ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಕೊರೋನಾ Corona ಹಿನ್ನೆಲೆಯಲ್ಲಿ ಎರಡು ವರ್ಷ ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲು ಆಗಲಿಲ್ಲ. ಆದರೆ ಈ ವರ್ಷ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕಾಗುತ್ತದೆ. ಇದಕ್ಕೆ ಸಮುದಾಯದ ಎಲ್ಲರ ಸಹಕಾರ ಬೇಕು ಎಂದು ಶ್ರೀಕೃಷ್ಣ ಯಾದವ್ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ತಿಳಿಸಿದರು.
ಚಳ್ಳಕೆರೆ ನಗರದ ತ್ಯಾಗರಾಜ್ ನಗರದ ಶ್ರೀಕೃಷ್ಣ ಯಾದವ್ ಹಾಸ್ಟೆಲ್ನಲ್ಲಿ ಶ್ರೀಕೃಷ್ಣ ಜಯಂತಿ ಕುರಿತು ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆ.20ರಂದು ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕಳೆದೆರಡು ಬಾರಿ ಕೊರೋನಾ ಕಂಟಕದಿಂದಾಗಿ ಈ ಜಯಂತಿ ಆಚರಣೆ ಮಾಡಲು ಆಗಿರಲಿಲ್ಲ ಆದ ಕಾರಣ ಪ್ರಸ್ತುತ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಸನ್ನದ್ದರಾಗಬೇಕು ಎಂದು ಕರೆ ನೀಡಿದರು.
ತಾಲ್ಲೂಕಿನ ಪ್ರತಿ ಗ್ರಾಮಗಳಿಗೆ ತೆರೆಳಿ ಶ್ರೀಕೃಷ್ಣ ಜಯಂತೋತ್ಸವ ವಿಚಾರವಾಗಿ ಪ್ರತಿಯೊಬ್ಬರಿಗೂ ತಿಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರಿಗೂ ಜಯಂತಿಯ ಮಾಹಿತಿ ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಬೇಕು ಎಂದರು.
Also read: ಮಂಚನಬೆಲೆ ಜಲಾಶಯದಿಂದ ನೀರು ಸರಬರಾಜು ಯೋಜನೆಗೆ ಸಂಪುಟ ಒಪ್ಪಿಗೆ: ಸಚಿವ ಎಸ್.ಟಿ. ಸೋಮಶೇಖರ್
ಕೆಎಂಎಫ್ನ ನಿರ್ದೇಶಕ ಹಾಗೂ ಸಮುದಾಯದ ಮುಖಂಡರಾದ ವೀರಭದ್ರ ಬಾಬು, ಹಿರಿಯ ಮುಖಂಡರಾದ ಬಿ.ವಿ.ಸಿರಿಯಣ್ಣ, ಹಟ್ಟಿರುದ್ರಪ್ಪ, ಸಂಘದ ಉಪಾಧ್ಯಕ್ಷ ಚಿಕ್ಕಣ್ಣ, ಮುಖಂಡರಾದ ವೆಂಕಟೇಶ ಯಾದವ್, ಚಿತ್ರಾವತಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಹೊನ್ನೂರು ಗೋವಿಂದಪ್ಪ, ಹುಲಿಕುಂಟೆ ಕರಿಯಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಮುಖಂಡ ಗದ್ದಿಗೆ ತಿಪ್ಪೇಸ್ವಾಮಿ, ಟಿಎಪಿಎಂಸಿ ಅಧ್ಯಕ್ಷ ಕೆ.ಟಿ. ನಿಜಲಿಂಗಪ್ಪ, ಶ್ರೀಕೃಷ್ಣ ಮಹಿಳಾ ಮಂಡಳಿ ಅಧ್ಯಕ್ಷ ಚಿತ್ರಾವತಿ, ಸದಸ್ಯರಾದ ಚಾರುಮತಿ, ಸರೋಜಮ್ಮ, ಇಂದ್ರಮ್ಮ, ಜಯಮ್ಮ, ಮುಖಂಡರಾದ ಮುಡಲಗಿರಿಯಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಚಿಕ್ಕಣ, ಜಿ.ಕೆ. ವೀರಣ್ಣ, ದಾವಣಗೆರೆ ಬಸಣ್ಣ ಕಾಂತರಾಜ್ ಹುಲಿಕುಂಟೆ, ಲಾಯರ್ ಶಶಿ, ಮಂಜುನಾಥ, ನಾಗರಾಜ್ ಚಿಕ್ಕಣ್ಣ, ವಿರೇಶ , ಕಾಟಪ್ಪನಹಟ್ಡಿ ವಿರೇಶ, ಲಾಯರ್ ಕೆ.ಎನ್. ನಾಗರಾಜ್, ಮಂಜುನಾಥ್, ವೀರಣ್ಣ ಶ್ರೀಕಂಠಪ್ಪ ಹಾಗೂ ಸಮುದಾಯದ ಮುಖಂಡರು, ಯುವ ಮುಖಂಡರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post