ಕಲ್ಪ ಮೀಡಿಯಾ ಹೌಸ್ | ಜೈಪುರ |
ದರೋಡೆಗೆ ಬಂದ ನಾಲ್ವರು ದುಷ್ಕರ್ಮಿಗಳು ಪತಿಯ ಎದುರೇ ಮಹಿಳೆಯ ಮೇಲೆ ಸಮೂಹಿಕ ಅತ್ಯಾಚಾರ ಎಸಗಿರುವ ಘೋರ ಘಟನೆ ನಡೆದಿದೆ.
ಸಿರೋಹಿ ಜಿಲ್ಲೆಯ ಮನೆಯೊಂದಕ್ಕೆ ನಾಲ್ವರು ದುಷ್ಕರ್ಮಿಗಳು ದರೋಡೆ ಮಾಡುವ ದುರುದ್ದೇಶದಿಂದ ತೆರಳಿದ್ದರು. ಆದರೆ, ಮನೆಗೆ ನುಗ್ಗಿದ ನಂತರ ಪತಿಯ ಮೇಲೆ ಹಲ್ಲೆ ನಡೆಸಿ, ಎದುರಿಗೇ ಅವನ ಪತ್ನಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಭೀಕರ ಘಟನೆ ನಡೆದಿದೆ.
ಮನೆಯ ವ್ಯಕ್ತಿ ಬಳಿ ಇದ್ದ 1,400 ರೂ. ಹಣವನ್ನು ಕಸಿದುಕೊಂಡಿದ್ದು, ಕೆಲವು ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ ದಂಪತಿ ಬಳಿ ಬೇರೇನೂ ಇರಲಿಲ್ಲ. ದರೋಡೆಕೋರರಿಗೆ ಮನೆಯಲ್ಲಿ ಹೆಚ್ಚಿಗೆ ಏನೂ ಸಿಗದಿದ್ದಾಗ, ಮಹಿಳೆ ಮೇಲೆ ಆಕೆಯ ಗಂಡನ ಎದುರೇ ಅತ್ಯಾಚಾರ ಎಸಗಿದ್ದಾರೆ.
Also read: ವಿಜಯನಗರ ಜಿಲ್ಲೆಯನ್ನು ಎಲ್ಲರೂ ಸೇರಿ ಕಟ್ಟೋಣ: ನೂತನ ಜಿಲ್ಲಾಧಿಕಾರಿ ಟಿ. ವೆಂಕಟೇಶ್
ಸಂತ್ರಸ್ತ ದಂಪತಿ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















