No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Friday, February 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಎಲ್ಲರಂತಲ್ಲಾ ನಮ್ಮ ಉಡುಪಿ ಶಾಸಕರು: ರಘುಪತಿ ಭಟ್ ಇಷ್ಟವಾಗಲು ಇಲ್ಲಿವೆ ಕಾರಣಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 13, 2019
in ಉಡುಪಿ
0
ಎಲ್ಲರಂತಲ್ಲಾ ನಮ್ಮ ಉಡುಪಿ ಶಾಸಕರು: ರಘುಪತಿ ಭಟ್ ಇಷ್ಟವಾಗಲು ಇಲ್ಲಿವೆ ಕಾರಣಗಳು
Share on FacebookShare on TwitterShare on WhatsApp

ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಆಯ್ಕೆಯಾಗುವ ಜನಪ್ರತಿನಿಧಿಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಮುಕ್ತಾಯವಾದ ನಂತರ ಜನರಿಂದಲೇ ದೂರವಾಗುವವರೇ ಅಧಿಕ. ಹೀಗಿರುವಾಗ ನಮ್ಮ ಉಡುಪಿಯ ಶಾಸಕ ರಘುಪತಿ ಭಟ್ರು ಜನರಿಗೆ ಇಷ್ಟವಾಗಲು ಕೆಲವೊಂದು ಕಾರಣಗಳನ್ನು ಕೊಡುತ್ತೇನೆ ಕೇಳಿ ಎಂಬ ಲೇಖನವೊಂದನ್ನು ಉಡುಪಿಯ ಗೌರೀಶ್ ಆವರ್ಸೆ ಅವರು ಬರೆದಿದ್ದಾರೆ… ಮುಂದೆ ಓದಿ…:

ಸೂರಾಲಿಗೆ ಹೋಗುವ ಮಾರ್ಗದಲ್ಲಿ ಸಿಗುವ ಕರ್ಜೆ ಗ್ರಾಮದಲ್ಲಿ ಇರುವ ಕಡಂಗೂಡು ನಿವಾಸಿ ಸರಸಜ್ಜಿಯ ಕಂಬನಿಯ ಕಥೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದಂತೆ ಮನೆಯ ಹಿರಿಯ ಮಗನಂತೆ ಅದೇ ದಿನ ಸಂಜೆ ಎಲ್ಲರಿಗಿಂತ ಮೊದಲು ಸಹಾಯಕ್ಕೆ ನಿಂತಿದ್ದು ಇದೆ ರಘುಪತಿ ಭಟ್ರು. ಸರಸಜ್ಜಿಗೆ ಸೂರು ಕಲ್ಪಿಸಿಕೊಟ್ಟ ಹೆಮ್ಮೆ ನಮ್ಮ ಶಾಸಕರದ್ದು.

ಮರಳಿನ ಸಮಸ್ಯೆ ಇದು ಕೇವಲ ಉಡುಪಿ ವಿಧಾನಸಭಾ ಕ್ಷೇತ್ರದ ಸಮಸ್ಯೆಯಲ್ಲ. ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಮರಳಿನ ಸಮಸ್ಯೆ ಇದೆ. ಅದರೆ ಕೊಟ್ಟ ಮಾತಿನಂತೆ ಹೇಗಾದರೂ ಮಾಡಿ ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತನ್ನ ಬೆಂಬಲಿಗರೊಂದಿಗೆ ನಡುರಾತ್ರಿ ಉಡುಪಿ ಡಿಸಿ ಕಛೇರಿ ಮುಂದೆ ತಾನೊಬ್ಬ ಶಾಸಕ ಎನ್ನುವುದನ್ನು ಬದಿಗಿಟ್ಟು ಒಂದು ವಾರ ಹಗಲು-ರಾತ್ರಿ ಎನ್ನದೇ ಧರಣಿಗೆ ಕುಳಿತದ್ದು ಇದೆ ರಘುಪತಿ ಭಟ್ರು.


ಭಟ್ರು ಧರಣಿಗೆ ಕುಳಿತಾಗ ದೀಪಾವಳಿ ಹಬ್ಬದ ಸಮಯವಾಗಿತ್ತು. ನಾನು ಭಟ್ರ ಹತ್ತಿರ ಹೇಳ್ದೆ-ದೀಪಾವಳಿ ಹಬ್ಬ ಬೇರೆ ಇದೆ, ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಬೆಲೆ ಕೊಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಬಾರಿ ದೀಪಾವಳಿ ಹಬ್ಬ ಆಚರಣೆ ಮಾಡುವುದಕ್ಕೆ ಸಾಧ್ಯವಾಗಲ್ವೇನೋ ಅಂತ. ಅದಕ್ಕೆ ರಘುಪತಿ ಭಟ್ರು ಹೇಳಿದ್ದೇನು ಗೊತ್ತಾ? ದೀಪಾವಳಿ ಹಬ್ಬ ಮುಂದಿನ ವರ್ಷ ಆಚರಣೆ ಮಾಡಬಹುದು. ಈ ಮರಳನ್ನೇ ನಂಬಿಕೊಂಡು ಮನೆ ಒಕ್ಕಲಿಗೆ ದಿನ ಇಟ್ಟವರು ಮುಂದಿನ ವರ್ಷಕ್ಕೆ ಮುಂದೂಡಲು ಆಗುತ್ತಾ ಅಂತ ಕೇಳಿದ್ರು. ಈ ಒಂದೇ ಒಂದು ಮಾತು ಸಾಕು ಅಲ್ವಾ ನಮ್ ಭಟ್ರ ವ್ಯಕ್ತಿತ್ವ ಹೇಗೆ ಅಂತ ಹೇಳುವುದಕ್ಕೆ??

ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರೆಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರು ಕಾಣೆಯಾದಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಡವನ್ನು ಹೇರಲು ಒಂದು ಲಕ್ಷಕ್ಕೂ ಅಧಿಕ ಮೀನುಗಾರರನ್ನು ಸೇರಿಸಿ ಮಲ್ಪೆಯಲ್ಲಿ ಬೃಹತ್ ಮೀನುಗಾರರ ಸಮಾವೇಶವನ್ನು ಮಾಡಿದ್ದು ಇದೆ ರಘುಪತಿ ಭಟ್ರು.


ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ 4 ತಿಂಗಳಾದರೂ ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇದ್ದಾಗ ಕೇಂದ್ರ ರಕ್ಷಣಾ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರ ಮೂಲಕ ಒತ್ತಡವನ್ನು ಹೇರಿ ನೌಕಾದಳದೊಂದಿಗೆ ಸ್ವತಃ ರಘುಪತಿ ಭಟ್ ಅವರೇ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮುಳುಗಿದ ಸುವರ್ಣ ತ್ರಿಭುಜ ಬೋಟ್’ನ ಅವಶೇಷಗಳನ್ನು ಪತ್ತೆ ಹಚ್ಚಿದ್ದು ಇದೆ ರಘುಪತಿ ಭಟ್ರ ನೇತೃತ್ವದಲ್ಲಿ. ಉಡುಪಿಯಲ್ಲಿ ಯಾರಿಗೆ ಅನ್ಯಾಯವಾದರೂ ಮೊದಲು ಸಹಾಯಕ್ಕೆ ನಿಲ್ಲುವುದು ನಮ್ಮ ಶಾಸಕರಾದ ರಘುಪತಿ ಭಟ್ರು ಮಾತ್ರ.

ಮೊನ್ನೆ-ಮೊನ್ನೆ ರಾಜ್ಯ ಮೈತ್ರಿ ಸರ್ಕಾರದ ಕುಮ್ಮಕ್ಕಿನಿಂದ ನನ್ನ ಸ್ನೇಹಿತ ಅಜಿತ್ ಶೆಟ್ಟಿ ಹೆರಂಜೆ ಬಂಧನವಾದಾಗ ಕರಾವಳಿ ಹುಡುಗರ ತಂಟೆಗೆ ಬಂದರೆ ಎಚ್ಚರ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದು ಇದೆ ನಮ್ಮ ಶಾಸಕರು.


ಉಡುಪಿಯಲ್ಲಿ ಈ ಬಾರಿ ನೀರಿಗೆ ಬಹಳ ತೊಂದರೆಯಾಗಿದೆ. ನಗರಸಭೆಯ ವಾರ್ಡುಗಳಿಗೆ ಹಾಗೂ ಹತ್ತಿರದ ಗ್ರಾಮಗಳಿಗೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಬಜೆ ಡ್ಯಾಮ್’ಗೆ ಹರಿದು ಬರುತ್ತಿದ್ದ ನೀರಿನ ಮಾರ್ಗ ಹೂಳು ಹಾಗೂ ಕಲ್ಲುಗಳಿಂದ ಮುಚ್ಚಿ ಹೋಗಿತ್ತು. ಜನರ ನೀರಿನ ಹಾಹಾಕಾರವನ್ನು ನೋಡಿದ ರಘುಪತಿ ಭಟ್ರು ನಗರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ನದಿಯಿಂದ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದರು. ಕಾರ್ಯಕರ್ತರ ಸತತ ಮೂರೂ ದಿನಗಳ ಶ್ರಮದಾನದ ಫಲವಾಗಿ ನೀರು ಸರಾಗವಾಗಿ ಹರಿದು ಬರುತ್ತಿದೆ.


ಒಬ್ಬ ಶಾಸಕನಾಗಿ ಚಡ್ಡಿ ಬನಿಯನ್ ಹಾಕಿ ಮೇ ತಿಂಗಳ ಬಿರು ಬಿಸಿಲಿನಲ್ಲಿ ಕಾರ್ಯಕರ್ತರ ಜೊತೆ ನದಿಯಲ್ಲಿರುವ ಹೂಳೆತ್ತುತ್ತಾರೆ ಅಂದರೆ ಒಮ್ಮೆ ಯೋಚನೆ ಮಾಡಿ ಸ್ನೇಹಿತರೆ ನಮ್ಮ ಶಾಸಕರು ಇತರ ಶಾಸಕರಿಗಿಂತ ಎಷ್ಟು ಭಿನ್ನ ಅಂತ? ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಜನರ ನೋವಿಗೆ ಸ್ಪಂದಿಸುವ ಶಾಸಕರನ್ನು ನಾನೆಂದು ನೋಡಿಲ್ಲ.

ರಘುಪತಿ ಭಟ್ ಅವರು ಶಾಸಕರಾಗಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೆ ನಮ್ಮ ಉಡುಪಿ ಮಾದರಿ ಜೆಲ್ಲೆಯಾಗುತಿದ್ದುದರಲ್ಲಿ ಸಂಶಯವಿಲ್ಲ. ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ರಘುಪತಿ ಭಟ್ ಅವರಂತ ಮಾಸ್ ಹಾಗೂ ಕ್ಲಾಸ್ ಲೀಡರ್ ಅತ್ಯಾವಶ್ಯಕ. ಒಟ್ಟಾರೆ ಹೇಳಬೇಕೆಂದರೆ ಎಲ್ಲರಂತಲ್ಲ ನಮ್ಮ ಶಾಸಕರು…

ಲೇಖನ: ಗೌರೀಶ್ ಆವರ್ಸೆ

Tags: BJPCostal NewsKannada NewsRaghupati Bhat MLASpecial ArticleUdupiUdupi MLAಉಡುಪಿಕರಾವಳಿ ಸುದ್ಧಿಜನಪ್ರತಿನಿಧಿಮರಳಿನ ಸಮಸ್ಯೆಶಾಸಕ ರಘುಪತಿ ಭಟ್
Share231Tweet123Send
Previous Post

ಶಿವಮೊಗ್ಗ: ಸೂಡೂರು ಬಳಿ ರೈಲ್ವೆ ಗೇಟ್’ಗೆ ಬೈಕ್ ಡಿಕ್ಕಿ, ಸವಾರ ಧಾರುಣ ಸಾವು

Next Post

ವಿಐಎಸ್‍ಎಲ್‍ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀನಿವಾಸ ರಾವ್ ಅಧಿಕಾರ ಸ್ವೀಕಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಿಐಎಸ್‍ಎಲ್‍ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀನಿವಾಸ ರಾವ್ ಅಧಿಕಾರ ಸ್ವೀಕಾರ

ವಿಐಎಸ್‍ಎಲ್‍ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀನಿವಾಸ ರಾವ್ ಅಧಿಕಾರ ಸ್ವೀಕಾರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಚಾಮರಾಜನಗರ | ಡಾ. ರಾಜ್ ಒಡನಾಡಿ ಕೃಷ್ಣ ಟಾಕೀಸ್ ಚಂದ್ರಣ್ಣರವರಿಗೆ ಗೌರವ ಸನ್ಮಾನ

ಚಾಮರಾಜನಗರ | ಡಾ. ರಾಜ್ ಒಡನಾಡಿ ಕೃಷ್ಣ ಟಾಕೀಸ್ ಚಂದ್ರಣ್ಣರವರಿಗೆ ಗೌರವ ಸನ್ಮಾನ

February 27, 2026
40 ಗ್ರೀನ್ ಹೈಡ್ರೋಜನ್ ಚಾಲಿತ ಹೆವಿ ಡ್ಯೂಟಿ ಟ್ರಕ್‌’ಗಳ ನಿಯೋಜನೆಗೆ ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರದ ಜೊತೆ ಎಂಓಯುಗೆ ಸಹಿ ಹಾಕಿದ ಟಾಟಾ ಮೋಟಾರ್ಸ್‌

40 ಗ್ರೀನ್ ಹೈಡ್ರೋಜನ್ ಚಾಲಿತ ಹೆವಿ ಡ್ಯೂಟಿ ಟ್ರಕ್‌’ಗಳ ನಿಯೋಜನೆಗೆ ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರದ ಜೊತೆ ಎಂಓಯುಗೆ ಸಹಿ ಹಾಕಿದ ಟಾಟಾ ಮೋಟಾರ್ಸ್‌

February 27, 2026
ಪ್ರಧಾನ ಮಠದ ಪುನರ್ ನಿರ್ಮಾಣ ಸಹಸ್ರಮಾನದ ಕಾರ್ಯ: ರಾಘವೇಶ್ವರ ಶ್ರೀ

ಪ್ರಧಾನ ಮಠದ ಪುನರ್ ನಿರ್ಮಾಣ ಸಹಸ್ರಮಾನದ ಕಾರ್ಯ: ರಾಘವೇಶ್ವರ ಶ್ರೀ

February 27, 2026
ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಧಕರ ಪರಿಚಯ ಅತ್ಯಗತ್ಯ: ಡಾ. ಶ್ರೀನಿವಾಸ್ ಅಭಿಪ್ರಾಯ

ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಧಕರ ಪರಿಚಯ ಅತ್ಯಗತ್ಯ: ಡಾ. ಶ್ರೀನಿವಾಸ್ ಅಭಿಪ್ರಾಯ

February 27, 2026
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಮಂತ್ರಿಯವರ ಅವಹೇಳನ ಹಿನ್ನೆಲೆ: ದೂರು ದಾಖಲು

February 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL