Tuesday, July 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ವೈಭವ ಹೇಗಿದೆ ಗೊತ್ತಾ?

ಬಿ. ಜಯಶ್ರೀಯವರಿಗೆ ಶ್ರೀ ಕೆರೆಮನೆ ಶಿವಾರಾಮ ಹೆಗಡೆ ಪ್ರಶಸ್ತಿ ಪ್ರದಾನ

December 7, 2021
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಹೊನ್ನಾವರ  |

ತಾಲೂಕಿನ ಗುಣವಂತೆಯಲ್ಲಿ ಪ್ರತಿವರ್ಷ ವಿಶಿಷ್ಠವಾಗಿ ಆಚರಿಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದೆ.

ನಾಟ್ಯೋತ್ಸವದ ದ್ವಾದಶ ಸಮಾರಂಭ ಕೆರೆಮನೆ ಬಯಲು ರಂಗಮಂದಿರದಲ್ಲಿ ವಿದ್ಯುಕ್ತವಾಗಿ ಯಕ್ಷ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. ಸಾನಿಧ್ಯ ವಹಿಸಿದ್ದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು, ಎಡನೀರು ಇವರಿಗೆ ಫಲ ಸಮರ್ಪಿಸಲಾಯಿತು. ಕಾರ್ಯಾಧ್ಯಕ್ಷರಾದ ಲಕ್ಷ್ಮಿನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಅಗಲಿದ ಕಲಾಚೇತನ ಕಲಾವಿದರನ್ನು ಸ್ಮರಿಸಿ ಮೌನಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಕಲಾವಿದರಾದ ತಿಮ್ಮಣ್ಣ ಯಾಜಿ ಮಣ್ಣಿಗೆ, ನಾರಾಯಣ ಹಾಸ್ಯಗಾರ, ಕರ್ಕಿ ಹಾಗೂ ಪ್ರೊ. ಎಂ.ಎ. ಹೆಗಡೆಯವರ ಕಲಾಪಥವನ್ನು ಸ್ಮರಿಸಿ ಸಮರ್ಪಣೆ ಮಾಡಲಾಯಿತು. ನಾಟ್ಯೋತ್ಸವ ಕಾರ್ಯಕ್ರಮದ ಆಶಯ ಮತ್ತು ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿಯ ಘರಾಣೆಯ ಆಶಯವನ್ನು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ದಿವಾಕರ ಹೆಗಡೆಯವರು ಸಮರ್ಪಕವಾಗಿ ಮಂಡಿಸಿದರು.

ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಕಲಾಜ್ಯೋತಿಯನ್ನು ಪ್ರಜ್ವಲಿಸುದರ ಮೂಲಕ ನಾಟ್ಯೋತ್ಸವವನ್ನು ಉದ್ಘಾಟಿಸಲಾಯಿತು. ಹಿರಿಯ ಪತ್ರಕರ್ತರಾದ ಎಂ.ಕೆ. ಭಾಸ್ಕರ ರಾವ್ ರವರು ಪದ್ಮಶ್ರೀ ಡಾ. ಬಿ. ಜಯಶ್ರೀ, ಬೆಂಗಳೂರು ಇವರ ಕಲಾಪಥವನ್ನು, ಕಲಾವಂತಿಕೆಯ ವಿಸ್ತಾರವನ್ನು ಸಭೆಗೆ ತಿಳಿಸಿ ಅಭಿನಂದಿಸಿದರು.

ಅಪ್ರತಿಮ ಕಲಾಮೇರು ಪ್ರತಿಭೆ ಶ್ರೀ ಕೆರೆಮನೆ ಶಿವಾರಾಮ ಹೆಗಡೆ ಪ್ರಶಸ್ತಿಯನ್ನು ಪದ್ಮಶ್ರೀ ರಂಗಭೂಮಿ ಕಲಾವಿದೆಯಾದ, ರಾಜ್ಯಸಭಾ ಮಾಜಿ ಸದಸ್ಯರಾದ ಡಾ.ಬಿ. ಜಯಶ್ರೀಯವರಿಗೆ ಪ್ರಧಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ. ಜಯಶ್ರೀಯವರು, ಶಂಭು ಹೆಗಡೆಯವರ ಸಂಗಡ ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಆ ವೇದಿಕೆಯಲ್ಲಿ ಅಕಸ್ಮಾತ್ ಯಕ್ಷಗಾನ ಸ್ತ್ರೀ ವೇಷ ಮಾಡಿದ ನೆನಪು ಮಾಡಿಕೊಂಡರು. ರಂಗಭೂಮಿಯ ಕಲಾವಿದೆಯಾದ ನನಗೆ ಯಕ್ಷಗಾನ ರಂಗಭೂಮಿಯ ಶ್ರೇಷ್ಠ ಕಲಾವಿದರಾದ ಕೆರೆಮನೆ ಶ್ರೀಶಿವರಾಮ ಹೆಗಡೆಯವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಪಡೆದು ಧನ್ಯನಾಗಿದ್ದೇನೆ ಎಂದರು.

ನಾಟ್ಯೋತ್ಸವದಲ್ಲಿ ನೀಡುವ ಈ ಪ್ರಶಸ್ತಿ ಕಲಾ ವಿಸ್ತಾರದ ಸಂಕೇತವಾಗಿದೆ. ಇದನ್ನು ಪಡೆದ ನನಗೆ ರಂಗ ವಿಸ್ತಾರದ ಜವಾಬ್ಧಾರಿ ಹೆಚ್ಚಿದೆ ಎಂದರು.

ನಾಟ್ಯೋತ್ಸವ ಸನ್ಮಾನವನ್ನು ಯಕ್ಷಗಾನ ಕಲಾವಿದರಾದ ರಾಜೀವ ಶೆಟ್ಟಿ, ಹೊಸಂಗಡಿ, ದಯಾನಂದ ಬಳೆಗಾರ, ನಾಗೂರು, ಸಂಘಟಾಕರಾದ ಸೂರ್ಯನಾರಾಯಣ ಪಂಜಾಜೆ, ಮತ್ತು ಮರಣೋತ್ತರವಾಗಿ ಗುಂಡಿಬೈಲು ಸುಬ್ರಾಯ ಭಟ್, ಮತ್ತು ಕೃಷ್ಣ ಭಂಡಾರಿಯವರಿಗೆ ನೀಡಿ ಪುರಸ್ಕರಿಸಲಾಯಿತು.

ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಮಾತನಾಡಿ, ಯಕ್ಷಗಾನ ಕ್ಷೇತ್ರವನ್ನು ಪ್ರಪಂಚಕ್ಕೆ ಗುರುತಿಸಿ ಕಲಾ ವಿಸ್ತಾರವನ್ನು ಮಾಡಿದ ಹಲವರಲ್ಲಿ ಶಂಭು ಹೆಗಡೆಯವರು ಒಬ್ಬರು ಎಂದರು. ಸಂಸ್ಕೃತಿಯನ್ನು ಬೆಳೆಸುವುದರಲ್ಲಿ ಕಲಾ ವಿನಿಮಯ ಅವಶ್ಯಕವಾಗಿದೆ. ಈ ಕಾರ್ಯ ನಾಟ್ಯೋತ್ಸವ ಜಾಬ್ಧಾರಿಯುತವಾಗಿ ಮಾಡುತ್ತಿದೆ ಎಂದರು.

ಕಲೆಯಿಂದ ಕಲಾವಿದನ ವಿಸ್ತಾರವೇ ಹೊರತು ಕಲಾವಿದನಿಂದ ಕಲೆ ಅಲ್ಲಾ ಎಂದು ಅಭಿಪ್ರಾಯ ಪಟ್ಟು, ಸಮಷ್ಠಿ ರೂಪದಲ್ಲಿ ಎಲ್ಲಾ ಕಲಾ ಪ್ರಕಾರಗಳನ್ನು ಬೆಳೆಸಿ ಭಾರತದ ಸಂಸ್ಕೃತಿಯನ್ನು ವಿಸ್ತರಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ ಶೆಟ್ಟಿ, ಯಕ್ಷಗಾನಕ್ಕೆ ಭಾವ ಪ್ರಪಂಚವನ್ನು ನೀಡಿದ ಮೇಳವೆಂದರೆ ಇಡಗುಂಜಿ ಯಕ್ಷಗಾನ ಮೇಳ ಎಂದು ಅಭಿಪ್ರಾಯಪಟ್ಟರು.

ಸಾಧನೆಯು ಸಾಧಕರ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂದರು. ಸೂರ್ಯನಾರಾಯಣ ಪಂಜಾಜೆ ಅವರು ಮಾತನಾಡುತ್ತಾ ಪ್ರೇಕ್ಷಕ, ಕಲಾಇದ ಮತ್ತು ಸಂಘಟಕ ಕಲೆಯ ಮುಖ್ಯ ಭಾಗವತರು, ಸಂಘಟಕನಿಗೆ ಉಂಟಾಗುವ ಸಂಕಟದ ವ್ಯಾಪ್ತಿಯನ್ನ ಮಂಡಿಸಿದರು.
ಮಂಡಳಿ ನಡೆಸಿದ ಯಕ್ಷಗಾನ ಭಾಗವತಿಕೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಡಾ.ಎಚ್.ಎಸ್. ಪ್ರಕಾಶರವರು ಮಾತನಾಡಿ, ರಂಗಭೂಮಿಯಲ್ಲಿ ನಟನ ಸಾಮರ್ಥ್ಯವು ಮುಖ್ಯವಾಗಿದ್ದು, ಆತನ ಕಲಾ ಪ್ರದರ್ಶನದ ಅಭಿವ್ಯಕ್ತಿ, ಅನುಭೂತಿ ಮತ್ತು ಪಾತ್ರದ ಜೀವಂತಿಕೆ ಮುಖ್ಯವಾಗಿರುತ್ತದೆ ಎಂದರು.

ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಚೈನೀಸ್ ಅಪೇರಾ ಎಂಬ ಕಲಾ ಪ್ರಕಾರ ಹೊನ್ನಾವರದ ಬುದ್ಧ ಧರ್ಮದ ಅನುಯಾಯದವರಿಂದ ಮುಂದುವರಿದಿದೆ ಎಂಬ ವಿಷಯ ಅಧ್ಯಯನಕ್ಕೆ ಒಳಪಡಬೇಕು ಎಂದರು.

ಕುಡಿಯುವ ನೀರಿನ ಘಟಕವನ್ನು ಕಲಾಮಂದಿರಕ್ಕೆ ನೀಡಿದ ಶಂಕರ ಐತಾಳರವರನ ಸನ್ಮಾನಿಸಲಾಯಿತು. ಶಿವಾನಂದ ಹೆಗಡೆಯವರು ವಂದಿಸಿ, ನಾಗರಾಜ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: HonnavaraKannada NewsKannada News LiveKannada News OnlineKannada News WebsiteKannada WebsiteKeremane Shambu HegdeLatest News KannadaNews in KannadaNews KannadaUttara KannadaYakshaganaಕೆರೆಮನೆ ಶಂಭು ಹೆಗಡೆಯಕ್ಷಗಾನಹೊನ್ನಾವರ
Previous Post

ಭದ್ರಾವತಿ ರಾಯರ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ

Next Post

ಸಾಗರ ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಮಾಲು ಸಹಿತ ಜಿಂಕೆ ಬೇಟೆಗಾರನ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಾಗರ ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಮಾಲು ಸಹಿತ ಜಿಂಕೆ ಬೇಟೆಗಾರನ ಬಂಧನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಗಮನವಿರಿಸಿ: ಡಾ. ಸೌಮ್ಯ

July 1, 2025

ಕಲಾತ್ಮಕತೆ ಪ್ರದರ್ಶಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಅಗತ್ಯ: ಪ್ರೊ. ಶರತ್ ಅನಂತಮೂರ್ತಿ

July 1, 2025

ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ನೂತನ ರೈಲು | ಯಾವತ್ತು ಸಂಚಾರ? ಎಲ್ಲೆಲ್ಲಿ ನಿಲುಗಡೆ?

July 1, 2025

ಜು.2 : ಕುವೆಂಪು ವಿವಿ 38ನೇ ಸಂಸ್ಥಾಪನಾ ದಿನಾಚರಣೆ

July 1, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಗಮನವಿರಿಸಿ: ಡಾ. ಸೌಮ್ಯ

July 1, 2025

ಕಲಾತ್ಮಕತೆ ಪ್ರದರ್ಶಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಅಗತ್ಯ: ಪ್ರೊ. ಶರತ್ ಅನಂತಮೂರ್ತಿ

July 1, 2025

ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ನೂತನ ರೈಲು | ಯಾವತ್ತು ಸಂಚಾರ? ಎಲ್ಲೆಲ್ಲಿ ನಿಲುಗಡೆ?

July 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!