Sunday, July 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಬೇಡುವ ವರ ನೀಡುವ ಬಳ್ಳಾರಿ ಗ್ರಾಮದೇವತೆ ಕನಕ ದುರ್ಗಮ್ಮ ದೇವಿಯ ಶಕ್ತಿ ಎಂತಹುದ್ದು ಗೊತ್ತಾ?

May 2, 2019
in Special Articles
0 0
0
Share on facebookShare on TwitterWhatsapp
Read - 2 minutes

ಬಳ್ಳಾರಿಯ ಗ್ರಾಮದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಸುಮಾರು 200 ವರ್ಷಗಳ ಹಿಂದಿನ ಇತಿಹಾಸ ಬಂಗಾರ ಪ್ರಿಯೆ ಶ್ರೀಕನಕ ದುರ್ಗಮ್ಮ ದೇವಿಯ ಮಹಿಮೆ ಅಪಾರ. ನಂಬಿದ ಭಕ್ತರನ್ನು ಕೈ ಬಿಡುವುದಿಲ್ಲ ಈ ದೇವಿಯ ಸನ್ನಿಧಿಯಲ್ಲಿ ಯಾವುದೇ ಜಾತಿ-ಮತಗಳ ಭೇದವಿಲ್ಲ. ಬೇಡಿ ಬಂದ ಭಕ್ತರಿಗೆ ವರವ ನೀಡುವ ಶ್ರೀ ಕನಕ ದುರ್ಗಾದೇವಿ.

ಸಂತಾನ, ವಿವಾಹ, ವ್ಯಾಪಾರ ಹೀಗೆ ಹಲವು ಇಷ್ಟಾರ್ಥಗಳನ್ನು ಈಡೇರಿಸಿದ್ದಾಳೆ. ಹೀಗಾಗಿ ಈ ದೇವಿಯ ದರ್ಶನ ಪಡೆಯಲು ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಅನೇಕ ಪವಾಡಗಳು ನಡೆಯುತ್ತವೆ.

ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನ ಬಳ್ಳಾರಿ ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನ. ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿದ್ದು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತನ್ನ ಹೆಸರಲ್ಲೇ ಬಂಗಾರವನ್ನು ಹೊಂದಿರುವ ಶ್ರೀ ಕನಕದುರ್ಗ ದೇವಿ, ಭಕ್ತರ ಪಾಲಿಗೆ ಬೇಡಿದ್ದನ್ನು ನೀಡುವ ಮಹಾ ತಾಯಿಯಾಗಿದ್ದಾಳೆ.


ಶಕ್ತಿ ದೇವತೆ ಕನಕದುರ್ಗ ಗಣಿನಾಡು ಬಳ್ಳಾರಿ ಜಿಲ್ಲೆಯ ಅಧಿದೇವತೆಯಾಗಿದ್ದಾಳೆ. ಇಲ್ಲಿನ ಜನರು ಯಾವುದೇ ಕೆಲಸಕ್ಕೆ ಹೋಗಬೇಕಾದರೂ ಈ ದುರ್ಗಮ್ಮ ದೇವಿಯ ದರ್ಶನ ಪಡೆದ ನಂತರವೇ ಮುಂದೆ ಹೆಜ್ಜೆ ಹಾಕುತ್ತಾರೆ.

ಕನಕ ದುರ್ಗೆಗೆ ಬಳ್ಳಾರಿ ಜಿಲ್ಲೆಯ ಗಣಿನಾಡಿನ ಭಕ್ತರಲ್ಲದೆ, ಆಂಧ್ರ ಪ್ರದೇಶದಿಂದಲೂ ಸಹ ಭಕ್ತರು ಬರುತ್ತಾರೆ. ಶ್ರೀ ಕನಕ ದುರ್ಗಮ್ಮ ದೇವಿ ಹುತ್ತದಿಂದ ಹುಟ್ಟಿ ಬಂದಿದ್ದಾಳೆ ಎಂದು ಹೇಳಲಾಗುತ್ತದೆ. ಕನಕ ದುರ್ಗಮ್ಮ ಎನ್ನುವುದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖವಾಗಿದೆ.

ಹುತ್ತದಿಂದ ಹುಟ್ಟಿ ಬಂದಿರುವ ಕನಕ ದುರ್ಗಾ ದೇವಿಗೆ ಹುತ್ತದ ಬಳಿಯಲ್ಲಿ ಇಂದಿಗೂ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ಪೂಜೆಗೊಳ್ಳುವ ಈ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.


ಪೂರ್ವಜರ ಹೇಳಿಕೆಯ ಪ್ರಕಾರ, ಹಲವಾರು ವರ್ಷಗಳ ಹಿಂದೆ ಒಂದು ಹುತ್ತದ ರೂಪದಲ್ಲಿ ಶ್ರೀ ಕನಕ ದುರ್ಗಿಯು ಹುಟ್ಟಿ ಬಂದಿದ್ದಾಳೆ. ಪ್ರತಿ ಶುಕ್ರವಾರ ದೇವಿಯ ವಾರವಾಗಿರುವುದರಿಂದ ಶುಕ್ರವಾರದ ದಿನ ಭಕ್ತಸಾಗರವೇ ಹರಿದು ಬರುತ್ತದೆ. ಇಲ್ಲಿ ವಿಷೇಷವಾಗಿ ಮಹಿಳೆಯರು ನಿಂಬೆಹಣ್ಣಿನ ದೀಪ ಹಚ್ಚುವ ಮೂಲಕ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊರುತ್ತಾರೆ. ಹೀಗೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ನಂತರ ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ.

ಕನಕದುರ್ಗ ಕನಕ ಪ್ರಿಯೆ ಅಂದರೆ ಬಂಗಾರ ಎಂದರೆ ತುಂಬಾ ಇಷ್ಟ. ಹಾಗಾಗಿಯೇ ತಾಯಿಯ ಅಲಂಕಾರಕ್ಕಾಗಿ 8 ಕೆಜಿಗೂ ಹೆಚ್ಚು ಬಂಗಾರ ಅಲಂಕಾರಿಕ ಸಾಮಾಗ್ರಿಗಳನ್ನು ವಿಶೇಷ ದಿನಗಳಲ್ಲಿ ಹಾಕಿ ಅಲಂಕಾರ ಮಾಡಲಾಗುತ್ತದೆ. ಆದರೆ ಬಂಗಾರದ ಆಭರಣಗಳನ್ನು ವರ್ಷಕ್ಕೆ ನಾಲ್ಕು ದಿನಗಳಲ್ಲಿ ಮಾತ್ರ ದೇವಿಗೆ ತೊಡಿಸಲಾಗುತ್ತದೆ. ದಸರಾ, ಯುಗಾದಿ, ವರಮಹಾಲಕ್ಷ್ಮಿ ಹಾಗೂ ಸಿಡಿ ಬಂಡೆ ಉತ್ಸವದ ವೇಳೆಯಲ್ಲಿ ದೇವಿಗೆ ಬಂಗಾರದ ಆಭರಣಗಳ ಮೂಲಕ ಅಲಂಕಾರ ಮಾಡಲಾಗುತ್ತದೆ. ಆ ವೇಳೆಯಲ್ಲಿ ಅಲಂಕಾರಗೊಂಡ ದೇವಿಯ ದರ್ಶನ ಪಡೆಯುವುದೇ ಪುಣ್ಯ. ಉಳಿದ ಎಲ್ಲ ದಿನಗಳಲ್ಲಿ ದೇವಿಗೆ ಬೆಳ್ಳಿಯ ಆಭರಣಗಳ ಅಲಂಕಾರ ಹಾಗೂ ವಿವಿಧ ಹೂವುಗಳ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.


ಅಧಿದೇವತೆ ಕನಕದುರ್ಗ ಮನೆಗೆ ಪ್ರತಿವರ್ಷ ಶಿವರಾತ್ರಿ ಹಬ್ಬದ ಅಮಾವಾಸ್ಯೆಯ ನಂತರ ಬರುವ ಮಂಗಳವಾರದ ದಿನ ದೇವಿಗೆ ಸಿಡಿ ಬಂಡೆ ಉತ್ಸವ ನಡೆಯುತ್ತದೆ. ಈ ಉತ್ಸವದ ಆಚರಣೆಯ ಹಿಂದೆ ನೂರಾರು ವರ್ಷಗಳ ಇತಿಹಾಸವಿದೆ. ಸಾಂಕ್ರಾಮಿಕ ರೋಗಗಳು ಬಂದು ಹೆಚ್ಚಾಗಿ ಜನರು ಸಾಯುತ್ತಿದ್ದಾಗ ಸಿಡಿ ಬಂಡೆ ಉತ್ಸವ ನಡೆಸಿದರಂತೆ. ಆದ್ದರಿಂದ ರೋಗ ನಿರ್ಮೂಲನೆಯಾಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಅಂದಿನಿಂದಲೂ ಇಂದಿನವರೆಗೂ ಶಿವರಾತ್ರಿ ನಂತರ ಬರುವ ಮಂಗಳವಾರದಂದು ದೇವಿಗೆ ಸಿಡಿಬಂಡಿ ಉತ್ಸವ ನಡೆಯುತ್ತದೆ.

ಈ ಉತ್ಸವಕ್ಕೆ ವಿಶೇಷವಾಗಿ ಸದ್ದಿನ ಗಾಣಿಗ ಸಮುದಾಯದ ಜನರೇ ತಯಾರಿಸಿದ ಸಿಡಿ ಬಂಡಿಯನ್ನು ಬಳಸಲಾಗುತ್ತದೆ. ಗಾಣಿಗ ಸಮುದಾಯದ ಜನರು ಅಂದು 40 ಅಡಿ ಉದ್ದದ ಮರದ ದಿಮ್ಮಿಯನ್ನು ಹಾಗೂ ಮೂರು ಎತ್ತುಗಳ ಬಂಡಿಯನ್ನು ಸಜ್ಜುಗೊಳಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಿಯ ದೇವಸ್ಥಾನದ ಸುತ್ತ ಮೂರು ಸುತ್ತುಗಳ ಸಿಡಿ ಬಂಡಿಯನ್ನು ಓಡಿಸಲಾಗುತ್ತದೆ.

ಜಾತ್ರೆ ನಡೆದಾಗ ಭಕ್ತರು ರಥಕ್ಕೆ ಹಣ್ಣು, ಹೂವು, ಎಸೆದು ದೇವಿಗೆ ಸಂತುಷ್ಟ ಗೊಲಿಸುತ್ತಾರೆ ಎನ್ನುವ ನಂಬಿಕೆ ಇದೆ. ಅಲ್ಲದೆ ಸಿಡಿ ಬಂಡಿ ಉತ್ಸವದ ವೇಳೆಯಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆಯನ್ನು ಹೊತ್ತರೆ ಈ ಹರಕೆಗಳು ಈಡೇರುತ್ತವೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಪ್ರತಿವರ್ಷ ನಡೆಯುವ ಸಿಡಿ ಬಂಡಿ ಉತ್ಸವದ ವೇಳೆ ಸುಮಾರು ಮೂರರಿಂದ ಐದು ಲಕ್ಷ ಜನರು ಭಾಗವಹಿಸಿ ಸಿಡಿ ಉತ್ಸವವನ್ನು ಯಶಸ್ವಿಗೊಳಿಸುತ್ತಾರೆ. ಅಲ್ಲದೆ ತಮ್ಮ ಹರಕೆಯನ್ನು ಪೂರೈಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಸಾಧ್ಯವಾದರೆ ನೀವೂ ಒಮ್ಮೆ ಈ ದೇವಿಯ ದರ್ಶನ ಪಡೆದು ಧನ್ಯರಾಗಿರಿ. ಹೆಚ್ಚಿನ ವಿಚಾರ ಇದ್ದರೆ ಪವಾಡಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಲೇಖನ: ಮುರಳೀಧರ್ ನಾಡಿಗೇರ್

Tags: BellaryKannada ArticleMiracleSpecial Articleಅಧಿದೇವತೆಕನಕ ದುರ್ಗಮ್ಮ ದೇವಿಗಾಣಿಗ ಸಮುದಾಯಪವಾಡಬಳ್ಳಾರಿಬಳ್ಳಾರಿ ಗ್ರಾಮದೇವತೆ
Previous Post

ಇದು ಆರಂಭವಷ್ಟೇ, ಮುಂದೇನಾಗುತ್ತೆ ಕಾದು ನೋಡಿ: ಉಗ್ರರಿಗೆ ಮೋದಿ ಎಚ್ಚರಿಕೆ

Next Post

ಟಕ್ಕರ್ ಟೀಸರ್ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಟಕ್ಕರ್ ಟೀಸರ್ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ವಿದ್ಯುತ್ ಟ್ರಾನ್ಸ್ಫಾಮರ್ ಮೇಲೆ ಉರುಳಿದ ಬೃಹತ್ ಮರ | ತಪ್ಪಿದ ಅನಾಹುತ

July 27, 2025

ಭದ್ರಾವತಿ | ರೈಲ್ವೆ ಹಳಿ ಮೇಲೆ ಬಿದ್ದ ಮರ | ತಡವಾಗಿ ಚಲಿಸಿದ ಯಶವಂತಪುರ – ಶಿವಮೊಗ್ಗ ರೈಲು

July 27, 2025

ಪುಷ್ಯ ಮಳೆ ಅಬ್ಬರ | ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ | ಸಂಚಾರ ಸ್ಥಗಿತ

July 27, 2025

ಡ್ಯಾಂನಿಂದ ಭದ್ರಾ ನದಿಗೆ ನೀರು | ಭದ್ರಾವತಿಯಲ್ಲಿ ಸೇತುವೆ ಮಟ್ಟಕ್ಕೆ ಹರಿವು | ಸಂಚಾರ ಬಂದ್

July 27, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ವಿದ್ಯುತ್ ಟ್ರಾನ್ಸ್ಫಾಮರ್ ಮೇಲೆ ಉರುಳಿದ ಬೃಹತ್ ಮರ | ತಪ್ಪಿದ ಅನಾಹುತ

July 27, 2025

ಭದ್ರಾವತಿ | ರೈಲ್ವೆ ಹಳಿ ಮೇಲೆ ಬಿದ್ದ ಮರ | ತಡವಾಗಿ ಚಲಿಸಿದ ಯಶವಂತಪುರ – ಶಿವಮೊಗ್ಗ ರೈಲು

July 27, 2025

ಪುಷ್ಯ ಮಳೆ ಅಬ್ಬರ | ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ | ಸಂಚಾರ ಸ್ಥಗಿತ

July 27, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!