ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸನಗರ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಗರದ ಸೆಲೆಕ್ಷನ್ ವೆಜಿಟೆಬಲ್ಸ್ ಅಂಗಡಿ ವತಿಯಿಂದ ಬಡ ಉಚಿತ ತರಕಾರಿ ವಿತರಣೆ ಮಾಡಲಾಯಿತು.
ಸುಮಾರು 100 ಕುಟುಂಬಗಳಿಗೆ ತಲಾ ರೂ 300 ಬೆಲೆಯ ಹುರಳಿಕಾಯಿ, ಟಮೋಟೊ, ಈರುಳ್ಳಿ, ಮೂಲಂಗಿ, ಕ್ಯಾರೇಟ್, ಬೀಟ್ರೋಟ್ ಸೇರಿದಂತೆ ವಿವಿಧ ತರಕಾರಿ ವಿತರಣೆ ಮಾಡಲಾಯಿತು.
ಅಂಗಡಿ ಮಾಲೀಕ ಯಾಸೀನ್, ಸಿದ್ದೀಕ್ ಜೊತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಮಾಜಿ ಅಧ್ಯಕ್ಷ ಮಹಾಬಲರಾವ್, ಬಸವರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮಾಸ್ಕ್ ವಿತರಣೆ
ಹೊಸನಗರ ಪಟ್ಟಣ ಪಂಚಾಯ್ತಿ ವತಿಯಿಂದ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು ಮುಖ್ಯಾಧಿಕಾರಿ ಬಾಲಚಂದ್ರಪ್ಪ ಮಾಸ್ಕ್ ವಿತರಿಸಿದರು.
(ವರದಿ: ಶ್ರೀಕಂಠ, ಹೊಸನಗರ)
Get in Touch With Us info@kalpa.news Whatsapp: 9481252093
Discussion about this post