ಕಲ್ಪ ಮೀಡಿಯಾ ಹೌಸ್ | ಕಾರ್ಕಳ (ಮಂಗಳೂರು) |
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕುಂದಾಪುರ (Kundapura) ಸರಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ (Christ King) ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ.
Christ King : ಚಿನ್ನದ ಪದಕ
ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಶಾಲೆಯ ಹತ್ತನೇ ತರಗತಿಯ ರಿತು ಫ್ರಾನ್ಸಿಸ್ ಹಾಗೂ ಸಾನ್ವಿ ಎಂ. ನಾಯಕ್ ಅವರು ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರೂ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
‘ಕೋಮು ಸೌಹಾರ್ದತೆ ನನ್ನ ಬಾಲ್ಯದ ಕನಸು’
ಆರ್ಎಸ್ಎಸ್ನ ಪಯಣವನ್ನು ಪರಿಚಯಿಸುವ ಪ್ರದರ್ಶಿನಿಯನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಾವೇದ್ ನಯೀಮ್, ಕೋಮು ಸೌಹಾರ್ದತೆಯ ಅಗತ್ಯವನ್ನು ಒತ್ತಿಹೇಳಿದರು.
“ಕೋಮು ಸೌಹಾರ್ದತೆ ನನ್ನ ಬಾಲ್ಯದ ಕನಸು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು,” ಎಂದು ಅವರು ಹೇಳಿದರು.
“ಏಕತೆ ನಮ್ಮ ಶಕ್ತಿ. ಸೌಹಾರ್ದತೆ ನಮ್ಮೆಲ್ಲರ ಅಭಿವೃದ್ಧಿಗೆ ಪೂರಕ,” ಎಂದು ಅಭಿಪ್ರಾಯಪಟ್ಟ ಅವರು, ಪರಸ್ಪರರ ವಿಚಾರಧಾರೆ, ಕಾರ್ಯಚಟುವಟಿಕೆ ಹಾಗೂ ಸೇವಾ ಕಾರ್ಯಗಳನ್ನು ಅರಿತುಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ತಿಳುವಳಿಕೆ ಮೂಡಲು ಸಾಧ್ಯ ಎಂದರು.
Also Read>> ಕ್ರೈಸ್ಟ್ಕಿಂಗ್ ಶಾಲೆಯ ಬಾಲಕಿಯರ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಂಘ ಪರಿವಾರದ ಕುರಿತು ತಿಳಿದುಕೊಂಡಷ್ಟು ಅದರ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳು ನಿವಾರಣೆಯಾಗಲು ಹಾಗೂ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎಂದು ಅವರು ಹೇಳಿದರು.
“ಸಂಘ ಪರಿವಾರದ ಬಗ್ಗೆ ಅರಿತುಕೊಳ್ಳದೆ ಟೀಕಿಸುವುದು ಸರಿಯಲ್ಲ. ಅದರ ಸೇವಾ ಕಾರ್ಯಗಳನ್ನು ಅರಿತುಕೊಂಡಾಗ ಸಂಘದ ಪ್ರಾಮುಖ್ಯತೆ, ಶಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರದ ಬಗ್ಗೆ ತಿಳುವಳಿಕೆ ಮೂಡುತ್ತದೆ,” ಎಂದು ಡಾ. ಜಾವೇದ್ ನಯೀಮ್ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










