Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿ ಹೊಸಮನೆ ಮುಖ್ಯರಸ್ತೆ: ಮಾಸ್ಟರ್ ಪ್ಲಾನ್ 60 ಅಡಿಯಲ್ಲಿ 10 ಅಡಿ ರಸ್ತೆಯೇ ಮಂಗಮಾಯ!

April 3, 2019
in ಭದ್ರಾವತಿ
0 0
0
Share on facebookShare on TwitterWhatsapp
Read - 3 minutes

ಭದ್ರಾವತಿ: ಜನರ ಬಹುಬೇಡಿಕೆಯಾಗಿದ್ದ ಹೊಸಮನೆ ಮುಖ್ಯರಸ್ತೆಯು 60 ಅಡಿಗಳ ಮಾಸ್ಟರ್ ಪ್ಲಾನಿಗೆ ಒಳಪಟ್ಟಿದ್ದರು ನಗರಸಭೆ ಆಡಳಿತವು 50 ಅಡಿಗಳಿಗೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿಗೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಬಹಳ ವರ್ಷಗಳಿಂದ ರಂಗಪ್ಪವೃತ್ತದಿಂದ ಹೊಸಮನೆಯ ಶಿವಾಜಿ ವೃತ್ತದವರಗಿನ ಮುಖ್ಯರಸ್ತೆಯು ಜನರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ರಸ್ತೆ ಮಾರ್ಗದಲ್ಲಿ ಪ್ರತಿ ಭಾನುವಾರ ನಡೆಯುವ ಬಹುದೊಡ್ಡ ಸಂತೆ ದಿನದಂದು ಜನರು ನಡೆದಾಡುವುದು ಸಹ ದುಸ್ತರವಾಗಿತ್ತು. ಇಕ್ಕೆಲೆಗಳ ರಸ್ತೆ ಬದಿಯಲ್ಲಿ ಗೂಡಂಗಡಿಗಳು, ತಳ್ಳುವ ಗಾಡಿಗಳು, ಫುಟ್‌ಪಾತ್ ವ್ಯಾಪಾರಿಗಳಿಂದ ಕಿರಿ ಕಿರಿ ಹೆಚ್ಚಾಗಿತ್ತು. ಕಟ್ಟಡ ಮಾಲೀಕರು ಮನಬಂದಂತೆ ರಸ್ತೆಯನ್ನು ಆವರಿಸಿಕೊಂಡು ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡಿದ್ದರಿಂದ ತೊಂದರೆ ಉಂಟಾಗಿತ್ತು.

ಇವೆಲ್ಲವನ್ನು ಮನಗಂಡ ಶಾಸಕ ಬಿ.ಕೆ.ಸಂಗಮೇಶ್ವರ್ ಕಾಂಕ್ರೀಟ್ ರಸ್ತೆ ಅಗಲೀಕರಣಕ್ಕೆ ರಾಜ್ಯ ಸರಕಾರದಿಂದ 2.50 ಕೋಟಿ ರೂ ಅನುದಾನ ಮಂಜೂರು ಮಾಡಿಸಿದರು. ನಗರಸಭೆ ಆಡಳಿತವು ಸಹ ಮಾಸಿಕ ಅಧಿವೇಶನದಲ್ಲಿ ರಸ್ತೆ ಅಗಲೀಕರಣಕ್ಕೆ ಅಸ್ತು ನೀಡಿತ್ತು. ರಸ್ತೆ ಅಗಲೀಕರಣ ಮಾಡಲು ಪಿಡಬ್ಲ್ಯೂಡಿ ಇಲಾಖೆಯ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸರಕಾರ ಆದೇಶಿಸಿ ಮೇಲ್ವಿಚಾರಣೆಯನ್ನು ನಗರಸಭಾ ಆಡಳಿತಕ್ಕೆ ವಹಿಸಿದೆ.

ರಸ್ತೆ ಅಗಲೀಕರಣದ ವಿಷಯವು ಕಾಡ್ಗಿಚ್ಚಿನಂತೆ ಹರಡಿ ಹಲವು ಉಹಾಪೋಹಗಳಿಗೆ ತುತ್ತಾಗಿತ್ತು. 40 ಅಡಿಗಳಿಗೆ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಆರಂಭದಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಕೇವಲ 40 ಅಡಿಗಳಿಗೆ ಕಾಂಕ್ರೀಟ್ ರಸ್ತೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ರಸ್ತೆ ಅಗಲೀಕರಣವು ಆಗುವುದಿಲ್ಲ. ಕೇವಲ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಬೃಹತ್ ಮರಗಳ ಮಾರಣ ಹೋಮ ಮಾತ್ರ ನಡೆದು ಸರಕಾರ ನೀಡಿದ ಅನುದಾನ ಪೋಲಾಗುವುದೆಂದು ಸಾರ್ವಜನಿಕರು ಶಾಸಕರ ಮೇಲೆ ಒತ್ತಡ ಹೇರಿದ್ದರು.


ಇವೆಲ್ಲವನ್ನು ಮನಗಂಡ ಶಾಸಕರು ಹಾಗು ಲ್ಯಾಂಡ್ ಆರ್ಮಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ್ ನೇತೃತ್ವದಲ್ಲಿ ಕಟ್ಟಡ ಮಾಲೀಕರ ಮತ್ತು ವ್ಯಾಪಾರಸ್ಥರ ಹಾಗು ಸಾರ್ವಜನಿಕರ ಸಭೆ ನಡೆಸಿ ಚರ್ಚಿಸಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದು ವ್ಯಾಪಾರಸ್ಥರಿಗೆ ಮತ್ತು ಕಟ್ಟಡ ಮಾಲೀಕರಿಗೆ ತೊಂದರೆಯಾಗದಂತೆ 50 ಅಡಿಗಳಿಗೆ ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಿದರು.

ಅದರಂತೆ ಪಿಡಬ್ಲ್ಯೂಡಿ ಇಲಾಖೆಯು 2.50 ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ. 50 ಅಡಿಗಳ ರಸ್ತೆ ಬದಲಿಗೆ ಕೇವಲ 40 ಅಡಿಗಳಿಗೆ ಸೀಮಿತಗೊಳಿಸಿ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಬದಿಯ ಬೃಹತ್ ಮರಗಳನ್ನು ಕಡಿತಲೆ ಮಾಡಿ ಮಾರಣ ಹೋಮ ಮಾಡಲಾಗಿದೆ. ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ರಸ್ತೆಯನ್ನು 40 ಅಡಿಗೆ ಮಾಡಲಾಗುವುದೆಂದು ಅಧಿಕಾರಿಗಳು ಹೇಳುತ್ತಿರುವಾಗಲೆ ಕಟ್ಟಡ ಮಾಲೀಕರು ಮತ್ತು ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ದ ಬೀದಿಗಿಳಿದಿದ್ದಾರೆ. ಸಂತೆ ಮುಂಭಾಗದಲ್ಲಿರುವ ಬೃಹತ್ ಕಟ್ಟಡ ಫೇಸ್ ಕಂಪ್ಯೂಟರ್ ಮಾಲೀಕರಿಗೆ ಮತ್ತು ಶಾಸಕರ ಅನುಯಾಯಿಗಳಿಗೆ ಅನುಕೂಲ ಕಲ್ಪಿಸಲು ಈ ಅನ್ಯಾಯವೆಸಗಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.

ರಸ್ತೆ ಅಗಲೀಕರಣವು ತಾರತಮ್ಯದಿಂದ ಕೂಡದೆ ರಾಜಕೀಯ ಮುಕ್ತ ಕಾಮಗಾರಿ ಮಾಡಬೇಕೆಂದು ವ್ಯಾಪಾರಸ್ಥರು ಹೇಳಿದರೆ, ಕಟ್ಟಡ ಮಾಲೀಕರು ರಸ್ತೆ ಮಧ್ಯೆ ಭಾಗದಿಂದ ನಿಗದಿ ಪಡಿಸಿದ ಅಳತೆಗೆ ತಾರತಮ್ಯ ತೋರದೆ ಇಕ್ಕೆಲಗಳಲ್ಲು ಒಂದೇ ಮಾದರಿ ಅಗಲೀಕರಣ ಮಾಡಬೇಕೆಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಮನಬಂದಂತೆ ಅಗಲೀಕರಣ ಮಾಡದೆ ರಸ್ತೆ ಎರಡು ಬದಿಯ ಚರಂಡಿಗಳ ಮಧ್ಯಭಾಗದಲ್ಲಿ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಟ್ಟಾರೆ ರಂಗಪ್ಪವೃತ್ತದಿಂದ ಶಿವಾಜಿವೃತ್ತದ ವರಗಿನ ನಿವಾಸಿಗಳಿಗೆ ಹಾಗು ಕಟ್ಟಡ ಮಾಲೀಕರಿಗೆ ರಸ್ತೆ ಅಗಲೀಕರಣದಿಂದ ನುಂಗಲಾರದ ತುತ್ತಾಗಿದೆ.

ಶಾಸಕ ಸಂಗಮೇಶ್ವರ್ ಸ್ಪಷ್ಟೀಕರಣ
ಹೊಸಮನೆ ಮುಖ್ಯರಸ್ತೆಯ ಅಗಲೀಕರಣ ರಾಜಕೀಯ ಮುಕ್ತ ಹಾಗು ಸಾರ್ವಜನಿಕರ ಹಿತಾಸಕ್ತಿಗಾಗಿ ಕೈಗೆತ್ತಿಕೊಂಡಿರುವ 2.50 ಕೋಟಿ ರೂ ವೆಚ್ಚದ ಕಾಂಕ್ರೀಟ್ ಕಾಮಗಾರಿಯಾಗಿದೆ. ನಮ್ಮ ಅನುಯಾಯಿಗಳಿಗೆ ಅಥವಾ ಬೇಕಾದ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ಅಥವಾ ಅಂತಹ ಕಟ್ಟಡಗಳನ್ನು ಉಳಿಸುವ ಕ್ಷುಲ್ಲಕ ರಾಜಕಾರಣ ಎಂದಿಗೂ ಮಾಡುವುದಿಲ್ಲ. ಜನರ ಅನುಕೂಲಕ್ಕಾಗಿ ಹೆಚ್ಚು ಹಾನಿಯಾಗದಂತೆ 60 ಅಡಿಗಳ ಬದಲಿಗೆ 50 ಅಡಿಗಳಿಗೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಸಾರ್ವಜನಿಕರು ಯಾವುದೇ ಅಪ ಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಶಾಸಕರು ಹಾಗು ಲ್ಯಾಂಡ್ ಆರ್ಮಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ್ ಸ್ಪಷ್ಟೀಕರಿಸಿದರು.

ರಸ್ತೆ ಅಗಲೀಕರಣದಲ್ಲಿ ರಾಜಕೀಯ ಸಲ್ಲದು: ಮಾಜಿ ಶಾಸಕ ಅಪ್ಪಾಜಿ
ಹೊಸಮನೆ ಮುಖ್ಯರಸ್ತೆ ಅಗಲೀಕರಣ ವಿಚಾರಸದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾರತಮ್ಯ ತೋರದೆ, ರಾಜಕೀಯ ಮಾಡದೆ ಸರ್ವರನ್ನು ಒಂದಾಗಿ ಕಾಣಬೇಕು. ಯಾವುದೋ ಇಚ್ಚಾಶಕ್ತಿಗೆ ರಸ್ತೆಯ ನಕ್ಷೆಯನ್ನೇ ಅದಲು ಬದಲು ಮಾಡಬಾರದು. ರಸ್ತೆ ಮಧ್ಯ ಭಾಗದಿಂದ 2 ಕಡೆ ತಾರತಮ್ಯ ತೋರದೆ, ರಾಜಕೀಯ ಬೆರಸದೆ ಸಮವಾಗಿ ರಸ್ತೆ ಅಗಲೀಕರಣ ಮಾಡಬೇಕು. ಒಂದುಕಡೆ ರಸ್ತೆ ಮಧ್ಯ ಭಾಗದಿಂದ ಮತ್ತೊಂದು ಕಡೆ ಚರಂಡಿಯಿಂದ ಚರಂಡಿಗೆ ಅಳತೆ ಎಂಬ ಮಾನಗೇಡಿತನ ಮಾಡಬಾರದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳ ಮತ್ತು ವ್ಯಾಪಾರಸ್ಥರ ಜೊತೆ ಚರ್ಚಿಸಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಎಚ್ಚರಿಸಿದರು.

ಒತ್ತಡಗಳಿಗೆ ಮಣಿದು ಕರ್ತವ್ಯ ನಿರ್ವಹಿಸುತ್ತಿಲ್ಲ: ಪೌರಾಯುಕ್ತ ಮನೋಹರ್
ರಂಗಪ್ಪವೃತ್ತದಿಂದ ಶಿವಾಜಿ ವೃತ್ತದ ವರಗಿನ ಹೊಸಮನೆ ಮುಖ್ಯರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಯು 2.50 ಕೋಟಿ ರೂ ವೆಚ್ಚದಲ್ಲಿ ಪಿಡಬ್ಕ್ಯೂಡಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯ ಮಾಸ್ಟರ್ ಪ್ಲಾನ್ 60 ಅಡಿಗಳಿಗೆ ಸೀಮಿತವಾಗಿದೆ.

ಶಾಸಕರು ವ್ಯಾಪಾರಸ್ಥರ ಮತ್ತು ಕಟ್ಟಡ ಮಾಲೀಕರ ಹಾಗೂ ಅಧಿಕಾರಿಗಳ ಸಭೆ ನಡೆಸಿ 50 ಅಡಿಗಳ ರಸ್ತೆ ಅಗಲೀಕರಣಕ್ಕೆ ತೀರ್ಮಾನಿಸಿದ್ದಾರೆ. ಪ್ರಸ್ತುತವೀಗ 40 ಅಡಿಗಳ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 2 ಬದಿಗಳಲ್ಲಿ ತಲಾ 10 ಅಡಿಗಳಂತೆ ಒಟ್ಟು 20 ಅಡಿ ಜಾಗದಲ್ಲಿ ಫುಟ್‌ಪಾತ್ ಮತ್ತು ಚರಂಡಿ ನಿರ್ಮಿಸಲಾಗುತ್ತದೆ. ಸರಕಾರವೀಗ 2.50 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಆ ಹಣದಲ್ಲಿ 40 ಅಡಿಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು.

ರಸ್ತೆ ಕಾಮಗಾರಿ ಮುಗಿದ ನಂತರ ಸರಕಾರದಿಂದ ಅಂದಾಜು 2 ಕೋಟಿ ರೂ ಅನುದಾನ ಪಡೆದು 20 ಅಡಿಗಳ ಫುಟ್‌ಪಾತ್ ಮತ್ತು ಚರಂಡಿ ನಿರ್ಮಾಣ ಕೈಗೊಳ್ಳಲಾಗುವುದು. ಸಂತೆ ಮೈದಾನ ಮುಂಭಾಗದ ಫೇಸ್ ಕಂಪ್ಯೂಟರ್ ಕಟ್ಟಡ ಉಳಿಸಲು ಯಾವುದೇ ತಾರತಮ್ಯ ಮಾಡಿಲ್ಲ. ರಸ್ತೆ ಮಧ್ಯಭಾಗದಿಂದ 20 ಅಡಿಗಳಿಗೆ ಟೇಪು ಹಿಡಿದು ಅಳತೆ ಮಾಡಿದಾಗ ಕೇವಲ 3 ಅಡಿಗಳಿಗೆ ಬೃಹತ್ ಕಟ್ಟಡ ಒಡೆಯಬೇಕಾಗಿದೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಚರಂಡಿ ಮತ್ತು ಫುಟ್‌ಪಾತ್ ಮಾಡುವಾಗ 3 ಅಡಿಗಳನ್ನು ಸೇರಿಸಿ ನಿರ್ದಿಷ್ಟ ಪಡಿಸಿದ ಅಳತೆಗೆ ಕಟ್ಟಡವನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ಹಾಗೂ ಕಟ್ಟಡ ಮಾಲೀಕರು ಅಪಾರ್ಥ ಮಾಡಿಕೊಳ್ಳಬಾರದೆಂದು ತಿಳಿಸಿದ ಪೌರಾಯುಕ್ತ ಮನೋಹರ್ ರಸ್ತೆ ಅಗಲೀಕರಣ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟಪಡಿಸಿದರು.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiKannada NewsMalnad NewsRoad Wideningಎಂ.ಜೆ. ಅಪ್ಪಾಜಿಭದ್ರಾವತಿರಸ್ತೆ ಅಗಲೀಕರಣಶಾಸಕ ಬಿ.ಕೆ. ಸಂಗಮೆಶ್ವರ್
Previous Post

ಮಲೆನಾಡ ಹೆಬ್ಬಾಗಿಲಲ್ಲಿ ಅಬ್ಬರಿಸಿದ ಮೈತ್ರಿ ಪಕ್ಷದ ಮುಖಂಡರು, ಮಧು ನಾಮಪತ್ರ ಸಲ್ಲಿಕೆ

Next Post

ಭದ್ರಾವತಿ: ಮೂರು ಕಡೆ ಚೆಕ್ ಪೋಸ್ಟ್‌’ನಲ್ಲಿ ದಾಖಲೆಯಿಲ್ಲದ 1 ಲಕ್ಷಕ್ಕೂ ಅಧಿಕ ಹಣ ವಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಮೂರು ಕಡೆ ಚೆಕ್ ಪೋಸ್ಟ್‌'ನಲ್ಲಿ ದಾಖಲೆಯಿಲ್ಲದ 1 ಲಕ್ಷಕ್ಕೂ ಅಧಿಕ ಹಣ ವಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!