No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Sunday, September 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಅಷ್ಟಮಂಗಲ ಜ್ಯೋತಿಷ್ಯದ ಮೇರುಶಿಖರ: ರಾಘವೇಶ್ವರ ಶ್ರೀ

kalpa News by kalpa News
September 14, 2024
in ಉತ್ತರ ಕನ್ನಡ
0
ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಅಷ್ಟಮಂಗಲ ಹಲವು ಆಯಾಮಗಳನ್ನು ಒಳಗೊಂಡಿದ್ದು, ಅಷ್ಟಮಂಗಲವು ಜ್ಯೋತಿಷ್ಯದ ಮೇರುಶಿಖರವಿದ್ದಂತೆ. ಇದರ ಸಮಗ್ರ ಫಲ ನಿರೂಪಣೆಗೆ ವಿಶೇಷ ಮಹತ್ವವಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ಹೇಳಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 55ನೇ ದಿನವಾದ ಶುಕ್ರವಾರ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.
ಶಿಶುವಿನಿಂದ ಲಗ್ನನಿರ್ಣಯ ಮಾಡುವಂಥ ವಿಶೇಷ ಪರಿಕಲ್ಪನೆ ಜ್ಯೋತಿಷದಲ್ಲಿದೆ. ದೇವಸ್ಥಾನ ಅಥವಾ ಇತರ ಅತಿದೊಡ್ಡ ವ್ಯವಸ್ಥೆಗಳ ಭವಿಷ್ಯ ಚಿಂತನೆ ನಡೆಸಲು ಇದನ್ನು ಬಳಸಲಾಗುತ್ತದೆ. ಇದಕ್ಕೆ ಅಷ್ಟಮಂಗಲ ಪ್ರಶ್ನೆಯೆಂದು ಹೆಸರು. ಜ್ಯೋತಿಷದ ಮೇರುಶಿಖರ. ಜ್ಯೋತಿಷದ ಸಂಪೂರ್ಣ ಜ್ಞಾನ ಅಷ್ಟಮಂಗಲದ ನಿರೂಪಣೆಗೆ ಅಗತ್ಯ ಎಂದು ಹೇಳಿದರು.

ಎಂಟು ಮಂಗಲವಸ್ತುಗಳ ಸಮ್ಮುಖದಲ್ಲಿ ಪ್ರಶ್ನಚಿಂತನ ನಡೆಯುವುದೇ ಅಷ್ಟಮಂಗಲ. ತಾಂಬೂಲ, ಅಕ್ಷತೆ, ಕ್ರಮುಕ, ಧಾರುಭಾಜನ, ಅಂಬರ, ದರ್ಪಣ, ಗ್ರಂಥ, ದೀಪಗಳೇ ಅಷ್ಟಮಂಗಲಗಳು. ಇವುಗಳ ಸಾಕ್ಷಿತ್ವದಲ್ಲಿ ಅಷ್ಟಮಂಗಲ ನಡೆಯುತ್ತದೆ. ಇದು ಶಾಸ್ತ್ರದ ಶಿಖರವಿದ್ದಂತೆ ಎಂದು ಬಣ್ಣಿಸಿದರು.

ಕವಡೆಗಳ ಮೂಲಕ ಅಷ್ಟಮಂಗಲವನ್ನು ವಿವರಿಸುವ ಪರಿಕಲ್ಪನೆಯೂ ಇಡೀ ಚಿಂತನೆಯ ಒಂದು ಭಾಗ. ಅಷ್ಟಮಂಗಲ ಎಂಬ ಹೆಸರಿಗೆ ಇದೂ ಕಾರಣ ಎಂದರು.
ಪೃಚ್ಛಕನ ನಿವೇದನೆ, ನಿರ್ಗಮ, ಮಾರ್ಗ, ಮಂದಿರಗತಿ, ಪ್ರಶ್ನಕ್ರಿಯಾಸಂಭವ, ಸೂತ್ರ, ಸ್ಫುಟ, ಅಷ್ಟಮಂಗಲ ಫಲ, ಆರೂಢ, ಉದಯ, ಚಂದ್ರಾಧಿಷ್ಟಿತ, ಆಯಸ್ಸು, ದ್ವಾದಶಭಾವ ಚಿಂತನೆ, ದೈವಾನುಕೂಲತೆ, ಬಾಧೆ, ಅಭಿಚಾರ ಇತ್ಯಾದಿ ಆಯಾಮಗಳ ಮೂಲಕ ಅಷ್ಟಮಂಗಲ ನಡೆಯುತ್ತದೆ ಎಂದು ವಿವರಿಸಿದರು.

Also read: ಗೇಮಿಂಗ್ ಆ್ಯಪ್ ಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆಯಿರಿ: ಶಿಕ್ಷಕ ಸುಕೇಶ್ ಸೇರಿಗಾರ್ ಸಲಹೆ

ಅಷ್ಟಮಂಗಲಕ್ಕೆ ಯಜಮಾನ ಮಾಡಿಕೊಳ್ಳುವ ಪ್ರಥಮ ನಿವೇದನೆಗೆ ಕೂಡ ವಿಶೇಷ ಮಹತ್ವವಿದೆ. ಇದರಲ್ಲಿ ಕಾಲ, ದೇಶ, ಶ್ವಾಸ, ದಶಾ, ಸ್ಪøಷ್ಟಾಂಗ, ಪೃಚ್ಛಕ ನಿಂತ ದಿಕ್ಕು, ಪ್ರಶ್ನಾಕ್ಷರಗಳು, ಪೃಚ್ಛಕನ ಸ್ಥಿತಿ, ಪೃಚ್ಛಕನ ಚೇಷ್ಟೆ, ಭಾವ, ನೋಟ, ವಸ್ತ್ರ, ತಾಂಬೂಲ, ಅನುಭವಕ್ಕೆ ಬರುವ ಸಕಲ ಸಂಗತಿಗಳು ಇದರಲ್ಲಿ ಸೇರುತ್ತವೆ. ಇವೆಲ್ಲವನ್ನೂ ದೈವಜ್ಞ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎಂದು ಬಣ್ಣಿಸಿದರು.

ಕಾಲದ ವಿಚಾರಕ್ಕೆ ಬಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಪ್ರಮುಖವಾಗುತ್ತದೆ. ಅಂತೆಯೇ ಪ್ರಶ್ನೆ ಕೇಳಿದ ಜಾಗ ಕೂಡಾ ಪ್ರಮುಖವಾಗುತ್ತದೆ. ಫಲ ಬಿಡುವ, ಸುಂದರ, ಪುಷ್ಪಗಳಿದ್ದ ಪರಿಸರದಲ್ಲಿ, ಸ್ವರ್ಣರತ್ನಗಳಿದ್ದರೆ ಅದು ಶುಭಸೂಚನೆ. ಮನಸ್ಸಿಗೆ ಸಂತೋಷ ಉಂಟುಮಾಡಿದ್ದರೆ, ಗೋಮಯದಿಂದ ಸಾರಿಸಿದ್ದರೆ, ಸಮತಟ್ಟಾಗಿದ್ದರೆ, ಮಂಗಲಕಾರ್ಯ ನೆರವೇರುವುದಿದ್ದರೆ, ಅದು ಶುಭತ್ವದ ಸೂಚಕ ಎಂದು ವಿವರಿಸಿದರು.
ಶ್ವಾಸಗತಿಯು ಸೂರ್ಯನಾಡಿ, ಚಂದ್ರನಾಡಿ ಮತ್ತು ಅಗ್ನಿನಾಡಿಯನ್ನು ಅವಲಂಬಿಸಿದೆ. ದೈವಜ್ಞನಾದವರು ಪ್ರತಿದಿನ ಬಳಿಗ್ಗೆ ಎದ್ದ ಕೂಡಲೇ ಶ್ವಾಸ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ತನ್ನ ಶುಭಾಶುಭವನ್ನು ಕೂಡಾ ತಿಳಿದುಕೊಳ್ಳಬಹುದು ಎಂದು ವಿಶ್ಲೇಷಿಸಿದರು.

ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಾಧನೆ ಮತ್ತು ಸಂಶೋಧನೆಯಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಶೋಕೆಯಲ್ಲಿ ಸೇವಾಸೌಧಕ್ಕೆ ಸಂಪರ್ಕ ಕಲ್ಪಿಸುವ ಶಿಲಾಮಯ ರಾಜಪಥವನ್ನು ಮತ್ತು ಇಕ್ಕೆಲಗಳ ಉದ್ಯಾನವನಗಳ ಅನಾವರಣವನ್ನು ಸ್ವಾತಿ ಭಾಗ್ವತ್ ನೆರವೇರಿಸಿದರು. ಈ ಬಗ್ಗೆ ಪ್ರಸ್ತಾವಿಸಿದ ಶ್ರೀಗಳು, “ಇಂದು ಅನಾವರಣಗೊಂಡಿರುವ ರಾಜಮಾರ್ಗ ತುಂಬಾ ವಿಶಿಷ್ಟ. ಗುರು- ದೇವರ ಕಡೆಗೆ ಕರೆದೊಯ್ಯುವ ಮಾರ್ಗ. ಗುರುಸನ್ನಿಧಿ, ದೇವ ಸನ್ನಿಧಿಗೆ ಅದು ಭಕ್ತರನ್ನು ಕರೆದೊಯ್ಯುತ್ತದೆ. ಕಲ್ಲು ಮತ್ತು ಹುಲ್ಲಿನಿಂದ ನಿರ್ಮಾಣವಾಗಿರುವಂಥದ್ದು. ಸುಂದರವಾಗಿ ವಿನ್ಯಾಸವಾಗಿದೆ. ಇಕ್ಕೆಲಗಳ ಹಸಿರು ನಂದನವನ ಮನಸ್ಸನ್ನು ವಿಶಾಲಗೊಳಿಸುವಂಥದ್ದು ಮತ್ತು ತಂಪುಗೊಳಿಸುವಂಥದ್ದು. ಇದಕ್ಕೆ ವಿಶೇಷ ಸ್ಥಾನವಿದೆ” ಎಂದು ಬಣ್ಣಿಸಿದರು.

ಮರಾಠಿ, ಸಿದ್ದಿ, ಹಳ್ಳೇರ ಮತ್ತು ಗುನಗ ಸಮಾನಗಳಿಂದ ಇಂದು ಸ್ವರ್ಣಪಾದುಕಾ ಪೂಜೆ ಸೇವೆಯನ್ನು ಶುಕ್ರವಾರ ನೆರವೇರಿದವು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ ದೈವಜ್ಞ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

https://kalpa.news/wp-content/uploads/2024/04/VID-20240426-WA0008.mp4

  

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaweshwara shriUttarakannadaಗೋಕರ್ಣಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗೇಮಿಂಗ್ ಆ್ಯಪ್ ಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆಯಿರಿ: ಶಿಕ್ಷಕ ಸುಕೇಶ್ ಸೇರಿಗಾರ್ ಸಲಹೆ

Next Post

ನಾಲೆಗಳಿಗೆ ನೀರು ಬಿಡದಿದ್ದರೆ ನಾನೇ ಬಂದು ಅಣೆಕಟ್ಟೆಯ ಗೇಟ್ ಎತ್ತುತ್ತೇನೆ: HDK ಗುಡುಗು

kalpa News

kalpa News

Next Post
ಚುನಾವಣಾ ಫಲಿತಾಂಶದ ನಂತರ ರಾಗಾ ಫಾರ್ ಪಿಎಂ ಮಿಷನ್: ಕುಮಾರಸ್ವಾಮಿ

ನಾಲೆಗಳಿಗೆ ನೀರು ಬಿಡದಿದ್ದರೆ ನಾನೇ ಬಂದು ಅಣೆಕಟ್ಟೆಯ ಗೇಟ್ ಎತ್ತುತ್ತೇನೆ: HDK ಗುಡುಗು

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL