ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿರಿಯೂರು ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಹಾಲಿ ಪಂಚಾಯ್ತಿ ಆಡಳಿತದ ಮೇಲೆ ಭ್ರ್ರಷ್ಟಾಚಾರ ಸೇರಿದಂತೆ ಇತರ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹಿರಿಯೂರು ಗ್ರಾಪಂ ಹಾಲಿ ಅಧ್ಯಕ್ಷರು, ಸದಸ್ಯರು ಮಂಗಳವಾರ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ಹಿಂದಿನ ಸಾಲಿನ ಅವಧಿಯಲ್ಲಿ ಅನುದಾನ ವಾಪಸ್ ಹೋಗಿರುವುದು, ಅಕ್ರಮ ಖಾತೆಗಳನ್ನು ಮಾಡಿರುವುದು, ಕಾಮಗಾರಿ ನಡೆಸಿ ಬಿಲ್ ಮಾಡಿರುವುದು, ಗ್ರಾಪಂ ಮಹಿಳಾ ಸದಸ್ಯರ ಪತಿ ಪರೋಕ್ಷವಾಗಿ ಆಡಳಿತ ನಡೆಸಿರುವುದು ಎಲ್ಲಾ ಅವರ ಆಢಳಿತಾವಧಿಯಲ್ಲಿ. ಆದರೆ ಆ ಎಲ್ಲಾ ಲೋಪದೋಷಗಳನ್ನು ಹಾಲಿ ಅಡಳಿತ ಮಂಡಳಿಯು ಇವರ ತಪ್ಪನ್ನೆಲ್ಲಾ ಸರಿಪಡಿಸಿ ಪಿಸಿಒ ಮಧುಸೂದನ 2019 ರ ಸಾಲಿನಲ್ಲಿ 4 ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದು ಕಾರ್ಯ ನಿರ್ವಹಿಸಿದರು. ಆದರೆ ನಮ್ಮ ಅವಧಿಯಲ್ಲಿ ಕೇವಲ 4-5 ತಿಂಗಳ ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಹಾಗಾಗಿ ಭ್ರಷ್ಟಾಚಾರ ಯಾರ ಅವಧಿಯಲ್ಲಿ ನಡೆದಿದೆ ಎಂಬುದು ಇದರಿಂದ ಬಹಿರಂಗವಾಗುತ್ತದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಪ್ರಸ್ತುತ ಚುನಾಯಿತ ಸದಸ್ಯರಲ್ಲಿ ಕೆಲವರು 2 ರಿಂದ 4 ಬಾರಿ ಗ್ರಾಮಸ್ಥರ ಒಲವು ಗಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಅರೋಪಗಳನ್ನು ಮಾಡಿರುವವರು ಕೇವಲ ಒಂದೇ ಚುನಾವಣೆಯಲ್ಲಿ ಹಾಗೂ ಮರು ಚುನಾವಣೆಯಲ್ಲಿ ಗ್ರಾಮಸ್ಥರ ಒಲವು ಇಲ್ಲದೆ ಸೋತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಿದರು.
ಹಿರಿಯೂರು ಗ್ರಾಪಂ ಅಧ್ಯಕ್ಷೆ ಜಿ. ಗಂಗಮ್ಮ, ಉಪಾಧ್ಯಕ್ಷೆ ಪವಿತ್ರ, ಸದಸ್ಯರಾಧ ಅನಿತ, ಪಲ್ಲವಿ, ರಾಮಮೂರ್ತಿ, ನಾಗವೇಣಿ, ಕೃಷ್ಣೆಗೌಡ, ಕಿರಣ್ರಾಜ್, ಸಂತೋಷ್ ಹಾಗೂ ಗ್ರಾಮಸ್ಥರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post