ಕಲ್ಪ ಮೀಡಿಯಾ ಹೌಸ್ | ಭುವನೇಶ್ವರ್ |
ಒಡಿಶಾದ ಪುರಿ ಜಗನ್ನಾಥ ದೇವಾಲಯದ #Odisha Puri Jagannatha Temple ಚಂದನ್ ಜಾತ್ರೆಯ ವೇಳೆ ಪಟಾಕಿ ರಾಶಿ ಸ್ಪೋಟಗೊಂಡಿದ್ದು, 15 ಮಂದಿ ಗಾಯಗೊಂಡು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದಬಂದಿದೆ.
ಜಾತ್ರೆ ಅಂಗವಾಗಿ ಬಹಳಷ್ಟು ಪಟಾಕಿಯನ್ನು ಸಂಗ್ರಹಿಸಿ ಇರಿಸಲಾಗಿತ್ತು. ಜಾತ್ರೆ ನಡೆಯುವ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಇದರಿಂದ ಹಾರಿದ ಕಿಡಿ ಸಂಗ್ರಹಿಸಿದ್ದ ಪಟಾಕಿಗೆ ತಗುಲಿದ್ದು, ಇದರಿಂದಾಗಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.

Also read: ಅಯೋಧ್ಯೆ ರಾಮಮಂದಿರ ಸ್ಪೋಟ ಬೆದರಿಕೆ | ಅಪ್ರಾಪ್ತ ಬಂಧನ | ಆತ ಬುದ್ಧಿಮಾಂದ್ಯನಂತೆ!
ಘಟನೆಯಲ್ಲಿ ಗಾಯಗೊಂಡವರದಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post