ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಅವರ ವಿರುದ್ಧ ಎರಡು ಬಾರಿ ಠೇವಣಿ ಕಳೆದುಕೊಂಡಿದ್ದ ವ್ಯಕ್ತಿಯೇ ಈ ಬಾರಿಯೂ ಅವರ ವಿರುದ್ಧವೇ ಕಾಂಗ್ರೆಸ್’ನಿಂದಲೇ #Congress ಸ್ಪರ್ಧಿಸುತ್ತಿದ್ದಾರೆ.
ಹೌದು… ಅಜಯ್ ರಾಯ್ #AjaiRai ಅವರೇ ಎರಡು ಬಾರಿ ಠೇವಣಿ ಕಳೆದುಕೊಂಡು ಮತ್ತೆ ಪ್ರಧಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ.
ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ #UttarPradesh ವಾರಣಾಸಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಅಜಯ್ ರಾಯ್ ಘೋಷಣೆ ಮಾಡಲಾಗಿದೆ.
ಅಜಯ್ ರಾಯ್ ಅವರು ಕಳೆದ ಎರಡು ಚುನಾವಣೆಗಳಿಂದ ಅವರು ಠೇವಣಿ ಕಳೆದುಕೊಂಡಿದ್ದಾರೆ. ಈಗ ಮತ್ತೆ ಪ್ರಧಾನಿಯವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
2014 ರಲ್ಲಿ, ಅಜಯ್ ಕೇವಲ 7% ಮತಗಳನ್ನು ಪಡೆದಿದ್ದು, 2019 ರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು.
ಯಾರಿವರು ಅಜಯ್ ರಾಯ್?
ಬಿಜೆಪಿ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯ ಜೀವನ ಆರಂಭಿಸಿದ ಅಜಯ್ ರಾಯ್, ಸಮಾಜವಾದಿ #SamajavadiParty ಪಕ್ಷವನ್ನೂ ಸಹ ಸೇರಿದ್ದರು. ಉತ್ತರ ಪ್ರದೇಶ ಮೂಲದ ಅಜಯ್ ರಾಯ್ ಅವರು 5 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದವರು.
ಅವರು 1996 ರಿಂದ 2007ರ ನಡುವೆ 3 ಬಾರಿ ಬಿಜೆಪಿಯಿಂದ ಕೋಲಸ್ಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರು. 2009ರಲ್ಲಿ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ಬಿಜೆಪಿ ನೀಡದ ಕಾರಣ ಅವರು ಸಮಾಜವಾದಿ ಪಕ್ಷವನ್ನು ಸೇರಿದ್ದರು. ಅಲ್ಲಿ ಚುನಾವಣೆಯಲ್ಲಿ ಸೋತರು, ನಂತರ ಕೋಲಸ್ಲಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು.
2012 ರಲ್ಲಿ ಕಾಂಗ್ರೆಸ್ ಸೇರಿದ ಅಜಯ್ ರಾಯ್ ಪಿಂಡ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ಆದರೆ ಮತ್ತೆ 2017ರ ವಿಧಾನಸಭೆ ಚುನಾವಣೆಯಲ್ಲಿ ಸೋತರು.
ಈ ಮಧ್ಯೆ ಅವರು 2 ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದು, ಎರಡು ಬಾರಿ ಪರಾಭವಗೊಂಡಿದ್ದು ಇದೀಗ ಮೂರನೇ ಬಾರಿ ಹೋರಾಟಕ್ಕೆ ಇಳಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post