ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಸ್ವದೇಶಿ ಚಿಂತಕ, ಸ್ವದೇಶಿ ಬಂಧು, ರಾಜೀವ್ ದೀಕ್ಷಿತ್ #RajivDixit ಭಾರತದ ಆಧುನಿಕ ಸ್ವದೇಶಿ ಹರಿಕಾರರು. ಭಾರತದ ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ರಾಸಾಯನಿಕಗಳು #Chemical ಹಾಗೂ ವಸ್ತುಗಳ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸ್ವದೇಶಿ ಪ್ರೇಮಿ ರಾಜೀವ್ ದೀಕ್ಷಿತ್ ರವರ ಕೊಡುಗೆಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತ, ವಿಶ್ವದ ಶ್ರೇಷ್ಠ ವಿಜ್ಞಾನಿ, ಐಐಟಿ ಪದವಿ ಪಡೆದು ಭಾರತದ ಕೋಟಿ ಕೋಟಿ ಭಾರತೀಯರಲ್ಲಿ ಸ್ವದೇಶಿ ಪ್ರಜ್ಞೆ ಜಾಗೃತಿಗೊಳಿಸಿ ಯುವಕರ ಆದರ್ಶರಾದರು ಎಂದರು.
ರೈತರು, ಆಹಾರ ಉತ್ಪಾದನೆ, ವಿದೇಶಿಯ ವ್ಯಾಪಾರದ ಮೋಸದ ಜಾಲವನ್ನು ಎಳೆ ಎಳೆಯಾಗಿ ವಿವರಿಸಿ, ಆಧಾರ ಸಮೇತ ಜಗತ್ತಿಗೆ ತಿಳಿಸಿದರು. ಚಾಮರಾಜನಗರಕ್ಕೆ 3 ಬಾರಿ ಭೇಟಿ ನೀಡಿ ಜೈಹಿಂದ್ ಕಟ್ಟೆಯಲ್ಲಿ ಶುಭಕೋರಿದ ದೀಕ್ಷಿತ್ ಅತ್ಯಂತ ಸರಳ ವ್ಯಕ್ತಿ. ಎಂಟೆಕ್ ಪದವಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ, ಸ್ವದೇಶಿ ಚಳುವಳಿ, ರಾಷ್ಟ್ರಧರ್ಮ, #RashtraDharma ಸ್ವಾಭಿಮಾನದ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಿ ರೈತರು ಯುವಕರು ಹಾಗೂ ದೇಶಿಯ ಜನರಲ್ಲಿ ಸ್ವದೇಶಿಯ ಜಾಗೃತಿಯನ್ನು ಮೂಡಿಸಿದ ಮಹಾನ್ ವ್ಯಕ್ತಿ. ಬಾಲ್ಯದಲ್ಲಿಯೇ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಉದಂ ಸಿಂಗ್ ಮುಂತಾದ ಕ್ರಾಂತಿಕಾರರ ಪ್ರಭಾವಕ್ಕೆ ಒಳಗಾಗಿದ್ದರು. ಅತ್ಯಂತ ಸರಳ ವ್ಯಕ್ತಿಯಾಗಿ ಬದುಕಿ ಆದರ್ಶವಾಗಿದ್ದಾರೆ ಎಂದರು.

ಓಂ ಶಾಂತಿ ನ್ಯೂಸ್ ಬಿಕೆ ಆರಾಧ್ಯ ಮಾತನಾಡಿ ಆಜಾದಿ ಬಚಾವೋ ಆಂದೋಲನದ ದೀಕ್ಷಿತ್ 1967 ನವಂಬರ್ 30ರಂದು ಜನಿಸಿದರು ಉದಾರಿಕರಣ, ಜಗತೀಕರಣ ಖಾಸಗಿಕರಣದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಚಿಕ್ಕವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದವರು, ನಗರದ ಋಗ್ವೇದಿ ಕುಟೀರಕ್ಕೆ ಭೇಟಿ ನೀಡಿದ ಸವಿನೆನಪಿನಲ್ಲಿ ಪ್ರತಿವರ್ಷ ಅವರ ಕುರಿತು ಕಾರ್ಯಕ್ರಮ ರೂಪಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮಾದರಿಯಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮ್ ಪ್ರಸಾದ್, ಮಹೇಶ್, ಜೀವನ್, ಶ್ರಾವ್ಯ ಋಗ್ವೇದಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post