Thursday, August 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಆನಂದಕಂದ ಲೇಖನ ಮಾಲಿಕೆ | ಅಯೋಧ್ಯಾವರ್ಣನೆ

August 14, 2025
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-30  |ಆದಿಕಾವ್ಯವಾದ ರಾಮಾಯಣದಲ್ಲಿ ಶ್ರೀರಾಮನು ಬೆಳೆದ, ವಿದ್ಯಾಭ್ಯಾಸ ಮಾಡಿದ, ರಾಜ್ಯವಾಳಿದ ಕೋಸಲದೇಶದ ರಾಜಧಾನಿ ಅಯೋಧ್ಯೆ. ಇದರ ಇತಿಹಾಸ, ನಗರವ್ಯವಸ್ಥೆ, ಇಲ್ಲಿಯ ಜನರ ಜೀವನಪದ್ಧತಿ, ಮನಃಸ್ಥಿತಿ ಇವೆಲ್ಲವನ್ನೂ ಲವ-ಕುಶರು ವಾಲ್ಮೀಕೀಯರಾಮಾಯಣ ಬಾಲಕಾಂಡದ ೫, ೬ ಹಾಗೂ ೭ನೇ ಸರ್ಗಗಳಲ್ಲಿ ವರ್ಣಿಸಿರುವರು.

ಇತಿಹಾಸ
ಈ ಅಯೋಧ್ಯೆ ಕೋಸಲದೇಶದ ನಗರಿ. ಪ್ರಜಾಪತಿಯೇ ರಾಜ್ಯವಾಳಿದ ಈ ಕೋಸಲ, ಮುಂದೆ ಇಕ್ಷ್ವಾಕುವಂಶದ ರಾಜರಿಗೆ ಸೇರಿತು. ತನ್ನ ೬೦ ಸಾವಿರ ಮಕ್ಕಳಿಂದ ಸಮುದ್ರ ತೋಡಿಸಿದ ಸಗರ, ಗಂಗೆ ಇಳಿಸಿದ ಭಗೀರಥ ಇಲ್ಲಿನ ಪ್ರಮುಖ ರಾಜರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ರಾಮಾಯಣದ ಬಹುಭಾಗ ನಡೆದಿದ್ದು ಇಲ್ಲೇ-
‘ಇಕ್ಷ್ವಾಕೂಣಾಮಿದಂ ತೇಷಾಂ ರಾಜ್ಞಾಂ ವಂಶೇ ಮಹಾತ್ಮನಾಮ್ |
ಮಹದುತ್ಪನ್ನಮಾಖ್ಯಾನಂ ರಾಮಾಯಣಮಿತಿ ಶ್ರುತಮ್ ||ಬಾಲ.೫.೩||’
ಈ ನಗರಿ ಸ್ವತಃ ವೈವಸ್ವತ ಮನುವೇ ನಿರ್ಮಿಸಿದ್ದು. ಇಲ್ಲಿ ಮುಂದೆ ಬಂದ ರಾಜರೆಲ್ಲರೂ ಮನುವಿನಂತೆಯೇ ಸಮೃದ್ಧವಾಗಿ ರಾಜ್ಯವಾಳಿದರು.

ಭೌಗೋಲಿಕ ದೃಷ್ಟಿ
ರಾಮಾಯಣಕಾಲದಲ್ಲೂ, ಈಗಲೂ, ಅಯೋಧ್ಯಾನಗರಿಯು ಸರಯೂನದಿಯ ತೀರದಲ್ಲಿದೆ. ಪ್ರಕೃತ ಈ ನಗರಿ ರಾಮಾಯಣಕಾಲದಲ್ಲಿದ್ದ ರೀತಿ ವಿಶಾಲವಾಗಿಲ್ಲ. ವಾಲ್ಮೀಕಿಗಳು ಅಯೋಧ್ಯೆಯು ೧೨ ಯೋಜನ ಉದ್ದ, ೩ ಯೋಜನ ಅಗಲ ಇದೆ ಎಂದು ವರ್ಣಿಸಿದ್ದರೂ, ನಮಗೆ ಯೋಜನಪರಿಮಾಣ ಅಸ್ಪಷ್ಟವಾಗಿಯೇ ಕಾಣುತ್ತದೆ.
ಪ್ರಮುಖ ಸ್ಥಳಗಳು
ಲವಕುಶರು ಅಯೋಧ್ಯೆಯಲ್ಲಿ ಮೊದಲು ವರ್ಣಿಸಿದ್ದೇ ಅರಮನೆಗೆ ದಾರಿಯಾದ ರಾಜಮಾರ್ಗ. ಈ ರಾಜಮಾರ್ಗ ರಥಗಳ ಸಂಚಾರಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಅದರ ಮಧ್ಯಕ್ಕೆ ಸಾಲವೃಕ್ಷಗಳು (ಇಂದಿನ ‘ಡಿವೈಡರ್’ ನಂತೆ) ಇದ್ದವು. ಅಲ್ಲಲ್ಲಿ ಅರಳಿದ ಹೂವುಗಳು ಎರಚಲ್ಪಟ್ಟಿದ್ದವು.
ಅಯೋಧ್ಯೆಯಲ್ಲಿ ನಾಟಕ, ನೃತ್ಯಗಳಿಗೆ ಪ್ರತ್ಯೇಕವಾದ ಮಂಚಗಳು ಅಲ್ಲಲ್ಲಿ ಇದ್ದವು. ನಗರಿಯ ಮಹಾದ್ವಾರ ಹಾಗೂ ಉಪದ್ವಾರಗಳಿಗೆ ತೋರಣಗಳು ಕಟ್ಟಲಾಗಿತ್ತು. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಮಾವಿನ ತೋಪುಗಳು, ಉದ್ಯಾನಗಳು ಇದ್ದವು. ಅಲ್ಲಿನ ಎಲ್ಲ ಮನೆಗಳೂ ರತ್ನಖಚಿತವಾದ ಗೋಪುರ-ಧ್ವಜಗಳುಳ್ಳ ಮಹಡಿಮನೆಗಳು. ಅಲ್ಲಲ್ಲಿ ಜೂಜು ಅಡ್ಡೆಗಳೂ ಇದ್ದವು.

ಜನಸಂಕುಲ
ಅಯೋಧ್ಯೆಯ ಪ್ರಜೆಗಳೆಲ್ಲರೂ ಆಸ್ತಿಕರು. ಅವರನ್ನು ಕುಂಡಲಿಗಳು ಮುಕುಟಿಗಳು ಎಂದು ವರ್ಣಿಸಿದ್ದಾರೆ. ಈ ಅಯೋಧ್ಯೆಗೆ ಬೇರೆ ದೇಶಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಆದ್ದರಿಂದ ಸಾಮಾನ್ಯರ ಧನಸಂಪತ್ತೂ ಎಷ್ಟು ಮಹತ್ತರವಾಗಿತ್ತು ಎಂದು ಊಹಿಸಬಹುದು. ಅವರು ಕೇವಲ ಲೋಭರಹಿತ ಧನಿಕರಷ್ಟೇ ಅಲ್ಲದೇ ದಾನಿಗಳು, ಅತಿಥಿಪೂಜಕರೂ ಆಗಿದ್ದರು. ಹಾಗೆಯೇ ದೀರ್ಘಾಯುಗಳು, ಗೋ-ಅಶ್ವಗಳ ಸಂಪತ್ತುಳ್ಳವರು ಆಗಿದ್ದರು.
ಅಯೋಧ್ಯೆಯ ಬ್ರಾಹ್ಮಣರೆಲ್ಲರೂ ಮಹರ್ಷಿಗಳಂತೆ ತೇಜಸ್ವಿಗಳಾಗಿದ್ದರು. ವೇದ-ವೇದಾಂಗ ಜ್ಞಾನಿಗಳೂ, ಅಗ್ನಿಹೋತ್ರಿಗಳೂ ಆಗಿದ್ದರು-
‘ತಾಮಗ್ನಿಮದ್ಭಿರ್ಗುಣವದ್ಭಿರಾವೃತಾಂ
ದ್ವಿಜೋತ್ತಮೈರ್ವೇದಷಡಂಗಪಾರಗೈಃ |
ಸಹಸ್ರದೈಃ ಸತ್ಯರತೈರ್ಮಹಾತ್ಮಭಿ-
ರ್ಮಹರ್ಷಿಕಲ್ಪೈ ಋಷಿಭಿಶ್ಚ ಕೇವಲೈಃ ||ಬಾಲ.೫.೨೩||
ರಕ್ಷಣಾ ವ್ಯವಸ್ಥೆ
ಅಯೋಧ್ಯೆಯ ಸುತ್ತಲೂ ದಾಟಲಾಗದ ದೊಡ್ಡ ಕೋಟೆ ಇತ್ತು. ಅದರ ಮುಂದೆ ದೊಡ್ಡ ಆಳವಾದ ಜಲದುರ್ಗ ಇತ್ತು. ಆ ಕೋಟೆಯೊಳಗೆ ೧೦೦ ಶತಘ್ನೀ(ಒಮ್ಮೆಯೇ ೧೦೦ ಜನರನ್ನು ಕೊಲ್ಲುವ ವಿಶಿಷ್ಟ ಆಯುಧ)ಗಳು ಇದ್ದವು.

ಅಲ್ಲಿನ ಯೋಧರೆಲ್ಲರೂ ತಮ್ಮವರನ್ನು, ಶತ್ರುಪಕ್ಷದವರನ್ನು ಸರಿಯಾಗಿ ವಿವೇಚಿಸಿ ಶಸ್ತ್ರ ಹೂಡುತ್ತಿದ್ದರು. ಅವರಲ್ಲಿ ಶಬ್ದವೇಧ್ಯವು ಅತಿಸಾಮಾನ್ಯವಾಗಿತ್ತು.

ಈ ನಗರಿಯಲ್ಲಿ ಕಾಂಬೋಜ, ಬಾಹ್ಲೀಕ, ವನಾಯು, ಸಿಂಧು ಮೊದಲಾದ ದೇಶಗಳಿಂದ ಬಂದ ಅತಿವೇಗವಾದ ಯುದ್ಧಕ್ಕೆ ಉಪಯುಕ್ತವಾದ ಕುದುರೆಗಳು, ವಿಂಧ್ಯ (ಭದ್ರ), ಹಿಮಾಲಯ (ಮಂದ್ರ), ಸಹ್ಯ (ಮೃಗ) ಮೊದಲಾದ ಪರ್ವತಪ್ರದೇಶದಿಂದ ತರಲ್ಪಟ್ಟ ಬಲಿಷ್ಠರಾದ ನಿತ್ಯಮತ್ತರಾದ ಆನೆಗಳ ಎಲ್ಲ ಜಾತಿ-ಉಪಜಾತಿಗಳೂ ಇದ್ದವು-
’ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ |
ಭದ್ರಮಂದ್ರೈರ್ಭದ್ರಮೃಗೈರ್ಮೃಗಮಂದ್ರೈಶ್ಚ ಸಾ ಪುರೀ ||ಬಾಲ.೬.೨೫||’

ರಾಜಪ್ರಕೃತಿ
ರಾಜನ ಅಮಾತ್ಯರ ಗುಂಪಿಗೆ ರಾಜಪ್ರಕೃತಿ ಎಂದು ಹೆಸರು. ಸಾಮಾನ್ಯತಃ ಮನುಸ್ಮೃತಿಯ ಪ್ರಕಾರ ೭ ಅಥವಾ ೮ ಅಮಾತ್ಯರಿದ್ದರೆ ಸೂಕ್ತ. ಇಲ್ಲಿನ ಅಮಾತ್ಯರು ಯಾವಕಾರಣಕ್ಕೂ ಸುಳ್ಳು ಹೇಳಿದವರಲ್ಲ. ಎಲ್ಲರೂ ಧರ್ಮಜ್ಞರು, ರಾಜಭಕ್ತಿಯುಳ್ಳವರೂ ಆಗಿದ್ದರು. ಅಮಾತ್ಯರು ಇಡೀ ದೇಶದ ವರ್ತಮಾನವನ್ನು ಗೂಢಚರರ ಮೂಲಕ ತಿಳಿದವರಾಗಿದ್ದರು.

ದಶರಥನ ಕಾಲದಲ್ಲಿ ೮ ಅಮಾತ್ಯರಿದ್ದರು. ಧೃಷ್ಟಿ, ಜಯಂತ, ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಕೋಪ, ಧರ್ಮಪಾಲ ಮತ್ತು ಸುಮಂತ್ರ. ಹೀಗೆಯೇ ದಶರಥನಿಗೆ ಇಬ್ಬರು ಋತ್ವಿಜರು- ವಸಿಷ್ಠ ಹಾಗೂ ವಾಮದೇವ. ಇನ್ನೂ ಕೆಲವರು ಪುರೋಹಿತರು- ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ, ಕಾತ್ಯಾಯನ.

ಹೀಗೆ ತಮ್ಮ ತಮ್ಮ ಅಮಾತ್ಯರಿಂದ ಸಲಹೆಯನ್ನು ಪಡೆಯುತ್ತಿದ್ದ ಕೋಸಲದ ರಾಜರು ಈ ಅಯೋಧ್ಯೆಯೆಂಬ ರಾಜಧಾನಿಯಲ್ಲಿ ಸಮೃದ್ಧವಾಗಿ ರಾಜ್ಯವಾಳುತ್ತಿದ್ದರು.

||ಶ್ರೀಕೃಷ್ಣಾರ್ಪಣಮಸ್ತು||

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

Tags: AnandakandaKannada News WebsiteLatest News KannadaRamayanaಅಯೋಧ್ಯೆಆದಿಕಾವ್ಯಆನಂದಕಂದಕೋಸಲದೇಶರಾಮಾಯಣಶ್ರೀರಾಮ
Previous Post

ಶಿವಮೊಗ್ಗ | ಗಣೇಶ ಕೂರಿಸುವವರೇ ಇಲ್ಲಿ ಗಮನಿಸಿ | ಇವುಗಳು ಕಡ್ಡಾಯ, ಇವುಗಳ ನಿಷೇಧ | ಇಲ್ಲಿದೆ ವಿವರ

Next Post

ಸತ್ತವರಿಗೂ ಡಯಾಲಿಸಿಸ್ ಬಿಲ್, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕ್ಷಿ ಸಮೇತ ಅವ್ಯವಸ್ಥೆ ಬಯಲು: ಡಿ.ಎಸ್. ಅರುಣ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸತ್ತವರಿಗೂ ಡಯಾಲಿಸಿಸ್ ಬಿಲ್, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕ್ಷಿ ಸಮೇತ ಅವ್ಯವಸ್ಥೆ ಬಯಲು: ಡಿ.ಎಸ್. ಅರುಣ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸತ್ತವರಿಗೂ ಡಯಾಲಿಸಿಸ್ ಬಿಲ್, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕ್ಷಿ ಸಮೇತ ಅವ್ಯವಸ್ಥೆ ಬಯಲು: ಡಿ.ಎಸ್. ಅರುಣ್

August 14, 2025

ಆನಂದಕಂದ ಲೇಖನ ಮಾಲಿಕೆ | ಅಯೋಧ್ಯಾವರ್ಣನೆ

August 14, 2025

ಶಿವಮೊಗ್ಗ | ಗಣೇಶ ಕೂರಿಸುವವರೇ ಇಲ್ಲಿ ಗಮನಿಸಿ | ಇವುಗಳು ಕಡ್ಡಾಯ, ಇವುಗಳ ನಿಷೇಧ | ಇಲ್ಲಿದೆ ವಿವರ

August 14, 2025

ಕಾರು ಬದಲಿಸಿ ಗುಪ್ತವಾಗಿ ಪತ್ನಿ ನಿವಾಸಕ್ಕೆ ದರ್ಶನ್ | ಬೆಂಬಿಡದೇ ತೆರಳಿ ಬಂಧಿಸಿದ ಪೊಲೀಸರು

August 14, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸತ್ತವರಿಗೂ ಡಯಾಲಿಸಿಸ್ ಬಿಲ್, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕ್ಷಿ ಸಮೇತ ಅವ್ಯವಸ್ಥೆ ಬಯಲು: ಡಿ.ಎಸ್. ಅರುಣ್

August 14, 2025

ಆನಂದಕಂದ ಲೇಖನ ಮಾಲಿಕೆ | ಅಯೋಧ್ಯಾವರ್ಣನೆ

August 14, 2025

ಶಿವಮೊಗ್ಗ | ಗಣೇಶ ಕೂರಿಸುವವರೇ ಇಲ್ಲಿ ಗಮನಿಸಿ | ಇವುಗಳು ಕಡ್ಡಾಯ, ಇವುಗಳ ನಿಷೇಧ | ಇಲ್ಲಿದೆ ವಿವರ

August 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!