ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ #South Western Railway ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು ಗುರುವಾರ (19.12.2024) ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ರೈಲ್ವೆ ಸುರಕ್ಷತೆಯನ್ನು ಖಾತ್ರಿಪಡಿಸುವ ಈ ನಿರ್ಣಾಯಕ ಚರ್ಚೆಯ ನಂತರ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ #Safety Person of the Month Award ನೀಡಿ ಗೌರವಿಸಿದರು.

ಮೈಸೂರು ವಿಭಾಗ:
- ಅಮಿತ್, ಸ್ಟೇಷನ್ ಮಾಸ್ಟರ್/ ಬಳ್ಳೇಕೆರೆ
- ರವಿ ಲಮಾಣಿ, ಸ್ಟೇಷನ್ ಮಾಸ್ಟರ್/ ಬ್ಯಾಡಗಿ
- ಯಲ್ಲಪ್ಪ ಮಾಳಗೇರ್, ಪಾಯಿಂಟ್ಸ್ ಮ್ಯಾನ್/ ಬ್ಯಾಡಗಿ
- ಮಂಜುನಾಥ್, ಲೋಕೋ ಪೈಲಟ್
- ರೌಶನ್ ಕುಮಾರ್, ಸಹಾಯಕ ಲೋಕೋ ಪೈಲಟ್
- ಸುನಿಲ್ ಕುಮಾರ್, ಟೆಕ್ನಿಷಿಯನ್/ ಚಿಕ್ಕಜಾಜೂರು
- ತಿಪ್ಪೇಸ್ವಾಮಿ, ಟೆಕ್ನಿಷಿಯನ್/ ಚಿಕ್ಕಜಾಜೂರು
- ಅಮಿತ್ ಕುಮಾರ್ ಮಹತೋ, ರಾತ್ರಿ ಗಸ್ತು ಸಿಬ್ಬಂದಿ
- ಮುಹಮ್ಮದ್ ನಿಷಾದ್, ಗೇಟ್ ಮ್ಯಾನ್.
Also read: ಸಿ.ಟಿ. ರವಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ | ಬಿಜೆಪಿಗೆ ಸವಾಲ್

ರಮೇಶ್ ಟಿ.ಎಚ್., ಟ್ರ್ಯಾಕ್ ನಿರ್ವಹಣೆಗಾರ.
ಅರವಿಂದ್ ಶ್ರೀವಾಸ್ತವ ಅವರು ಸುರಕ್ಷತೆಗಾಗಿ ಉದ್ಯೋಗಿಗಳ ತ್ವರಿತ ಚಿಂತನೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು, “ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ” ನೈಋತ್ಯ ರೈಲ್ವೆಯ ಉನ್ನತ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post