ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಇಲ್ಲಿನ ಹಳೇ ಹುಬ್ಬಳ್ಳಿಯಲ್ಲಿ ಐದು ದಿನಗಳ ಹಿಂದೆ ನಡೆದ ಗಲಭೆಯ Hubli riot ಪರಾರಿಯಾಗಿದ್ದ ಮಾಸ್ಟರ್ ಮೈಂಡ್ ವಸೀಂನನ್ನು ಮುಂಬೈನಲ್ಲಿ ಹೆಡೆಮುರಿ ಕಟ್ಟಿರುವ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ತಾನು ಅಮಾಯಕ ಎಂದು ಇಂದು ಮುಂಜಾನೆ ವಿಡಿಯೋವೊಂದನ್ನು ಮಾಡಿ ಹರಿಬಿಟ್ಟಿದ್ದ ವಸೀಂ ಅಜ್ಞಾನ ಸ್ಥಳದಲ್ಲಿ ಅಡಗಿದ್ದ. ಆದರೆ, ಚಾಣಾಕ್ಷತನದಿಂದ ಈತನ ಜಾಡು ಹಿಡಿಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು ವಸೀಂ ಸೇರಿ ಮೂವರನ್ನು ಬಂಧಿಸಿ ಹಳೇಹುಬ್ಬಳ್ಳಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರಲ್ಲಿ ಇಬ್ಬರನ್ನು ಬೆಂಗಳೂರಿನ ಕಾಟನ್’ಪೇಟೆಯಲ್ಲಿ ಬಂಧಿಸಲಾಗಿದೆ.
Also read: ಮೇ 2ರಂದು ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತೆ ವೀಡಿಯೋ ಬಿಡುಗಡೆ
ಇನ್ನು, ಈತ ನೀಡಿರುವ ಮಾಹಿತಿಯನ್ನು ಆಧರಿಸಿ ಶೀಘ್ರದಲ್ಲೇ ಇನ್ನೂ ಹಲವರ ಬಂಧನವಾಗಲಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post