ಶ್ರೀನಗರ: ಇಂದು ಮುಂಜಾನೆಯೇ ಪಾಕಿಸ್ಥಾನದ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಎದೆಕೊಟ್ಟು ಹೋರಾಡಿದ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ನಾಲ್ವರು ಯೋಧರು ವೀರಸ್ವರ್ಗ ಸೇರಿದ್ದು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾಂಬಾ ಪ್ರದೇಶದ ಚಾಂಬ್ಲಿಯಾಲ್ ಸೆಕ್ಟರ್ನ ಗಡಿ ಭಾಗದಲ್ಲಿ ಶತ್ರುಗಳು ಮುಂಜಾನೆಯೇ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪಾಕ್ ಸೇನಿಕರು ನಡೆಸಿದ ಶೆಲ್ ದಾಳಿಯಲ್ಲಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್, ಇಬ್ಬರು ಯೋಧರು ಹಾಗೂ ಓವರ ಎಸ್ಐ ವೀರಸ್ವರ್ಗ ಸೇರಿದ್ದಾರೆ.
2003ರಲ್ಲಿ ನಡೆದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘನೆ ಮಾಡಬಾರದು ಎಂದು ಭಾರತ ಹಾಗೂ ಪಾಕಿಸ್ಥಾನದ ಡಿಜಿಎಂಒಗಳ ಹಂತದಲ್ಲಿ ಕಳೆದ ಮೇನಲ್ಲಿ ಮಾತುಕತೆ ನಡೆದಿತ್ತು. ಆದರೆ, ಇದನ್ನು ಪದೇ ಪದೇ ಉಲ್ಲಂಘಿಸಿ, ಅಪ್ರಚೋದಿತ ದಾಳಿಯನ್ನು ಪಾಕ್ ನಡೆಸುತ್ತಲೇ ಇದೆ.
Discussion about this post