ಭದ್ರಾವತಿ: ತಾಲೂಕಿನಲ್ಲಿ ಹಲವೆಡೆ ಪ್ರತಿಷ್ಟಾಪಿಸಿರುವ ಗಣಪತಿ ಪೆಂಡಾಲುಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಆರ್.ನಾಗರಾಜ್ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಹಾಗು ಶಾಂತರೀತಿಯಲ್ಲಿ ಗಣಪತಿಗಳನ್ನು ವಿಸರ್ಜಿಸುವಂತೆ ಮನವಿ ಮಾಡಿದರು.
ಅವರು ಬುಧವಾರ ಅಧಿಕಾರಿಗಳ ತಂಡದೊಂದಿಗೆ ಹೊಸಮನೆಯ ಭೋವಿ ಕಾಲೋನಿ ಶ್ರೀ ವಿನಾಯಕ ಸ್ವಾಮಿ ಪೆಂಡಾಲಿನಲ್ಲಿ ಪ್ರತಿಷ್ಟಾಪಿಸಿರುವ ಸಮಿತಿ ಮುಖಂಡರುಗಳೊಂದಿಗೆ ಚರ್ಚೆ ನಡೆಸಿ ಅರಿವು ಮೂಡಿಸಿದರು.
ಯಾವುದೇ ಅಹಿತಕರ, ಕ್ಷುಲ್ಲಕ ಘಟನೆಗಳಿಗೆ ಆಸ್ಪದ ನೀಡಬಾರದು. ಸರ್ವ ಜನಾಂಗವನ್ನು ಮತ್ತು ಧರ್ಮೀಯರನ್ನು ಪ್ರೀತಿ ಗೌರವಗಳಿಂದ ಕಾಣಬೇಕು. ಯುವಕರು ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಧರ್ಮಕ್ಕೆ ಅವಹೇಳನ ಮಾಡದಂತೆ ಘೋಷಣೆಗಳನ್ನು ಕೂಗದಂತೆ ಮುಖಂಡರು ಅರಿವು ಮೂಡಿಸಬೇಕೆಂದರು. ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್ ಮುಂತಾದವರು ತಂಡದಲ್ಲಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post