾತ ಯೋಗಪಟುವೂ ಸಹ ಆಗಿದ್ದಾಳೆ. ಈಕೆ ಚನ್ನಪಟ್ಟಣದ ಯೋಗ ಗುರುಗಳಾದ ಸಮೀಕ್ಷಾ ಅವರಲ್ಲಿ ಯೋಗ ತರಬೇತಿ ಪಡೆದಿದ್ದಾರೆ. ಇವೆಲ್ಲ ಪ್ರತಿಭೆಗಳೊಂದಿಗೆ ಶಾಲೆಯಲ್ಲೂ ಸಹ ಈಕೆ ಓದಿನಲ್ಲಿ ಮುಂದಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಹಂಬಲ ಹೊಂದಿದ್ದಾಳೆ.

ಬೆಳಗಾವಿ ನೆರೆ ಪ್ರವಾಹ ಸಂದರ್ಭದಲ್ಲಿ ವಸ್ತುಗಳನ್ನು 2 ಲಾರಿಯಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗಿ ತಲುಪಿಸಿ ಮೂರು ದಿನಗಳ ಕಾಲ ಅಲ್ಲಿ ಇದು ಕೆಲಸ ಮಾಡಿದ್ದಾಳೆ ಈ ಸೋದರಿ.

ಮಂಗಳೂರಿನ ಜಪ್ಪಿನಮೊಗರು ನಿವಾಸಿ ಆಟೋ ಚಾಲಕ ಸುರೇಶ್ ಬಂಗೇರ ಅವರ ಎಂಟು ವರ್ಷದ ಪುತ್ರಿ ಮನ್ವಿತಾಗೆ ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಅಗತ್ಯವಾಗಿತ್ತು. ಈ ವಿಚಾರ ತಿಳಿದ ಹಾರಿಕಾ ತನಗೆ ಗೌರವಧನದ ರೂಪದಲ್ಲಿ ಬಂದಿದ್ದ 5000 ಸಾವಿರ ರೂ.ಗಳನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಳು.

ಕನ್ನಡ, ಇಂಗ್ಲೀಷ್, ಮರಾಠಿ ಪತ್ರಿಕೆಗಳಲ್ಲಿ ಈಕೆಯ ಸಾಧನೆ ಕುರಿತು ಲೇಖನಗಳು ಪ್ರಕಟವಾಗಿದ್ದು, ಹಲವು ದೃಶ್ಯ ಮಾಧ್ಯಮಗಳಲ್ಲಿ ಇವರ ಸಂದರ್ಶನವೂ ಸಹ ಬಿತ್ತರಗೊಂಡಿದೆ.

ಈಕೆಯ ಸಾಧನೆ ಗುರುತಿಸಿ ಯುವ ಸಾಮ್ರಾಜ್ಯ ತಂಡದಿಂದ ಯುವ ನಕ್ಷತ್ರ ಹಾಗೂ ಮಠದಿಂದ ವರ್ತೂರ ಶ್ರೀ ಪ್ರಶಸ್ತಿ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.


ಈಕೆಯ ದೇಶ ಭಕ್ತಿ, ಜ್ಞಾನ ಸಂಪತ್ತು, ವಾಕ್ಛಾತುರ್ಯ ಹಾಗೂ ಸಮಾಜ ಸೇವೆಯ ಗುಣ ಕೇವಲ ಮಕ್ಕಳಿಗೆ ಮಾತ್ರವಲ್ಲ ಇಡಿಯ ದೇಶಕ್ಕೇ ಮಾದರಿಯಾಗಿದೆ. ಹಾರಿಕಾಳ ಸೇವಾ ಕಾರ್ಯ, ಸಾಧನೆ ಮುಗಿಲೆತ್ತರಕ್ಕೆ ಹಾರಲಿ, ಈಕೆ ಕನಸು ಕಂಡಂತೆ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವಂತಾಗಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.

ಲೇಖನ: ಎಸ್.ಆರ್. ಅನಿರುದ್ಧ ವಸಿಷ್ಠ

Get in Touch With Us info@kalpa.news Whatsapp: 9481252093

Tags: Cashless TransactionHarika ManjunathKalpaNewsDigitalMediaKannada News WebsiteLatestNewsKannadaNirmala SitharamanPM Narendra ModiYoung Oratorಎಸ್.ಆರ್. ಅನಿರುದ್ಧ ವಸಿಷ್ಠದೇಶಭಕ್ತಿಯುವ ವಾಗ್ಮಿಸ್ವಾಮಿ ವಿವೇಕಾನಂದಹಾರಿಕಾ ಮಂಜುನಾಥ್
Share212Tweet123Send
Previous Post

ಹಣದಾಸೆಗೆ ಬೀಳದೇ ಶ್ರಮಿಸಿದ ಸಹಕಾರ ಸಾರಿಗೆ ನೌಕರರನ್ನು ದಯನೀಯ ಸ್ಥಿತಿಯಿಂದ ಹೊರತನ್ನಿ

Next Post

ಸಿಎಎ ವಿರೋಧಿಸುವ ಭರದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದ ಅಮೂಲ್ಯ ಅಂದರ್!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಿಎಎ ವಿರೋಧಿಸುವ ಭರದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದ ಅಮೂಲ್ಯ ಅಂದರ್!

ಸಿಎಎ ವಿರೋಧಿಸುವ ಭರದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದ ಅಮೂಲ್ಯ ಅಂದರ್!

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕುಂಸಿಯ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | ಕಾರಣವೇನು?

January 22, 2026
ಶ್ರೀ ಮದ್ವನವಮಿ | ಜ27ರಂದು ವಿ. ಅಶೋಕಾಚಾರ್ಯ ಜೋಶಿ ಇವರಿಂದ ಉಪನ್ಯಾಸ

ಶ್ರೀ ಮದ್ವನವಮಿ | ಜ27ರಂದು ವಿ. ಅಶೋಕಾಚಾರ್ಯ ಜೋಶಿ ಇವರಿಂದ ಉಪನ್ಯಾಸ

January 26, 2026
ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

January 26, 2026
ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

January 26, 2026
ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

January 26, 2026
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

January 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL