ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಈಗಾಗಲೇ ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಹಕ್ಕಿಜ್ವರವೂ ಸಹ ಹರಡುತ್ತಿದೆಯೇ ಎಂಬ ಅನುಮಾನಗಳು ಬಲವಾಗಿವೆ.
ಇಂತಹ ಅನುಮಾನಗಳಿಗೆ ಪೂರಕ ಎನ್ನುವಂತೆ ಹಳೇನಗರದ ಕಂಚಿ ಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಅರಳಿಮರದ ಬುಡದಲ್ಲಿ ಮತ್ತು ರಸ್ತೆ ಬದಿ ಹಾಗೂ ಚರಂಡಿಗಳಲ್ಲಿ 15ಕ್ಕೂ ಅಧಿಕವಾದ ರಾತ್ರಿ ಬಕಪಕ್ಷಿಗಳ(ನೈಟ್ಹೆರಾನ್) ಮರಿಗಳು ಸತ್ತು ಬಿದ್ದುರುವುದು ಜನರಲ್ಲಿ ಹಕ್ಕಿಜ್ವರದಿಂದ ಈ ಪಕ್ಷಿಗಳು ಸಾವನ್ನಪಿರಬಹುದೇ ಎಂಬ ಶಂಕೆ ಹುಟ್ಟುಹಾಕಿದೆ.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹವ್ಯಾಸಿ ಪಕ್ಷಿ ವೀಕ್ಷಕ ತಜ್ಞ ರಮೇಶ್ ಹೇಳುವಂತೆ, ನೈಟ್ ಹೆರಾನ್ ಎಂದು ಕರೆಯಲ್ಪಪಡುವ ಈ ಪಕ್ಷಿಗಳನ್ನು ರಾತ್ರಿಬಖ ಎಂದೂ ಸಹ ಕರೆಯುತ್ತಾರೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಿಯ ಮರಿಗಳು ಸತ್ತಿರುವುದನ್ನು ನೋಡಿದರೆ ಅದರ ಪರೀಕ್ಷೆ ಅಗತ್ಯವೆನಿಸುತ್ತದೆ. ಆದರೂ ಅವುಗಳ ಗೂಡಿನಲ್ಲಿ ಜಾಗ ಸಾಲದೆ ಆಯತಪ್ಪಿ ಕೆಳಗೆ ಬಿದ್ದೂ ಸಹ ಈ ಮರಿಗಳು ಸಾವನ್ನಪಿರುವ ಸಾಧ್ಯತೆಯೂ ಇದೆ ಎಂದರು.
ಸ್ವಚ್ಛತೆಯ ಕೊರತೆ
ಸಾಮಾನ್ಯವಾಗಿ ಈ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಅದರಲ್ಲಿಯೂ ಶನಿವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈಗ ಎಲ್ಲೆಡೆ ಕೊರೋನಾ ಭೀತಿ ಆವರಿಸಿರುವ ಸಂದರ್ಭದಲ್ಲಿ ಈ ರೀತಿ ಪಕ್ಷಿಗಳ ಅಸಹಜ ಸಾವು ಹಾಗೂ ಅವುಗಳು ಕೊಳೆತು ನಾರುತ್ತಿರುವುದರಿಂದ ಉಂಟಾಗಿರುವ ದುರ್ನಾತದ ಪರಿಸರವನ್ನು ಸ್ವಚ್ಛಗೊಳಿಸುವತ್ತ ದೇವಾಲಯದವರು ಗಮನಹರಿಸಬೇಕಿದೆ.
Get in Touch With Us info@kalpa.news Whatsapp: 9481252093
Discussion about this post