ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ 29ನೇ ವಾರ್ಡ್ಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗುದ್ದಯಮ ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ಕುಮಾರ್ಗೆ ಭರ್ಜರಿ ಜಯ ಲಭಿಸಿದೆ.

450 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದು, ಪ್ರಸ್ತುತ ಜೆಡಿಎಸ್ ಗೆಲುವಿನಿಂದ ಭದ್ರಾವತಿ ನಗರಸಭೆಯಲ್ಲಿ ಜೆಡಿಎಸ್ ಸ್ಥಾನ 12ಕ್ಕೆ ಏರಿಕೆಯಾಗಿದೆ.
ಠೇವಣಿ ಕಳೆದುಕೊಂಡ ಬಿಜೆಪಿ ಅಭ್ಯರ್ಥಿ:
ಜೆಡಿಎಸ್ನ ನಾಗರತ್ನಾ ಅನಿಲ್ಕುಮಾರ್ರಿಗೆ 1282 ಮತಗಳು ಲಭಿಸಿದ್ದು, ಕಾಂಗ್ರೆಸ್ನ ಲೋಹಿತಾ ನಂಜಪ್ಪರಿಗೆ 832 ಮತಗಳು ಬಂದಿವೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ರಮಾ ವೆಂಕಟೇಶ್ರಿಗೆ ಕೇವಲ 70 ಮತಗಳನ್ನು ಪಡೆಯುವುದರೊಂದಿಗೆ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ. 16 ನೋಟಾ ಮತಗಳು ದಾಖಲಾಗಿದ್ದು, ಒಟ್ಟು 3374 ಮತದಾರರಿದ್ದ ಈ ಕ್ಷೇತ್ರದಲ್ಲಿ 2200 ಮತಗಳು ಚಲಾವಣೆಗೊಂಡಿದ್ದವು.
ಏಪ್ರಿಲ್ನಲ್ಲಿ ನಡೆದ ನಗರಸಭೆ ಚುನಾವಣೆ ವೇಳೆ 29ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪ್ರಚಾರದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 29ನೇ ವಾರ್ಡ್ನ ಚುನಾವಣೆ ರದ್ದು ಪಡಿಸಿತ್ತು.
ಆಯೋಗ ಮರು ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಲೋಹಿತಾ ನಂಜಪ್ಪ, ಜೆಡಿಎಸ್ನ ನಾಗರತ್ನಾ ಅನಿಲ್ಕುಮಾರ್, ಬಿಜೆಪಿಯಿಂದ ರಮಾ ವೆಂಕಟೇಶ್ ಕಣದಲ್ಲಿ ಇದ್ದರು.
ಪ್ರಸ್ತುತ ಭದ್ರಾವತಿ ನಗರಸಭೆ 34 ವಾರ್ಡ್ಗಳ ಪೈಕಿ ಕಾಂಗ್ರೆಸ್ -18 , ಜೆಡಿಎಸ್ – 11 , ಬಿಜೆಪಿ -4 , ಪಕ್ಷೇತರ -1 ಸದಸ್ಯ ಸ್ಥಾನ ಪಡೆದುಕೊಂಡಿದೆ. ಹೆಚ್ಚು ಸ್ಥಾನ ಪಡೆದುಕೊಳ್ಳುವ ಮೂಲಕ ಈಗಾಗಲೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post