ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಿಕೇರಿ, ಚೊಂಡಿ, ಚೌಳಿ, ಅತಿವಾಳ, ಕಪಲಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು Bandeppa Khashempur ಮತಯಾಚನೆ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಹೊನ್ನಿಕೇರಿ ಗ್ರಾಮದ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಬುಧವಾರ ಸಂಜೆ ಭೇಟಿ ನೀಡಿ ದರ್ಶನ ಪಡೆದ ಅವರು, ಹೊನ್ನಿಕೇರಿ ಗ್ರಾಮದಿಂದ ಪ್ರಚಾರ ಆರಂಭಿಸಿ, ಚೊಂಡಿ, ಚೌಳಿ, ಅತಿವಾಳ, ಕಪಲಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿ, ನನ್ನನ್ನು ಅತಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು ಬಾಜಾ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಇದೇ ವೇಳೆ ಶಾಸಕರು, ಹೊನ್ನಿಕೇರಿ, ಚೊಂಡಿ, ಚೌಳಿ, ಅತಿವಾಳ, ಕಪಲಾಪೂರ ಸೇರಿದಂತೆ ವಿವಿಧ ಗ್ರಾಮಗಳ ದೇವಸ್ಥಾನ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಗ್ರಾಮಗಳಲ್ಲಿನ ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
Also read: ರಾಜ್ಯದ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಆನ್ ಲೈನ್ ಸಂವಾದ
ವಿವಿಧೆಡೆ ಜೆಡಿಎಸ್ ಸೇರಿದ ಪ್ರಮುಖರು:
ಚುನಾವಣಾ ಪ್ರಚಾರದ ನಡುವೆ ಕ್ಷೇತ್ರದ ಚೊಂಡಿ ಗ್ರಾಮದಲ್ಲಿ ಬಿಎಸ್ಪಿ ಪಕ್ಷದ ರಾಜ್ಯ ನಾಯಕರಾದ ಸೈಯದ್ ವಾಯಿದ್ ಲಕ್ಕನ್ ರವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಪಲಾಪೂರ ಎ ಗ್ರಾಮದಲ್ಲಿ ವಿವಿಧ ಪಕ್ಷಗಳ ಪ್ರಮುಖರಾದ ಶಿವರಾಜ್ ಮಾಲಿಪಾಟೀಲ್, ಶಿವರಾಜ್ ಮುಲ್ಗೆ, ಬಸವರಾಜ್ ಮೈಲಾರಿ, ಹಣುಮಂತ್ ಹಳೆಂಬೂರೆ, ಬಾಬುರಾವ್ ಮುಲ್ಗೆ, ಮಾಣಿಕರಾವ್ ಜಿರ್ಗೆ, ಸಂತೋಷ ನಿಟ್ಟೂರೆ, ಶಾಂತಕುಮಾರ್ ಚನ್ನಶೆಟ್ಟಿ, ರಮೇಶ್ ಪೊಲೀಸ್ ಪಾಟೀಲ್, ಶಿವರಾಜ್ ಬಾಲ್ಕೆ, ಬಾಬು ಕೋರೆದ್, ಅಶೋಕ್ ಕೋರೆದ್, ರಜಬ್ ಅಲಿ, ಪ್ರಕಾಶ್ ಬಿರಾದಾರ, ರಮೇಶ್ ಪಾಂಚಾಳ, ನಿರಂತರ್, ಖಾಶಿಂ, ಶೇಶಪ್ಪ, ವೈಜನಾಥ್, ಕಾಂಬ್ಳೆ, ಭರತ್ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post