ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಹಳೆ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯ ತೀರ್ಥರ ಆರಾಧನೆ ಮಹೋತ್ಸವದ ಅಂಗವಾಗಿ ಇಂದು ಮಠದ ಪ್ರಕಾರದಲ್ಲಿ ರಥೋತ್ಸವ ಹಾಗೂ ಎಲ್ಲಾ ವಿವಿಧ ಭಜನಾ ಮಂಡಳಿಯಿಂದ ಜಯತೀರ್ಥರ ಹಾಡುಗಾರಿಕೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜೀರವಾಕಾಂತ್, ಖಜಾಂಚಿ ನಿರಂಜನಾಚಾರ್ಯ, ಪ್ರಧಾನ ಅರ್ಚಕ ಸತ್ಯನಾರಾಯಣ್ ಹಾಗೂ ವೇಬ್ರ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸ್ ಆಚಾರ್, ಗಂಟೆ ನಾರಾಯಣ ಆಚಾರ್, ಅನಂತ ಆಚಾರ್, ಶ್ರೀಪತಿ ತಂತ್ರಿ, ಕೆ.ಎಸ್. ಶ್ರೀಪಾದ್ ಜಯತೀರ್ಥ ಉಪಸ್ಥಿತರಿದ್ದರು.
Also read: ದೇಶ ವಿರೋಧಿ ಪಿಎಫ್’ಐ ಸಂಘಟನೆಯನ್ನು ನಿಷೇಧಿಸಿ: ಕೆ.ಈ. ಕಾಂತೇಶ್ ಆಗ್ರಹ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















