Sunday, June 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಸುಧೈವ ಕುಟುಂಬಕಂನ ನಿಜ ಮೌಲ್ಯವನ್ನು ನಾನು ಆಗ ಅರಿತಿದ್ದೆ

October 25, 2021
in Special Articles
0 0
0
Image Courtesy: Internet

Image Courtesy: Internet

Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಜನಪ್ರಿಯ ಟಿವಿ ಧಾರಾವಾಹಿ ’ದಿ ಟ್ವೈಲೈಟ್ ಝೋನ್’ನ ಒಂದು ಕಂತು ’ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (1963). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು ಸರ್ವವೂ ಶಾಶ್ವತವಾಗಿ, ನಿಶ್ಚಲವಾಗಿ ನಿಂತು ಬಿಡುತ್ತವೆ. ಇದರಿಂದ ದಿಗ್ಬ್ರಾಂತನಾದ ಆ ಮನುಷ್ಯ, ದಿಗಿಲಿನಲ್ಲೇ ಸುತ್ತಲೂ ಎಲ್ಲೆಲ್ಲೋ ಓಡಾಡುತ್ತಾನೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ. ಆಗ ಕೊನೆಯ ನಿರೂಪಣೆ ಕೇಳುತ್ತೇವೆ, ಆ ಮನುಷ್ಯನಿಗೆ ಸಮಯದ ಕಾಣಿಕೆ ನೀಡಲಾಗಿತ್ತು. ಅವನು ಅದನ್ನು ಬಳಸಿದ ಮತ್ತು ದುರ್ಬಳಕೆ ಮಾಡಿಕೊಂಡ.

ಸುತ್ತಲೂ ಜತೆಗಿರಲು ಅಥವಾ ಮಾತಾಡಲು ಅಥವಾ ಪ್ರೀತಿ ಮಾಡಲು ಯಾರೂ ಇಲ್ಲದೆ ಹೋದಾಗ, ಅಷ್ಟೊಂದು ಹಣವನ್ನು ಅವನೇನು ಮಾಡಿಯಾನು? ತಕ್ಷಣವೇ ಆ ಹಣದ ಮೌಲ್ಯ, ಶ್ರೀಮಂತನಾಗುವುದು, ಅತಿ ಶ್ರೀಮಂತನಾಗುವುದು, ಬೇರೆಯವರಿಗಿಂತ ಉನ್ನತ ವ್ಯಕ್ತಿಯಾಗಿರುವುದರ ಪ್ರಾಮುಖ್ಯತೆ ಸಂಪೂರ್ಣ ‘ಅರ್ಥರಹಿತ’ವಾಗಿ ಬಿಡುತ್ತದೆ. ಹಾಗಿದ್ದರೆ, ಯಾವುದು ಹೆಚ್ಚು ಮುಖ್ಯವಾದುದು? ಹಣವೋ ಅಥವಾ ಜನರೋ? ಉತ್ತರ ’ಜನರು’ ಎಂದಾದರೆ ನಾವೇಕೆ ಯಾವಾಗಲೂ ಇತರರ ಮೇಲೆ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿರುತ್ತೇವೆ? ಸದಾ ನಾವು ಬೇರೆಯವರಿಗಿಂತಲೂ ಶ್ರೇಷ್ಠರೆಂದು ನಿರೂಪಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಕದನಗಳು, ಯುದ್ಧಗಳಲ್ಲಿ ಹೋರಾಡಬಹುದು ಅಥವಾ ನಮ್ಮನ್ನು ನಾವೇ ವಿಭಜಿಸಿಕೊಳ್ಳಬಹುದು. ನಾಳೆ, ಒಬ್ಬ ವ್ಯಕ್ತಿ, ಭೂಮಿಯನ್ನು ಆಳುವವನು, ಡೈನೋಸಾರ್’ಗಳ ಹಾಗೆ ಅಳಿದು ಹೋಗಿ, ಭೂಮಿಯ ಇತಿಹಾಸದ ಭಾಗವಾಗಿ ಹೋದನೆಂದರೆ, ಆಗ ಅದರ ಕಾರಣ ಆ ಮನುಷ್ಯನೇ ಆಗಿರುತ್ತಾನೆ ಎಂದು ಖಚಿತವಾಗಿ ಹೇಳಬಲ್ಲೆ.

ಈ ಭಯಾನಕ ಆಲೋಚನೆ ಹಿಂದೂ ಪುರಾಣಗಳಲ್ಲಿ ಬರುವ ರಾಕ್ಷಸ ‘ಭಸ್ಮಾಸುರ’ನ ಕಥೆಯನ್ನು ನೆನಪಿಸುತ್ತದೆ. ನಮಗೆಲ್ಲ ತಿಳಿದಿರುವಂತೆ ಆ ರಾಕ್ಷಸನಿಗೆ, ಯಾರ ತಲೆಯನ್ನು ಅವನ ಕೈಯಿಂದ ಮುಟ್ಟುವನೋ ಅವರು ಒಡನೆಯೇ ಭಸ್ಮವಾಗಿ ಹೋಗುವರೆಂಬ ವರ ಕೊಡಲಾಗಿತ್ತು. ಮಹಾವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯು ಉಪಾಯದಿಂದ ಭಸ್ಮಾಸುರನು ತನ್ನ ತಲೆಯನ್ನು ತಾನೇ ಮುಟ್ಟಿಕೊಳ್ಳುವಂತೆ ಮಾಡುತ್ತಾಳೆ. ಸದಾ ಇತರರಿಗಿಂತಲೂ ನಾವೇ ಶ್ರೇಷ್ಠರೆಂಬ ಭಾವವನ್ನು ವಿನಾಶದ ಮೂಲಕ ಸಾಧಿಸಲು ಪ್ರಯತ್ನ ಪಡುತ್ತಿದ್ದರೆ ಮನುಷ್ಯನ ಹಣೆಬರಹವೂ ಈ ರಾಕ್ಷಸನದಂತೆಯೇ ಆಗಬಹುದು. ಕುಂಚದಲ್ಲಿ ಬಿಡಿಸಿದ ಚಿತ್ರಗಳು, ಛಾಯಾಚಿತ್ರಗಳು ಅಥವಾ ಯುದ್ಧ, ಬಾಂಬುಗಳನ್ನು ಹಾಕುವ, ಚಿತ್ರಹಿಂಸೆ, ನೋವು, ದುಃಖ, ಸಮಾಧಿಗಳು ಅಥವಾ ಯಾರದಾದರೂ ಸಾವನ್ನು ತೋರಿಸುವ ಚಲನಚಿತ್ರಗಳನ್ನು ನೋಡುವಾಗ ಅತ್ಯಂತ ಸಂಕಟ ಅನುಭವಿಸುತ್ತೇನೆ. ನೋವು, ಅಂತ್ಯ ಅಥವಾ ವಿನಾಶವನ್ನು ನೋಡಿದ ಮೇಲೆ ನನ್ನಲ್ಲಿ ಮೂಡುವ ವಾತ್ಸಲ್ಯ, ಸಹಾನುಭೂತಿ ಭಾವನೆಗಳು ಪರಿಚಿತ ಅಥವಾ ಅಪರಿಚಿತ ವ್ಯಕ್ತಿಯಲ್ಲಿ ಅವನು ಬದುಕಿರುವಾಗ ಏಕೆ ಹುಟ್ಟುವುದಿಲ್ಲ?ವೈಜ್ಞಾನಿಕ, ಕಾಲ್ಪನಿಕ, ರೋಮಾಂಚಕ ಚಲನಚಿತ್ರ ’ಗ್ರಾವಿಟಿ’ (2013)ಯಲ್ಲಿ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಅಲ್ಲಿ ಯಾರೆಂದರೆ ಯಾರೂ ಇಲ್ಲ, ಯಾವುದೇ ಸದ್ದೂ ಇಲ್ಲ. ಅಲ್ಲಿ ಮೇಲೆ, ಅಂತರಿಕ್ಷದಲ್ಲಿ, ಅವರುಗಳು ಮಾತ್ರ ಇದ್ದಾರೆ. ಆ ಸಿನಿಮಾ ನೋಡುವಾಗ, ನಾನೂ ಅಂತರಿಕ್ಷದಲ್ಲಿ ಇರುವ ಹಾಗೆ ಭಾಸವಾಗಿ, ಆ ಗಗನಯಾತ್ರಿಗಳಂತೆಯೇ ನಾನೂ ಭಯಾನಕ ಒಂಟಿತನವನ್ನು ಅನುಭವಿಸಿದೆ. ಆದರೆ, ಆ ಸಿನಿಮಾದಲ್ಲಿ, ನಮ್ಮ ಭೂಗ್ರಹಕ್ಕೆ ಆ ಗಗನಯಾತ್ರಿಗಳು ಮರಳುವಾಗ, ಅವರ ಜೊತೆಯಲ್ಲೇ ನಾವೆಲ್ಲರೂ ವಿಧವಿಧವಾದ ಶಬ್ದಗಳನ್ನು ಕೇಳುತ್ತೇವೆ. ಅದು ಅಷ್ಟು ಹಿತವಾಗಿತ್ತು. ಅದನ್ನು ಕೇಳುತ್ತಿರುವ ಹಾಗೆಯೇ ಇದ್ದಕ್ಕಿದ್ದಂತೆ ನನಗೆ ಆರಾಮವೆನಿಸತೊಡಗಿತು. ಕೊನೆಯಲ್ಲಿ ’ಹೋಂ ಸ್ವೀಟ್ ಹೋಂ’ ಜನರ ಮಧ್ಯದಲ್ಲಿ ಇರುವುದನ್ನು ಬಹಳ ಇಷ್ಟಪಟ್ಟೆ..ಜನರ ಮಹತ್ವ ಏನೆಂದು ನನಗೆ ತಿಳಿದಿತ್ತು. ಸಿನಿಮಾ ಮುಗಿದು ಇತರ ಪ್ರೇಕ್ಷಕರನ್ನು ನೋಡಿದಾಗ ಅವರೆಲ್ಲರೊಡನೆ ಒಂದು ಬಲವಾದ ನಂಟು ಭಾಸವಾಯಿತು. ಪ್ರತಿಯೊಬ್ಬರ ಮೇಲೂ ಅಕ್ಕರೆ ಉಂಟಾಗತೊಡಗಿತು. ಅವರ ಬಣ್ಣ ಅಥವಾ ಜನಾಂಗವನ್ನು ಗಮನಿಸುವುದು ಅಥವಾ ಲಕ್ಷಿಸುವುದು ನನಗೆ ಬೇಕಿರಲಿಲ್ಲ. ಅವರ ಧರ್ಮ ಯಾವುದು, ಜಾತಿ ಯಾವುದು ಅಥವಾ ಯಾವ ಭಾಗ ಅಥವಾ ರಾಜ್ಯದಿಂದ ಅವರು ಬೆಂಗಳೂರಿಗೆ ಬಂದಿರಬಹುದೆಂಬುದನ್ನು ತಿಳಿದುಕೊಳ್ಳುವುದರಲ್ಲೇ ಆಗಲಿ, ಊಹಿಸುವುದರಲ್ಲೇ ಆಗಲಿ, ನನಗೆ ಆಸಕ್ತಿಯೇ ಇರಲಿಲ್ಲ. ಏಕೆಂದರೆ, ಆಗ ತಾನೇ, ’ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥವನ್ನು, ನಾವೆಲ್ಲಾ ಒಂದೇ ಕುಟುಂಬದವರು ಎಂಬುದನ್ನು ಮತ್ತು ’ಮನುಕುಲ’ದ ನಿಜ ಮೌಲ್ಯವನ್ನು ಆಗ ಅರಿತುಕೊಂಡಿದ್ದೆ.


ಲೇಖಕರು: ಖ್ಯಾತ ನಟ, ಲೇಖಕ, ಗಾಯಕ ಮತ್ತು ನಿರ್ದೇಶಕ

(ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಿತಗೊಂಡ ಆಂಗ್ಲ ಲೇಖನದ ಕನ್ನಡ ಅನುವಾದ)
(ಕನ್ನಡ ಅನುವಾದ: ಜಯಶ್ರೀ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Actor AnirudhGravityKannada News WebsiteLatest News KannadaVasudaiva Kutumbakamಎ ಕೈಂಡ್ ಆಫ್ ಎ ಸ್ಟಾಪ್ ವಾಚ್ಗ್ರಾವಿಟಿವಸುಧೈವ ಕುಟುಂಬಕಂ
Previous Post

ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ: ಹಾರನಹಳ್ಳಿಯಲ್ಲಿ ಯುವಾಬ್ರಿಗೇಡ್ ಬೃಹತ್ ಪ್ರತಿಭಟನೆ

Next Post

ಉದ್ಯೋಗವಿಲ್ಲದ ಎಂಪಿಎಂ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File image

ಉದ್ಯೋಗವಿಲ್ಲದ ಎಂಪಿಎಂ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ: ಸಂಸದ ರಾಘವೇಂದ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!