Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಅಷ್ಟಮಂಗಲ ಜ್ಯೋತಿಷ್ಯದ ಮೇರುಶಿಖರ: ರಾಘವೇಶ್ವರ ಶ್ರೀ

September 14, 2024
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಅಷ್ಟಮಂಗಲ ಹಲವು ಆಯಾಮಗಳನ್ನು ಒಳಗೊಂಡಿದ್ದು, ಅಷ್ಟಮಂಗಲವು ಜ್ಯೋತಿಷ್ಯದ ಮೇರುಶಿಖರವಿದ್ದಂತೆ. ಇದರ ಸಮಗ್ರ ಫಲ ನಿರೂಪಣೆಗೆ ವಿಶೇಷ ಮಹತ್ವವಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ಹೇಳಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 55ನೇ ದಿನವಾದ ಶುಕ್ರವಾರ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.
ಶಿಶುವಿನಿಂದ ಲಗ್ನನಿರ್ಣಯ ಮಾಡುವಂಥ ವಿಶೇಷ ಪರಿಕಲ್ಪನೆ ಜ್ಯೋತಿಷದಲ್ಲಿದೆ. ದೇವಸ್ಥಾನ ಅಥವಾ ಇತರ ಅತಿದೊಡ್ಡ ವ್ಯವಸ್ಥೆಗಳ ಭವಿಷ್ಯ ಚಿಂತನೆ ನಡೆಸಲು ಇದನ್ನು ಬಳಸಲಾಗುತ್ತದೆ. ಇದಕ್ಕೆ ಅಷ್ಟಮಂಗಲ ಪ್ರಶ್ನೆಯೆಂದು ಹೆಸರು. ಜ್ಯೋತಿಷದ ಮೇರುಶಿಖರ. ಜ್ಯೋತಿಷದ ಸಂಪೂರ್ಣ ಜ್ಞಾನ ಅಷ್ಟಮಂಗಲದ ನಿರೂಪಣೆಗೆ ಅಗತ್ಯ ಎಂದು ಹೇಳಿದರು.

ಎಂಟು ಮಂಗಲವಸ್ತುಗಳ ಸಮ್ಮುಖದಲ್ಲಿ ಪ್ರಶ್ನಚಿಂತನ ನಡೆಯುವುದೇ ಅಷ್ಟಮಂಗಲ. ತಾಂಬೂಲ, ಅಕ್ಷತೆ, ಕ್ರಮುಕ, ಧಾರುಭಾಜನ, ಅಂಬರ, ದರ್ಪಣ, ಗ್ರಂಥ, ದೀಪಗಳೇ ಅಷ್ಟಮಂಗಲಗಳು. ಇವುಗಳ ಸಾಕ್ಷಿತ್ವದಲ್ಲಿ ಅಷ್ಟಮಂಗಲ ನಡೆಯುತ್ತದೆ. ಇದು ಶಾಸ್ತ್ರದ ಶಿಖರವಿದ್ದಂತೆ ಎಂದು ಬಣ್ಣಿಸಿದರು.

ಕವಡೆಗಳ ಮೂಲಕ ಅಷ್ಟಮಂಗಲವನ್ನು ವಿವರಿಸುವ ಪರಿಕಲ್ಪನೆಯೂ ಇಡೀ ಚಿಂತನೆಯ ಒಂದು ಭಾಗ. ಅಷ್ಟಮಂಗಲ ಎಂಬ ಹೆಸರಿಗೆ ಇದೂ ಕಾರಣ ಎಂದರು.
ಪೃಚ್ಛಕನ ನಿವೇದನೆ, ನಿರ್ಗಮ, ಮಾರ್ಗ, ಮಂದಿರಗತಿ, ಪ್ರಶ್ನಕ್ರಿಯಾಸಂಭವ, ಸೂತ್ರ, ಸ್ಫುಟ, ಅಷ್ಟಮಂಗಲ ಫಲ, ಆರೂಢ, ಉದಯ, ಚಂದ್ರಾಧಿಷ್ಟಿತ, ಆಯಸ್ಸು, ದ್ವಾದಶಭಾವ ಚಿಂತನೆ, ದೈವಾನುಕೂಲತೆ, ಬಾಧೆ, ಅಭಿಚಾರ ಇತ್ಯಾದಿ ಆಯಾಮಗಳ ಮೂಲಕ ಅಷ್ಟಮಂಗಲ ನಡೆಯುತ್ತದೆ ಎಂದು ವಿವರಿಸಿದರು.

Also read: ಗೇಮಿಂಗ್ ಆ್ಯಪ್ ಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆಯಿರಿ: ಶಿಕ್ಷಕ ಸುಕೇಶ್ ಸೇರಿಗಾರ್ ಸಲಹೆ

ಅಷ್ಟಮಂಗಲಕ್ಕೆ ಯಜಮಾನ ಮಾಡಿಕೊಳ್ಳುವ ಪ್ರಥಮ ನಿವೇದನೆಗೆ ಕೂಡ ವಿಶೇಷ ಮಹತ್ವವಿದೆ. ಇದರಲ್ಲಿ ಕಾಲ, ದೇಶ, ಶ್ವಾಸ, ದಶಾ, ಸ್ಪøಷ್ಟಾಂಗ, ಪೃಚ್ಛಕ ನಿಂತ ದಿಕ್ಕು, ಪ್ರಶ್ನಾಕ್ಷರಗಳು, ಪೃಚ್ಛಕನ ಸ್ಥಿತಿ, ಪೃಚ್ಛಕನ ಚೇಷ್ಟೆ, ಭಾವ, ನೋಟ, ವಸ್ತ್ರ, ತಾಂಬೂಲ, ಅನುಭವಕ್ಕೆ ಬರುವ ಸಕಲ ಸಂಗತಿಗಳು ಇದರಲ್ಲಿ ಸೇರುತ್ತವೆ. ಇವೆಲ್ಲವನ್ನೂ ದೈವಜ್ಞ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎಂದು ಬಣ್ಣಿಸಿದರು.

ಕಾಲದ ವಿಚಾರಕ್ಕೆ ಬಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಪ್ರಮುಖವಾಗುತ್ತದೆ. ಅಂತೆಯೇ ಪ್ರಶ್ನೆ ಕೇಳಿದ ಜಾಗ ಕೂಡಾ ಪ್ರಮುಖವಾಗುತ್ತದೆ. ಫಲ ಬಿಡುವ, ಸುಂದರ, ಪುಷ್ಪಗಳಿದ್ದ ಪರಿಸರದಲ್ಲಿ, ಸ್ವರ್ಣರತ್ನಗಳಿದ್ದರೆ ಅದು ಶುಭಸೂಚನೆ. ಮನಸ್ಸಿಗೆ ಸಂತೋಷ ಉಂಟುಮಾಡಿದ್ದರೆ, ಗೋಮಯದಿಂದ ಸಾರಿಸಿದ್ದರೆ, ಸಮತಟ್ಟಾಗಿದ್ದರೆ, ಮಂಗಲಕಾರ್ಯ ನೆರವೇರುವುದಿದ್ದರೆ, ಅದು ಶುಭತ್ವದ ಸೂಚಕ ಎಂದು ವಿವರಿಸಿದರು.
ಶ್ವಾಸಗತಿಯು ಸೂರ್ಯನಾಡಿ, ಚಂದ್ರನಾಡಿ ಮತ್ತು ಅಗ್ನಿನಾಡಿಯನ್ನು ಅವಲಂಬಿಸಿದೆ. ದೈವಜ್ಞನಾದವರು ಪ್ರತಿದಿನ ಬಳಿಗ್ಗೆ ಎದ್ದ ಕೂಡಲೇ ಶ್ವಾಸ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ತನ್ನ ಶುಭಾಶುಭವನ್ನು ಕೂಡಾ ತಿಳಿದುಕೊಳ್ಳಬಹುದು ಎಂದು ವಿಶ್ಲೇಷಿಸಿದರು.

ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಾಧನೆ ಮತ್ತು ಸಂಶೋಧನೆಯಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಶೋಕೆಯಲ್ಲಿ ಸೇವಾಸೌಧಕ್ಕೆ ಸಂಪರ್ಕ ಕಲ್ಪಿಸುವ ಶಿಲಾಮಯ ರಾಜಪಥವನ್ನು ಮತ್ತು ಇಕ್ಕೆಲಗಳ ಉದ್ಯಾನವನಗಳ ಅನಾವರಣವನ್ನು ಸ್ವಾತಿ ಭಾಗ್ವತ್ ನೆರವೇರಿಸಿದರು. ಈ ಬಗ್ಗೆ ಪ್ರಸ್ತಾವಿಸಿದ ಶ್ರೀಗಳು, “ಇಂದು ಅನಾವರಣಗೊಂಡಿರುವ ರಾಜಮಾರ್ಗ ತುಂಬಾ ವಿಶಿಷ್ಟ. ಗುರು- ದೇವರ ಕಡೆಗೆ ಕರೆದೊಯ್ಯುವ ಮಾರ್ಗ. ಗುರುಸನ್ನಿಧಿ, ದೇವ ಸನ್ನಿಧಿಗೆ ಅದು ಭಕ್ತರನ್ನು ಕರೆದೊಯ್ಯುತ್ತದೆ. ಕಲ್ಲು ಮತ್ತು ಹುಲ್ಲಿನಿಂದ ನಿರ್ಮಾಣವಾಗಿರುವಂಥದ್ದು. ಸುಂದರವಾಗಿ ವಿನ್ಯಾಸವಾಗಿದೆ. ಇಕ್ಕೆಲಗಳ ಹಸಿರು ನಂದನವನ ಮನಸ್ಸನ್ನು ವಿಶಾಲಗೊಳಿಸುವಂಥದ್ದು ಮತ್ತು ತಂಪುಗೊಳಿಸುವಂಥದ್ದು. ಇದಕ್ಕೆ ವಿಶೇಷ ಸ್ಥಾನವಿದೆ” ಎಂದು ಬಣ್ಣಿಸಿದರು.

ಮರಾಠಿ, ಸಿದ್ದಿ, ಹಳ್ಳೇರ ಮತ್ತು ಗುನಗ ಸಮಾನಗಳಿಂದ ಇಂದು ಸ್ವರ್ಣಪಾದುಕಾ ಪೂಜೆ ಸೇವೆಯನ್ನು ಶುಕ್ರವಾರ ನೆರವೇರಿದವು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ ದೈವಜ್ಞ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

  

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaweshwara shriUttarakannadaಗೋಕರ್ಣಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ
Previous Post

ಗೇಮಿಂಗ್ ಆ್ಯಪ್ ಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆಯಿರಿ: ಶಿಕ್ಷಕ ಸುಕೇಶ್ ಸೇರಿಗಾರ್ ಸಲಹೆ

Next Post

ನಾಲೆಗಳಿಗೆ ನೀರು ಬಿಡದಿದ್ದರೆ ನಾನೇ ಬಂದು ಅಣೆಕಟ್ಟೆಯ ಗೇಟ್ ಎತ್ತುತ್ತೇನೆ: HDK ಗುಡುಗು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ನಾಲೆಗಳಿಗೆ ನೀರು ಬಿಡದಿದ್ದರೆ ನಾನೇ ಬಂದು ಅಣೆಕಟ್ಟೆಯ ಗೇಟ್ ಎತ್ತುತ್ತೇನೆ: HDK ಗುಡುಗು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Internet Image

ಭದ್ರಾವತಿ | ಆನೆ ತುಳಿತದಿಂದ ವ್ಯಕ್ತಿ ಸಾವು

June 20, 2025

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Internet Image

ಭದ್ರಾವತಿ | ಆನೆ ತುಳಿತದಿಂದ ವ್ಯಕ್ತಿ ಸಾವು

June 20, 2025

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!