ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಗ್ರಾಹಕರೊಬ್ಬರಿಗೆ ಒಪ್ಪಂದದಂತೆ ಅಪಘಾತ ವಿಮಾ ಹಣ ವಿತರಿಸದ ಖಾಸಗಿ ವಿಮಾ ಕಂಪೆನಿಯೊಂದಕ್ಕೆ ರೂ. 15 ಲಕ್ಷ ಡೆಪಾಸಿಟ್ ಇರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ನವಲಗುಂದ ತಾಲೂಕಿನ ಹಾಲ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪ ಸವದಿ ಎನ್ನುವವರು ತಮ್ಮ ಗೂಡ್ಸ್ ವಾಹನಕ್ಕೆ ರೂ. 15 ಲಕ್ಷ ವೈಯಕ್ತಿಕ ಅಪಘಾತದ ವಿಮೆ ಮಾಡಿಸಿದ್ದರು. 2021ರ ಮಾರ್ಚ್ ತಿಂಗಳಿನಲ್ಲಿ ಈ ವಾಹನ ಹುಬ್ಬಳ್ಳಿ-ವಿಜಯಪುರ ರಸ್ತೆಯಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ವಾಹನದ ಮಾಲೀಕರೂ ಆದ ಚಾಲಕ ಬಸವರಾಜ್ ತೀವ್ರವಾಗಿ ಗಾಯಗೊಂಡು ಮೃತರಾಗಿದ್ದರು.

ವಿಮಾ ಕಂಪನಿಯ ನಡಾವಳಿಕೆ ಗ್ರಾಹಕರ ಹಿತರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ವಿಮಾಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಮೃತನ ಸಹೋದರಿ ಬಸವ್ವ ಮತ್ತು ಮೃತನ ಹೆಂಡತಿ ಅನ್ನುವ ಮಾಲಾಶ್ರೀ ಅವರು ಮೃತನ ಸಾವಿನಿಂದ ಬರಬಹುದಾದ ಪರಿಹಾರದ ಹಣವನ್ನು ತಮಗೆ ಕೊಡುವಂತೆ ಕೋರಿ ಧಾರವಾಡ ಮತ್ತು ಬೆಳಗಾವಿಯ ಕೋರ್ಟುಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

Also read: ಬಿಸಿಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ ಶಿಕ್ಷಕ: ನಾಲ್ಕನೇ ತರಗತಿ ವಿದ್ಯಾರ್ಥಿ ಸಾವು
ದೂರುದಾರ ಮೃತನ ಮಗನಿದ್ದು, ಒಬ್ಬ ಸಹೋದರಿ ಹಾಗೂ ಇನ್ನೊಬ್ಬ ಹೆಂಡತಿಯ ಮಧ್ಯೆ ಮೃತನ ಅವಲಂಬಿತರಾರು ಎನ್ನುವ ಬಗ್ಗೆ ತಂಟೆ ತಕರಾರು ಇದೆ. ಅಂತಹ ಗಂಭೀರ ಸಂಗತಿಗಳನ್ನು ನಿರ್ಣಯಿಸುವ ಅಧಿಕಾರ ವ್ಯಾಪ್ತಿ ಗ್ರಾಹಕರ ಆಯೋಗಕ್ಕೆ ಬರುವುದಿಲ್ಲ. ಕಾರಣ ಅವರು ಸಂಬಂಧಿಸಿದ ಸಿವಿಲ್ ಕೋರ್ಟು ಅಥವಾ ಅಧಿಕಾರಯುತ ಪ್ರಾಧಿಕಾರದ ಮುಂದೆ ಪ್ರಕರಣ ದಾಖಲಿಸಿ ಆ ಹಣ ಪಡೆಯಲು ತಾವೇ ಹಕ್ಕುದಾರರು ಎಂದು ಆದೇಶ ತರುವಂತೆ ಆಯೋಗ ಆ ಮೂವರಿಗೂ ನಿರ್ದೇಶನ ನೀಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post