No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Wednesday, September 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನೆರೆಯವನನ್ನು ನೂಕದೇ ಎಲ್ಲರನ್ನೂ ಒಗ್ಗೂಡಿಸಿ ಸಾಗಿದ ನಿಜ ನಾಯಕ ಡಿ.ಎಸ್. ಅರುಣ್

ಮಲೆನಾಡಿನಲ್ಲಿ ಆಶಾಭಾವಗಳ ಅರುಣೋದಯ

kalpa News by kalpa News
October 24, 2019
in Special Articles
0
ನೆರೆಯವನನ್ನು ನೂಕದೇ ಎಲ್ಲರನ್ನೂ ಒಗ್ಗೂಡಿಸಿ ಸಾಗಿದ ನಿಜ ನಾಯಕ ಡಿ.ಎಸ್. ಅರುಣ್
Share on FacebookShare on TwitterShare on WhatsApp

ಅರುಣೋದಯ ಹೋ ಚುಕಾ ವೀರ,
ಅಬ ಕರ್ಮಕ್ಷೇತ್ರ ಮೇ ಜುಟ ಜಾಯೇಂ
ಅಪನೇ ಖೂನ ಪಸೀನೇ ದ್ವಾರಾ,
ನವಯುಗ ಧರತೀ ಪರ ಲಾಯೇಂ.

ಜನಸೇವೆಗೈಯಲು ರಾಜಕೀಯ ಬೇಕೆಂದೇನೂ ಇಲ್ಲ. ಸೇವೆಗೈಯುವವನಿಗೆ ರಾಜಕೀಯ ಅನಿವಾರ್ಯವೂ ಅಲ್ಲ. ರಾಜಕೀಯದಿಂದಲೇ ಎಲ್ಲವೂ ಅಲ್ಲ. ರಾಜಕೀಯದ ಹಿಂದೆ ಬೀಳುವ ಬದಲು ರಾಜಕೀಯವೇ ತನ್ನ ಹಿಂದೆ ಬರಲಿ. ಮನಸ್ಸಿದ್ದರೆ ಮಾರ್ಗವೂ ಇದೆ ಎಂಬ ಮಾತಿಗೆ ಸಾಕ್ಷಿಯಾಗಿ, ಅವಕಾಶಗಳ ಹುಡುಕಾಟದಲ್ಲಿಯೇ ಸಮಯ ಕಳೆಯುವ ಸಾಕಷ್ಟು ಜನರ ನಡುವೆ, ಇರುವ ಸಮಯವನ್ನು ಹೊಸ ಅವಕಾಶಗಳ ಸೃಷ್ಟಿಗೆ ವಿನಿಯೋಗಿಸಿ ಸಾರ್ಥಕತೆ ಪಡೆದ ನೂರಾರು ಉದಾಹರಣೆಗಳ ಸಾಲಿಗೆ ಇಂದು ಸೇರ್ಪಡೆಯಾದ ಮತ್ತೊಂದು ಉದಾಹರಣೆ, ಮಲೆನಾಡಿನ ನವ ಕುಡಿ ಡಿ.ಎಸ್. ಅರುಣ್.

ಮಾವಿನ ಮರದಲ್ಲಿ ಮಾವಲ್ಲದೇ ಮತ್ತೇನು ಬಿಡಬೇಕು? ಕುಟುಂಬದ ಹಿನ್ನೆಲೆಯೇ ಹೆಮ್ಮೆ ಪಡುವಂಥದ್ದು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ, ಕಪ್ಪು ಚುಕ್ಕೆಗಳಿಲ್ಲದ ಹಿರಿಯ ಕುಟುಂಬವೊಂದರ ಕಿರಿಯ ಕುಡಿಯಾಗಿ ಬೆಳೆದು ಅಧಿಕಾರಕ್ಕಾಗಿ ಯಾವುದೇ ರಾಜಕೀಯ ಮಾಡದೇ, ರಾಜಕೀಯದಲ್ಲಿ ಲಾಭ ಮಾತ್ರ ಕಾಣುವ ವ್ಯವಸ್ಥೆಯ ನಡುವೆ ಲಾಭಿ ನಡೆಸದೇ ಲಭ್ಯ ಹುದ್ದೆಗಳನ್ನು ಪ್ರಭುದ್ದತೆಯಿಂದ ಅಲಂಕರಿಸಬಹುದು ಎಂದು ತೋರಿಸಿಕೊಟ್ಟ ಡಿ.ಎಸ್. ಅರುಣ್, ಮುಂದೆ ಮಾದರಿ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದರೆ ಅದು ವಾಸ್ತವಕ್ಕೆ ಸನಿಹದ ಮಾತು.

ರಾಜ್ಯ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ, ವಿಧಾನಪರಿಷತ್ ಸಭಾಧ್ಯಕ್ಷರಾಗಿ ಇನ್ನಿತರೆ ಮಹತ್ತರ ಹುದ್ದೆಗಳನ್ನು ಅಲಂಕರಿಸಿ ನಿಷ್ಕಲ್ಮಷ ರಾಜಕೀಯಕ್ಕೆ ನೀರೆರೆದು ಪೋಷಿಸಿದ ತಂದೆ ಶ್ರೀ ಡಿ.ಎಚ್. ಶಂಕರಮೂರ್ತಿಯವರ ಸುಧೀರ್ಘ ರಾಜಕೀಯದ ನಂಟನ್ನು ಎಲ್ಲಿಯೂ ಬಳಸಿಕೊಳ್ಳದೇ ಸ್ವತಂತ್ರ ಅಸ್ತಿತ್ವ ರೂಪಿಸಿಕೊಂಡ ಯುವ ಉದ್ಯಮಿ, ರಾಜಕಾರಣಿ, ಸಮಾಜಸೇವಕ, ಕ್ರಿಕೆಟರ್ ಡಿ.ಎಸ್. ಅರುಣ್ ಯುವಪೀಳಿಗೆಗೆ ಮಾದರಿಯೆನಿಸಿದ್ದಾರೆ.


ನೆರೆಯವನನ್ನು ನೂಕಿ ನಾಯಕನಾಗುವುದು ರಾಜಕೀಯವಲ್ಲ. ’ಇರುವರೆಲ್ಲರನು ಒಗ್ಗೂಡಿಸಿ ಒಟ್ಟಿಗೆ ಸಾಗುವೆನೆನುವವನು ನಿಜ ನಾಯಕ’ ಎಂಬ ಅಸಾಧ್ಯದ ಮಾತು ಇಂದಿನ ರಾಜಕೀಯಕ್ಕೆ ಸಾಧ್ಯವಿಲ್ಲವೆನಿಸಿದರೂ, ಸದ್ದಿಲ್ಲದೇ ಅಸಾಧ್ಯವನು ಸಾಧ್ಯವಾಗಿಸುವ ಸಿದ್ದ ಸೂತ್ರವನು ಹೊಂದಿದವನಂತೆ ಸಾಧಿಸಿದ ಕೀರ್ತಿ ಡಿ.ಎಸ್. ಅರುಣ್ ಎಂಬ ಮೌನ ಸಾಧಕನನ್ನು ಸಮಾಜಕ್ಕೆ ಪರಿಚಯಿಸಿತ್ತು. ಪ್ರತಿಷ್ಠಿತ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಸಂಘದ ರೂವಾರಿಯಾಗಿ ಸಂಘವನ್ನು ಎರಡು ವರ್ಷಗಳ ಅವಧಿಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು ನಗರದ ವಾಣಿಜ್ಯೋದ್ಯಮದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ತೋರಿದ ಕಳಕಳಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕನಸಿನ ಮುನ್ನುಡಿಯಾಗಿ ನಗರದ ಸ್ವಚ್ಛತೆಯ ದೂರದೃಷ್ಟಿ ಹೊಂದಿ ಘನತ್ಯಾಜ್ಯ ವಿಲೇವಾರಿಯಂತಹ ಉತ್ತರವಿಲ್ಲದ ಕ್ಲಿಷ್ಠ ಸಮಸ್ಯೆಗೂ ಪರಿಹಾರಾರಾರ್ಥಕವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಮೂಲಕ ರಾಜ್ಯದಲ್ಲಿಯೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅರುಣ್ ಎಲ್ಲಿಯೂ ಇದು ತನ್ನ ಸಾಧನೆಯೆನ್ನದೇ ತಂಡದ ಸಾದನೆ ಎಂದಿದ್ದು ಅವರಲ್ಲಿನ ಉತ್ತಮ ನಾಯಕತ್ವ ಗುಣವನ್ನು ಬಿಂಬಿಸುತ್ತಿತ್ತು.

ಶಿವಮೊಗ್ಗೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಪಾಸ್ ಪೋರ್ಟ್ ಸೇವಾಕೇಂದ್ರ ಎಲ್ಲರ ಕನಸಾಗಿತ್ತು. ಆದರೆ ಕನಸು ನನಸಾಗಿಸುವ ಸಾಹಸಕ್ಕೆ ಚಾಲನೆ ಕೊಟ್ಟು ಬಿತ್ತ ಕನಸಿನ ಬೀಜಕ್ಕೆ ನೀರೆರೆಯುತ್ತ ಬಂದ ಅರುಣ್ ಅದು ಫಲ ಕೊಡುವ ಸಮಯ ಬಂದಾಗ ಆ ಸಾಧನೆಯ ಹಿರಿಮೆ ತನಗೆ ಸೇರಬೇಕೆಂದು ಎಲ್ಲೂ ಹಾತೊರೆಯದೇ ಇದ್ದ ಪ್ರಬುದ್ದತೆ ಅವರ ಬಗೆಗಿನ ಗೌರವ ಭಾವನೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಇದೀಗ ಸೇವಾಕೇಂದ್ರ ಪ್ರಾರಂಭವಾಗಿ ವರ್ಷಗಳು ಕಳೆದು ಸಾವಿರಾರು ಜನರು ಪಡೆದ ಪ್ರಯೋಜನದ ಪಾಲುದಾರನೆನಿಸಿದರೂ ಶಿವಮೊಗ್ಗೆಯ ಅಭಿವೃದ್ಧಿಗೆ ಅದು ತನ್ನ ಅಳಿಲು ಸೇವೆ ಎನ್ನುತ್ತಾರೆ.

ಪಾಲಿಕೆಗೆ ಕಗ್ಗಂಟಾಗಿದ್ದ ಟ್ರೇಡ್ ಲೈಸೆನ್ಸ್‌ ವಿಚಾರದಲ್ಲಿ ಇದ್ದ ಅಡೆತಡೆಗಳ ನಿವಾರಣೆಗೆ ಪಾಲಿಕೆಯೊಂದಿಗೆ ಶ್ರಮ ವಹಿಸಿ ನಿಯಮಗಳನ್ನು ಸರಳೀಕರಿಸಲು ನೀಡಿದ ಸಹಕಾರ, ಕಲ್ಲೂರು ಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದ ಹಲವು ಮೂಲ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ, ಇತ್ಯಾದಿ ಹತ್ತು ಹಲವಾರು ಸಮಸ್ಯೆಗಳಿಗೆ, ಒಬ್ಬ ಶಾಸನಬದ್ದ ರಾಜಕಾರಣಿ ಮಾಡಬಹುದಾದ ಕೆಲಸಗಳನ್ನು ತಮ್ಮ ಕಾರ್ಯವ್ಯಾಪ್ತಿಯ ಅಡಿಯಲ್ಲಿಯೇ ನಿರ್ವಹಿಸಬಹುದಾದ ಸಾಧ್ಯತೆಗಳ ಮೂಲಕ ಮಾದರಿ ಎನಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷನಾಗಿ ಅಭೂತಪೂರ್ವ ಯಶಸ್ಸು ಸಾಧಿಸಿದ ಶ್ರೇಯಸ್ಸನ್ನು ತಮ್ಮ ತಂಡಕ್ಕೆ ಸಮರ್ಪಿಸಿ ನಿರ್ಗಮಿಸಿದ ನಂತರದಲ್ಲಿ ಈವರೆಗೂ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯ ಮೂಲಕ ಚುನಾವಣೆಗಳ ಅನಗತ್ಯತೆಯನ್ನು ಸಾರುತ್ತಾ ಹೊಸ ಸಂಪ್ರದಾಯದ ಹುಟ್ಟಿಗೆ ಕಾರಣರಾಗಿ ಅವಿರೋಧ ಆಯ್ಕೆಗಳ ಸರದಾರನೆನಿಸಿಕೊಂಡಿದ್ದಾರೆ ಡಿ.ಎಸ್. ಅರುಣ್.

ಬೆಳ್ಳಿಮಂಡಲ ಮತ್ತು ಅಂಬೆಗಾಲು – ಚಿತ್ರರಸಿಕರಿಗೆ ಸದಭಿರುಚಿಯ ಚಲನಚಿತ್ರಗಳ ಆಸಕ್ತಿ ಮೂಡಿಸಿ, ಸಾರ್ವಜನಿಕರಿಗೆ ಜನಪ್ರಿಯ ಮತ್ತು ಮನರಂಜನೆಯನ್ನು ಬದಿಗಿಟ್ಟು ವಿಚಾರಕ್ಕೆಡೆ ಮಾಡಿಕೊಡುವಂತಹ ರಾಷ್ಟ್ರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳ ಪ್ರದರ್ಶನದ ಮೂಲಕ ಸಾಮಾಜಿಕ ಬದಲಾವಣೆಗಳನ್ನು ಮೂಡಿಸುವ ಸ್ತುತ್ಯ ಕಾರ್ಯ ಮಾಡುತ್ತ ಜನಪ್ರಿಯತೆ ಪಡೆದ ಬೆಳ್ಳಿಮಂಡಲದ ರೂವಾರಿಯಾಗಿಯೂ ಜವಾಬ್ದಾರಿ ಮೆರೆದ ಅರುಣ್ ‘ಅಂಬೆಗಾಲು’ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣರಾಗಿ ಯುವ ನಿರ್ದೇಶಕರು, ಯುವ ನಟ ನಟಿಯರ ಸೃಷ್ಟಿಗೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಅರುಣ್ ತಂಡ ರಾಜ್ಯದಲ್ಲೇ ಏಕೆ ರಾಷ್ಟ್ರದಲ್ಲೇ ಮೊದಲು ಎನ್ನಬಹುದಾದ ಇಂತಹ ಯೋಜನೆಗಳು ಸಾಕಷ್ಟು ಯುವಕ ಯುವತಿಯರಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಮಾರ್ಗದರ್ಶಿಯಾಗಿ ಪ್ರತಿ ವರ್ಷ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದೆ.

ಪ್ರತಿಷ್ಠಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಶಿವಮೊಗ್ಗ ವಿಭಾಗದ ರಾಯಭಾರಿಯಾಗಿ ಅವಿರೋಧ ಆಯ್ಕೆಯ ಮೂಲಕ ಮತ್ತೊಮ್ಮೆ ಹೆಸರು ಮಾಡಿ ಶಿವಮೊಗ್ಗದ ಕೀರ್ತಿ ಪತಾಕೆಯನ್ನು ಹಾರಿಸಿ ಕ್ರೀಡಾಕ್ಷೇತ್ರದಲ್ಲಿ ಸಫಲತೆ ತೋರಿ ಸಾಧನೆಗೆ ಅಣಿಯಾಗಿದ್ದಾರೆ ಅರುಣ್.

ನಗರದ ಪ್ರತಿಷ್ಠಿತ ಕಂಟ್ರಿ ಕ್ಲಬ್ ನ ಅವಿರೋಧ ಅದ್ಯಕ್ಷರಾಗಿ ಸತತ ಮೂರನೇ ಅವಧಿಗೆ ಮುಂದುವರೆದು ಸಂಸ್ಥೆಯ ಬೆಳವಣಿಗೆಗೆ ಆದ್ಯತೆ ನೀಡಿ ನುಡಿದಂತೆ ನಡೆಯುವ ಸನ್ಮಿತ್ರ ಎಂದು ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೈಶ್ಯ ಸಮುದಾಯದ ಪ್ರತಿಷ್ಠಿತ ಆರ್ಯವೈಶ್ಯ ಮಹಾಜನ ಸಮಿತಿಗೆ ಅವಿರೋಧ ಅಧ್ಯಕ್ಷರಾಗಿ ಆಯ್ಕೆಗೊಂಡ ಹೊಸ್ತಿಲಲ್ಲಿಯೇ ಶಿವಮೊಗ್ಗಕ್ಕೆ ಮಹಾಮಾರಿಯಂತೆ ಬಂದೆರಗಿದ ಮಹಾನೆರೆ ಸೃಷ್ಟಿಸಿದ್ದ ಅನಾಹುತಗಳಿಗೆ ಮಿಡಿದು ಸರ್ಕಾರದ ಅನುದಾನಕ್ಕೆ ಕಾಯದೇ ತಕ್ಷಣವೇ ಹಾನಿಗೊಳಗಾದ 50ಕ್ಕೂ ಹೆಚ್ಚು ಸಂತ್ರಸ್ತರನ್ನು ಭೇಟಿ ಮಾಡಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ಅನುದಾನವನ್ನು ನೀಡುವುದರೊಂದಿಗೆ ನೊಂದವರ ಬಾಳಿನ ಆಪದ್ಬಾಂಧವ ಎನಿಸಿದ್ದಾರೆ. ಅವರ ಸಾಧನೆಗಳ ಹಿರಿಮೆಯೊಂದಿಗೆ ಶಿವಮೊಗ್ಗದ ಮುಕುಟಕ್ಕೆ ಮತ್ತೊಂದು ಗರಿ ಸೇರಿದ್ದು ಶಿವಮೊಗ್ಗೆಯ ಹೆಮ್ಮೆಯೇ ಎನ್ನಬಹುದು.

ವೈಶ್ಯ ಸಮುದಾಯದ ಪ್ರತಿಷ್ಠಿತ ಆರ್ಯವೈಶ್ಯ ಮಹಾಜನ ಸಮಿತಿಗೆ ಅವಿರೋಧ ಅಧ್ಯಕ್ಷರಾಗಿ ಆಯ್ಕೆಗೊಂಡ ಹೊಸ್ತಿಲಲ್ಲಿಯೇ ಶಿವಮೊಗ್ಗಕ್ಕೆ ಮಹಾಮಾರಿಯಂತೆ ಬಂದೆರಗಿದ ಮಹಾನೆರೆ ಸೃಷ್ಟಿಸಿದ್ದ ಅನಾಹುತಗಳಿಗೆ ಮಿಡಿದು ಸರ್ಕಾರದ ಅನುದಾನಕ್ಕೆ ಕಾಯದೇ ತಕ್ಷಣವೇ ಹಾನಿಗೊಳಗಾದ 50ಕ್ಕೂ ಹೆಚ್ಚು ಸಂತ್ರಸ್ತರನ್ನು ಭೇಟಿ ಮಾಡಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ಅನುದಾನವನ್ನು ನೀಡುವುದರೊಂದಿಗೆ ನೊಂದವರ ಬಾಳಿನ ಆಪದ್ಬಾಂಧವ ಎನಿಸಿದ್ದಾರೆ. ಅವರ ಸಾಧನೆಗಳ ಹಿರಿಮೆಯೊಂದಿಗೆ ಶಿವಮೊಗ್ಗದ ಮುಕುಟಕ್ಕೆ ಮತ್ತೊಂದು ಗರಿ ಸೇರಿದ್ದು ಶಿವಮೊಗ್ಗೆಯ ಹೆಮ್ಮೆಯೇ ಎನ್ನಬಹುದು.

ಕರ್ನಾಟಕ ಸರ್ಕಾರದಿಂದ ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾದ್ಯಕ್ಷರಾಗಿ ಸಚಿವ ಸ್ಥಾನಮಾನದದೊಂದಿಗೆ ಅಧಿಕಾರ ವಹಿಸಿಕೊಂಡು ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಕಟಿಬದ್ದರಾಗಿ ದುಡಿಯಲು ಕಂಕಣ ತೊಟ್ಟು ನಿಂತಿರುವ ಡಿ.ಎಸ್. ಅರುಣ್ ಪ್ರಬುದ್ದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಹಾಗೂ ಎಲ್ಲ ಸಾರ್ವಜನಿಕ ರಂಗಗಳಲ್ಲಿ ತಮ್ಮ ಛಾಪು ಮೂಡಿಸಿ ಭವಿಷ್ಯದ ನಾಯಕನಾಗಿ ಹೊರಹೊಮ್ಮುವ ಸಕಲ ಗುಣಗಳನ್ನು ಹೊಂದುವ ಮೂಲಕ ಶಿವಮೊಗ್ಗೆಯ ಜನರಲ್ಲಿ ಹೊಸ ಆಶಾಭಾವನೆಯ ಅರುಣೋದಯದ ಆಶಾ ಕಿರಣವನ್ನು ಮೂಡಿಸಿದ್ದಾರೆ.

Tags: Aryavasya Development CorporationD S ArunD.H. SHANKARAMURTHYKannada ArticleMalnad NewsMinister of StateNagaraj ShetterPeople servicepoliticsShivamoggaState CabinetVaisya communityಆರ್ಯವೈಶ್ಯ ಅಭಿವೃದ್ಧಿ ನಿಗಮಜನಸೇವೆಡಿ.ಎಚ್. ಶಂಕರಮೂರ್ತಿಡಿ.ಎಸ್. ಅರುಣ್ರಾಜಕೀಯರಾಜ್ಯ ಮಂತ್ರಿಮಂಡಲವೈಶ್ಯ ಸಮುದಾಯ
Share228Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ: ಅತಿವೃಷ್ಠಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕ್ಯಾ.ಮಣಿವಣ್ಣನ್ ಹೇಳಿದ್ದೇನು?

Next Post

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

kalpa News

kalpa News

Next Post
ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL