ಕಲ್ಪ ಮೀಡಿಯಾ ಹೌಸ್ | ಲೇಖನ: ಭಾನುಪ್ರಕಾಶ್ ಎಸ್. ಆಚಾರ್ಯ |
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವ ಸೂಚನೆ ದೊರೆಯುವುದೋ, ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಅಂತ ಭಗವಾನ್ ಶ್ರೀಕೃಷ್ಣ ಹೇಳಿದ್ದಾನೆ.
Also Read>> ಬೆಂಗಳೂರು ವಿವಿ ಮರುನಾಮಕರಣ ಓಕೆ-ವಿವಿಗಳ ಪುನರ್ ವಿಲೀನದ ಬಗ್ಗೆ ಸ್ಪಷ್ಠತೆ ನೀಡಿಲ್ಲ ಏಕೆ?
ಧರ್ಮೋ ರಕ್ಷತಿ ರಕ್ಷಿತಃ-ಸನಾತನ ಹಿಂದೂ ಧರ್ಮ ಗ್ರಂಥ ಮಹಾಭಾರತದಲ್ಲಿ ಹೇಳಿರುವ ವಾಕ್ಯವಿದು. ನೀನು ಧರ್ಮವನ್ನು ರಕ್ಷಿಸಿದರೆ ಧರ್ಮವು ನಿನ್ನನ್ನು ರಕ್ಷಣೆ ಮಾಡುತ್ತದೆಯೋ ಮನುಜ ಎಂದು.

ಆಧುನಿಕತೆಯ ಬಿಸಿಲುಕುದುರೆ ಏರಿರುವ ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು #WesternCulture ಅನುಕರಿಸಿ ನಮ್ಮ ಧರ್ಮದ ಮೂಲ ಆಚರಣೆ, ಸಂಪ್ರದಾಯಗಳ ಬಗ್ಗೆಯೇ ಮರೆಯುತ್ತಿರುವ ಆತಂಕ ಈಗ ಎದುರಾಗಿದೆ.
ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಇಡೀ ಭರತ ಖಂಡವನ್ನು ಸುತ್ತಿ, ವಿಶ್ವ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ನಿದ್ದೆಯಿಂದ ಎಬ್ಬಿಸದೆ ಇಲ್ಲದಿದ್ದರೆ ಈ ವೇಳೆಗೆ ಭರತ ಖಂಡ ಮೊಹಮದ್ ಗಜನಿ ಸೇರಿ ಹಲವು ವಿದೇಶಿ ದಾಳಿಕೋರ ಹಾಗೂ ಸ್ವದೇಶಿ ದಾಳಿಕೋರ ಅನ್ಯಮತೀಯ ರಾಜರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಬಲವಂತವಾಗಿ ಸನಾತನ ಧರ್ಮದವರನ್ನು ಮತಾಂತರ ಮಾಡುತ್ತಿದ್ದರು.

ಆದರೆ, ಅವರಿಗೆ ತಿಳಿದಿರಲಿ ಇದು ಪ್ರಯತ್ನ ಅಷ್ಟೇ ಸನಾತನ ಧರ್ಮವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿ ಮೊನ್ನೆ ತಾನೆ ನಡೆದ ಮಹಾಕುಂಭಮೇಳ.
Also Read>> ಹಾಸನ | ಪೂಜಾ ರಘುನಂದನ್ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ’ಗೆ ಭಾಜನ
ಹೌದು… ಸುಮಾರು 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ನಮ್ಮ ದೇಶದ ಅರ್ಧದಷ್ಟು ಜನ ಸಾಕ್ಷಿಯಾಗಿ ಸನಾತನ ಧರ್ಮ ಒಡೆಯುವವರಿಗೆ ಮರ್ಮಾಘಾತ ಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರಯಾಗರಾಜದಲ್ಲಿನ ಮಹಾಕುಂಭ ಮೇಳವು ಕೋಟ್ಯಂತರ ಹಿಂದೂಗಳನ್ನು ಒಗ್ಗೂಡಿಸಿ ಮತ್ತೊಮ್ಮೆ ಕೂಗಿ ಹೇಳಿದೆ ಸನಾತನ ಧರ್ಮದ ತಂಟೆಗೆ ಬರುವ ಅನ್ಯಧರ್ಮಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ನಮ್ಮ ನಂಬಿಕೆಯ ಈ ಪುಣ್ಯಕ್ಷೇತ್ರಗಳ ಸುದ್ದಿಗೆ ಯಾವ ಕೋಮಿನ ಜನರು ಮಾತನಾಡಲು ಕಟ್ಟರ್ ಹಿಂದುವಾದಿಗಳು ಬಿಡುವ ಮಾತೇ ಇಲ್ಲ. ಅಲ್ಲದೇ, ಈ ದೇವಸ್ಥಾನಗಳ ಹೆಸರು ಹಾಳು ಮಾಡೋಕೆ ಆಧರ್ಮದ ಕರ್ತೃಗಳು ಬಂದರು ಸಾಧ್ಯವಿಲ್ಲ, ಅಷ್ಟು ಗಟ್ಟಿಯಾಗಿ ನೆಲೆಯೂರಿದೆ ಈ ಕ್ಷೇತ್ರಗಳು.
ಭರತ ಖಂಡದಲ್ಲಿ ನಮ್ಮ ಸನಾತನ ಹಿಂದೂ ಧರ್ಮ ಯಾವುದೇ ದುಷ್ಟ ಶಕ್ತಿಗಳು ಸಾವಿರ ಸಂಖ್ಯೆಯಲ್ಲ ಲಕ್ಷ ಸಂಖ್ಯೆಯಲ್ಲಿ ಮಾತನಾಡಿದರೂ ಹಿಂದುಗಳ ಒಗ್ಗಟ್ಟನ್ನು ಒಡೆಯುವುದು ಸಾಧ್ಯವಿಲ್ಲದ ಮಾತು.
ಭರತ ಖಂಡ, ಸನಾತನ ಧರ್ಮ ಇಲ್ಲಿನ ದೇವಸ್ಥಾನಗಳು ಹಿಂದುಗಳ ಅಸ್ಮಿತೆ. ಇದನ್ನು ನಾಶ ಮಾಡುವುದಿರಲಿ, ಅಲುಗಾಡಿಸಲೂ ಸಹ ಎಷ್ಟೇ ಪ್ರಯತ್ನ ಪಟ್ಟರು ನೀವೇ ಸುಟ್ಟು ಭಸ್ಮವಾಗಿ ಹೋಗುತ್ತಿರೋ ಹೊರತು ಸನಾತನಿಯರಿಗೆ ಕಿಂಚಿತ್ತೂ ಏನು ಆಗೋದಿಲ್ಲ ನೆನಪಿರಲಿ.

ಒಟ್ಟಾರೆಯಾಗಿ ಸನಾತನ ಧರ್ಮದ ನೆಮ್ಮದಿ ಶಾಂತಿಯನ್ನು ಹಾಳು ಮಾಡುತ್ತೇವೆ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಈಗಲೇ ತೆಗೆದುಹಾಕಿ. ಅದು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಅರೆ ಬೆಂದ ಹಿಂದೂ ಅಂದುಕೊಳ್ಳುವ ಮನಃಸ್ಥಿತಿಗಳು ಮಾತನಾಡಿದರೆ ಯಾವ ಪ್ರಯೋಜನವೂ ಕೂಡ ಆಗುವುದಿಲ್ಲ ಎನ್ನುವುದು ನೆನಪಿರಲಿ.
ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನುವುದೇ ಕೋಟ್ಯಾಂತರ ಹಿಂಗೂಗಳ ಆಗ್ರಹ. ಆದರೆ, ಇದನ್ನೇ ನೆಪ ಮಾಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿನ ತಂಟೆಗೆ ಬಂದರೆ ಸನಾತನಿಯರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎನ್ನುವ ಪರಿಜ್ಞಾನ ಕೂಡ ಎಲ್ಲರ ಮನಸಲ್ಲಿ ಇರಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post