ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೋಟ್ಯಾಂತರ ಮಂದಿಯ ಕನಸಾದ ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠಾಪನೆ ಮುಂದಿನ ವರ್ಷದ ಮಕರ ಸಂಕ್ರಮಣದ ನಂತರ ನಡೆಯಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್’ಗೆ ದಕ್ಷಿಣ ಭಾರತದಿಂದ ಪ್ರತಿನಿಧಿಯಾಗಿರುವ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.
ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನುಗ್ರಹ ಭಾಷಣ ನೀಡಿ ಮಾತನಾಡಿದ ಅವರು, ಸಾಧ್ಯವೇ ಇಲ್ಲ ಎಂಬ ಕಾರ್ಯ ಈಗ ಮುಕ್ತಾಯದ ಹಂತಕ್ಕೆ ಬಂದಿದ. ಅಯೋಧ್ಯಾ, ಮಥುರಾ, ಕಾಶಿ, ಗಯಾ, ಆವಂತಿಕಾಪುರಿಗಳು ಮೋಕ್ಷದಾಯಕ ಕ್ಷೇತ್ರಗಳು. ಇದರಲ್ಲಿ ಅತ್ಯಂತ ಪ್ರಮುಖವಾದುದು ಅಯೋಧ್ಯೆ. ಇಂತಹ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಕೋಟ್ಯಾಂತರ ಮಂದಿಯ ಕನಸು. ಅದು ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ. ಇನ್ನೊಂದು ವರ್ಷದಲ್ಲಿ ಸಂಪೂರ್ಣವಾಗಿ ರಾಮದೇವರ ಪ್ರಾಣಪ್ರತಿಷ್ಠೆಯಾಗಲಿದೆ ಎಂದರು.
ರಾಮಮಂದಿರಕ್ಕೋಸ್ಕರ ಮಂದಿರವಲ್ಲ. ಬದಲಾಗಿ ರಾಮರಾಜ್ಯದ ಸಂಕಲ್ಪಕ್ಕೋಸ್ಕರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮರಾಜ್ಯದ ಕನಸು ನನಸಾಗಬೇಕಾದರೆ ರಾಮ ಎಂದರೆ ಯಾರು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
Also read: ರಾಮರಾಜ್ಯವಾಗಬೇಕಾದರೆ ಪ್ರತಿಯೊಬ್ಬರೂ `ರಾಮ’ರಾಗಬೇಕು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅಭಿಮತ
ಯಾರಿಂದಾಗಿ ಮೂರು ಲೋಕ ಸುಖಪಡುತ್ತದೆಯೋ ಅವನೇ ರಾಮ. ಯಾರಿಂದಾಗಿ ಮೂರು ಲೋಕ ದುಃಖ ಪಡುತ್ತದೆಯೋ ಅವನೇ ರಾವಣ. ಹೀಗಾಗಿ, ನಾವು ಹೇಗಿರಬೇಕು ಎಂಬುದನ್ನು ಇದರಿಂದಲೇ ಅರಿತುಕೊಳ್ಳಬೇಕು ಎಂದರು.
ಮುಂದಿನ ಸಂಕ್ರಾಂತಿ ನಂತರ ರಾಮದೇವರ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಆನಂತರ ನಾವೆಲ್ಲರೂ ಅಲ್ಲಿಗೆ ಹೋಗಲೇಬೇಕು. ಹೋಗುವಾಗ ಬರಿಗೈಲಿ ಹೋಗಬೇಡಿ. ಯಥೋಚಿತ ಕಾಣಿಕೆಯೊಂದಿಗೆ ಹೋಗಬೇಕು. ಆದರೆ, ಬರಿಯ ಕಾಣಿಕೆಯೊಂದಿಗೆ ದೇಶಪ್ರೇಮ ಎಂಬ ಕಾಣಿಕೆಯನ್ನೂ ಸಹ ಹೊತ್ತೊಯ್ಯಬೇಕು. ರಾಮ ಎಂದರೆ ದೇಶ, ರಾಮನ ಸೇವೆ ಎಂದರೆ ಅದು ದೇಶ ಸೇವೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post