ಕಲ್ಪ ಮೀಡಿಯಾ ಹೌಸ್ | ಬೇಲೂರು |
“ಬೇಲೂರು ಹಬ್ಬ – 2025” #Beluru Habba – 2025 ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಜನಮಿತ್ರ ಪತ್ರಿಕೆಯ ನಿವೃತ್ತ ಸಂಪಾದಕರು ಹಾಗೂ ಪ್ರಕಾಶಕರಾದ ಎಸ್. ಗಿರಿಜಾಶಂಕರ್ ಅವರು ಮಂಜುನಾಥ ಸೀತಾರಾಮ ಶಾಸ್ತ್ರಿ ಅವರು ರಚಿಸಿರುವ
ಪ್ಲಗ್, ಸ್ಕೂಪ್ & ಬಿಯಾಂಡ್’ ಬಿಡುಗಡೆಗೊಳಿಸಿ ಮಾತನಾಡಿದರು.
ತಮ್ಮ ಆಕರ್ಷಕ ಭಾಷಣದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಗಿರಿಜಾಶಂಕರ್ ಅವರ ಭಾಷಣವು ಅವರ ಪ್ರಬುದ್ಧ ಸಂವಹನ ಶೈಲಿಯಿಂದ ಹೆಚ್ಚು ಆಕರ್ಷಕವಾಗಿತ್ತು ಎಂದು ಸಭಿಕರು ಅಭಿಪ್ರಾಯಪಟ್ಟರು. ಅವರ ಮಾತುಗಳು ವಿಷಯದ ಆಳ ಮತ್ತು ಸ್ಪಷ್ಟತೆಯೊಂದಿಗೆ ಪ್ರೇಕ್ಷಕರನ್ನು ತಲುಪಿದವು.
ತಮ್ಮ ಭಾಷಣದ ಕೊನೆಯಲ್ಲಿ ಗಿರಿಜಾಶಂಕರ್ ಅವರು ವರಕವಿ ದ.ರಾ.ಬೇಂದ್ರೆ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾ, “ನಗುನಗುತ ಬಾಳೋಣ, ತುಸುನಗುತ ತೆರಳೋಣ” ಎಂಬ ಮಾತುಗಳೊಂದಿಗೆ, “ನಮಗೆ ಮೀಸಲಾತಿಯ ಊರುಗೊಲು ಬೇಡ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮಾತುಗಳನ್ನು ಮುಕ್ತಾಯಗೊಳಿಸಿದರು.
ಮಾಧ್ಯಮ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಪುಸ್ತಕ ಬಿಡುಗಡೆ ಸಮಾರಂಭವು ಬೇಲೂರು ಹಬ್ಬದ ಸಾಂಸ್ಕೃತಿಕ ಮತ್ತು ಜ್ಞಾನ ವಿನಿಮಯ ಕಾರ್ಯಕ್ರಮಗಳಿಗೆ ಮತ್ತಷ್ಟು ಮೆರುಗು ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post