ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಬಳ್ಳಾರಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಫೋಟೋ ಶೂಟಿಂಗ್ ಗಾಗಿ ಶಿವಮೊಗ್ಗದಿಂದ ತೆರಳಿದ್ದವರ ಕಾರು ಚಳ್ಳಕೆರೆ ಬಳಿ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಚಳ್ಳಕೆರೆ ಬಳಿ ನಡೆದಿದೆ.
ಶಿವಮೊಗ್ಗ ಎಲ್ಬಿಎಸ್ ನಗರದ ಅರ್ಜುನ್ (37) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಇನ್ನಿಬ್ಬರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವರನ್ನ ಚಳ್ಳಕರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದ ಅರ್ಜುನ್, ಶರತ್, ಬಸವರಾಜ್ ಹಾಗೂ ನವೀನ್ ಎಂಬವರು ಬಳ್ಳಾರಿಯಲ್ಲಿ ನಿಗದಿಯಾಗಿದ್ದ ನಿಶ್ವಿತಾರ್ಥದ ಕಾರ್ಯಕ್ರಮಕ್ಕೆ ಫೋಟೋ ಶೂಟಿಂಗ್ಗಾಗಿ ತೆರಳುತ್ತಿದ್ದರು. ಇವರು ತೆರಳುತ್ತಿದ್ದ ಕಾರು, ಚಳ್ಳಕೆರೆ ಸಮೀಪ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ, ಕಾರನ್ನು ಚಲಾಯಿಸುತ್ತಿದ್ದ ಅರ್ಜುನ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















