ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಹೋಬಳಿ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದಲ್ಲಿನ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಟಬಂಧ ಮಹೋತ್ಸವ ಜರುಗಿತು.
ವೇ.ಮೂ.ಕುಮಾರ್ ಭಟ್ ಕೊಳಗಿಬೀಸ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು ಅಶ್ವತ್ಥ ಉಪನಯನ, ಕಲಾವೃದ್ಧಿ ಹೋಮ, ಸಹಸ್ರನಾಮ ತುಳಸಿ ಅರ್ಚನೆಯಂತಹ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಸಂಪನ್ನವಾಯಿತು.
ಭಾರತೀಯ ಸಂಸ್ಕೃತಿಯಲ್ಲಿ ದೈವೀಕಲ್ಪನೆ ಕುರಿತು ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತಭಟ್ ಕೆರೆಕೈ, ದೇಹ ಮತ್ತು ದೇವಾಲಯದ ಕುರಿತು ವಿದ್ವಾನ್ ಗಜಾನನಭಟ್ಟ ರೇವಣಕಟ್ಟ ಇವರಿಂದ ಉಪನ್ಯಾಸ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಎಸ್.ಮೋಹನ್ ಅವರಿಗೆ ಗೌರವ ಸಮ್ಮಾನ, ಸುಪ್ರಸಿದ್ಧ ಭರತನಾಟ್ಯ ಕಲಾವಿದೆ ಡಾ.ಕೃಪಾ ಫಡ್ಕೆ ನಿರ್ದೇಶನದ, ಭಾವಯಾಮಿ ರಘುರಾಮ ನೃತ್ಯರೂಪಕ ಮೈಸೂರಿನ ನೃತ್ಯಗಿರಿ ತಂಡದಿಂದ ಜರುಗಿತು. ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಸಿರಸಿಯ ರಾವಣಾವಸಾನ ಮಹಿಳಾ ಯಕ್ಷಗಾನ ಮನಸೂರೆಗೊಂಡಿತು. ಇದೆ ಗ್ರಾಮದ ಖ್ಯಾತಿ ಪಡೆದ ಬಸವೇಶ್ವರ ಹವ್ಯಾಸಿ ಕಲಾಸಂಘದ ಕೋಲಾಟ, ಡೊಳ್ಳು ಕುಣಿತವೂ ನಡೆಯಿತು.
Also read: ಸರ್ಕಾರವೇ ಬಂಡವಾಳ ಹೂಡಿ ವಿಐಎಸ್ಎಲ್ ಕಾರ್ಖಾನೆ ನಡೆಸಲಿ: ಹೆಚ್. ವಿಶ್ವನಾಥ
ಸಿಗಂಧೂರು ಕ್ಷೇತ್ರದ ಶೇಷಗಿರಿ ಭಟ್, ಶಾಸಕ ಕುಮಾರ್ ಬಂಗಾರಪ್ಪ, ಇನ್ನೂ ಅನೇಕ ಪ್ರಮುಖರು, ಕಂತನಹಳ್ಳಿ ಗ್ರಾಮಸ್ಥರು ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post