Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸೌಜನ್ಯಗೆ ನ್ಯಾಯ ಸಿಗಲೇ ಬೇಕು | ಆದರೆ… ಧರ್ಮಸ್ಥಳ ಮಂಜುನಾಥನ ತಂಟೆಗೆ ಬಂದರೆ…

ಸನಾತನ ನೆಲದ ಒಂದು ಹುಲ್ಲುಕಡ್ಡಿ ಅಲುಗಾಡಿಸಲೂ ಯಾರಿಂದಲೂ ಅಸಾಧ್ಯ

March 8, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಲೇಖನ: ಭಾನುಪ್ರಕಾಶ್ ಎಸ್. ಆಚಾರ್ಯ  |

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವ ಸೂಚನೆ ದೊರೆಯುವುದೋ, ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಅಂತ ಭಗವಾನ್ ಶ್ರೀಕೃಷ್ಣ ಹೇಳಿದ್ದಾನೆ.

Also Read>> ಬೆಂಗಳೂರು ವಿವಿ ಮರುನಾಮಕರಣ ಓಕೆ-ವಿವಿಗಳ ಪುನರ್ ವಿಲೀನದ ಬಗ್ಗೆ ಸ್ಪಷ್ಠತೆ ನೀಡಿಲ್ಲ ಏಕೆ?

ಧರ್ಮೋ ರಕ್ಷತಿ ರಕ್ಷಿತಃ-ಸನಾತನ ಹಿಂದೂ ಧರ್ಮ ಗ್ರಂಥ ಮಹಾಭಾರತದಲ್ಲಿ ಹೇಳಿರುವ ವಾಕ್ಯವಿದು. ನೀನು ಧರ್ಮವನ್ನು ರಕ್ಷಿಸಿದರೆ ಧರ್ಮವು ನಿನ್ನನ್ನು ರಕ್ಷಣೆ ಮಾಡುತ್ತದೆಯೋ ಮನುಜ ಎಂದು.
ಸನಾತನ ಧರ್ಮಕ್ಕೆ ಇಂತಿಷ್ಟೇ ವರ್ಷಗಳ ಇತಿಹಾಸ ಇದೆ ಎನ್ನುವುದಕ್ಕೆ ಯಾವ ಸಾಕ್ಷಿಗಳು ಸಹ ಇಲ್ಲ; ಅಷ್ಟು ಪುರಾತನ ಸನಾತನ ಧರ್ಮ ನಮ್ಮದು, ಋಷಿಮುನಿಗಳು ತಪ್ಪಸ್ಸು ಮಾಡಿದ ಪುಣ್ಯ ಭೂಮಿ ನಮ್ಮದು, ಲಕ್ಷಾಂತರ ವರ್ಷಗಳ ಕಾಲ ರಾಮಾಯಣ, ಮಹಾಭಾರತ ನಡೆದ ಭರತ ಖಂಡ ನಮ್ಮದು. ಸನಾತನ ಧರ್ಮ ನೆಲೆಯೂರಿದಾಗ ಯಾವ ಧರ್ಮಗಳೂ ಈ ಭೂಮಿಯ ಮೇಲೆ ಇನ್ನೂ ಕಣ್ಣು ಸಹಾ ಬಿಟ್ಟಿರಲಿಲ್ಲ ಬಿಡಿ.

ಆಧುನಿಕತೆಯ ಬಿಸಿಲುಕುದುರೆ ಏರಿರುವ ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು #WesternCulture ಅನುಕರಿಸಿ ನಮ್ಮ ಧರ್ಮದ ಮೂಲ ಆಚರಣೆ, ಸಂಪ್ರದಾಯಗಳ ಬಗ್ಗೆಯೇ ಮರೆಯುತ್ತಿರುವ ಆತಂಕ ಈಗ ಎದುರಾಗಿದೆ.

ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಇಡೀ ಭರತ ಖಂಡವನ್ನು ಸುತ್ತಿ, ವಿಶ್ವ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ನಿದ್ದೆಯಿಂದ ಎಬ್ಬಿಸದೆ ಇಲ್ಲದಿದ್ದರೆ ಈ ವೇಳೆಗೆ ಭರತ ಖಂಡ ಮೊಹಮದ್ ಗಜನಿ ಸೇರಿ ಹಲವು ವಿದೇಶಿ ದಾಳಿಕೋರ ಹಾಗೂ ಸ್ವದೇಶಿ ದಾಳಿಕೋರ ಅನ್ಯಮತೀಯ ರಾಜರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಬಲವಂತವಾಗಿ ಸನಾತನ ಧರ್ಮದವರನ್ನು ಮತಾಂತರ ಮಾಡುತ್ತಿದ್ದರು.
ನಮ್ಮ ಹಿರಿಯರು ಸನಾತನ ಧರ್ಮಕ್ಕೆ ಭದ್ರ ಬುನಾದಿ ಹಾಕಿದ್ದರಿಂದಲೇ ಇಂದಿಗೂ ಹಿಂದೂ ಧರ್ಮವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ, ಅದರಲ್ಲೂ ಪ್ರತಿಶತ 10ರಷ್ಟು ಹಿಂದೂಗಳು ಹಣದ ಆಸೆಗೆ ಇಲ್ಲವೇ ಅಧಿಕಾರದ ಆಸೆಗೆ ಅನ್ಯ ಕೋಮಿನವರ ಜೊತೆಗೆ ಸೇರಿ ಸನಾತನ ಧರ್ಮವನ್ನು ಮುಳುಗಿಸಬೇಕು ಎಂಬ ಪ್ರಯತ್ನ ಮಾಡುತ್ತಿರುವುದು ದುರಂತ.

ಆದರೆ, ಅವರಿಗೆ ತಿಳಿದಿರಲಿ ಇದು ಪ್ರಯತ್ನ ಅಷ್ಟೇ ಸನಾತನ ಧರ್ಮವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿ ಮೊನ್ನೆ ತಾನೆ ನಡೆದ ಮಹಾಕುಂಭಮೇಳ.

Also Read>> ಹಾಸನ | ಪೂಜಾ ರಘುನಂದನ್ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ’ಗೆ ಭಾಜನ

ಹೌದು… ಸುಮಾರು 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ನಮ್ಮ ದೇಶದ ಅರ್ಧದಷ್ಟು ಜನ ಸಾಕ್ಷಿಯಾಗಿ ಸನಾತನ ಧರ್ಮ ಒಡೆಯುವವರಿಗೆ ಮರ್ಮಾಘಾತ ಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಯಾಗರಾಜದಲ್ಲಿನ ಮಹಾಕುಂಭ ಮೇಳವು ಕೋಟ್ಯಂತರ ಹಿಂದೂಗಳನ್ನು ಒಗ್ಗೂಡಿಸಿ ಮತ್ತೊಮ್ಮೆ ಕೂಗಿ ಹೇಳಿದೆ ಸನಾತನ ಧರ್ಮದ ತಂಟೆಗೆ ಬರುವ ಅನ್ಯಧರ್ಮಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಉತ್ತರದಲ್ಲಿ ಕಾಶಿ, ಅಯೋಧ್ಯಾ, ಪ್ರಯಾಗರಾಜ್, ಹೃಷಿಕೇಶ್, ಶ್ರೀಶೈಲ ಎಷ್ಟು ಪವಿತ್ರವೋ, ದಕ್ಷಿಣದ ನಮಗೆ ರಾಮೇಶ್ವರ, ತಿರುಪತಿ, ಅಂಜನಾದ್ರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಭಿಕೆ, ಉಡುಪಿ, ಶೃಂಗೇರಿಗಳೂ ಸಹ ನಮಗೆ ಅತ್ಯಂತ ಪುಣ್ಯ ಸ್ಥಳಗಳು.

ನಮ್ಮ ನಂಬಿಕೆಯ ಈ ಪುಣ್ಯಕ್ಷೇತ್ರಗಳ ಸುದ್ದಿಗೆ ಯಾವ ಕೋಮಿನ ಜನರು ಮಾತನಾಡಲು ಕಟ್ಟರ್ ಹಿಂದುವಾದಿಗಳು ಬಿಡುವ ಮಾತೇ ಇಲ್ಲ. ಅಲ್ಲದೇ, ಈ ದೇವಸ್ಥಾನಗಳ ಹೆಸರು ಹಾಳು ಮಾಡೋಕೆ ಆಧರ್ಮದ ಕರ್ತೃಗಳು ಬಂದರು ಸಾಧ್ಯವಿಲ್ಲ, ಅಷ್ಟು ಗಟ್ಟಿಯಾಗಿ ನೆಲೆಯೂರಿದೆ ಈ ಕ್ಷೇತ್ರಗಳು.
ಭರತ ಖಂಡದಲ್ಲಿ ನಮ್ಮ ಸನಾತನ ಹಿಂದೂ ಧರ್ಮ ಯಾವುದೇ ದುಷ್ಟ ಶಕ್ತಿಗಳು ಸಾವಿರ ಸಂಖ್ಯೆಯಲ್ಲ ಲಕ್ಷ ಸಂಖ್ಯೆಯಲ್ಲಿ ಮಾತನಾಡಿದರೂ ಹಿಂದುಗಳ ಒಗ್ಗಟ್ಟನ್ನು ಒಡೆಯುವುದು ಸಾಧ್ಯವಿಲ್ಲದ ಮಾತು.

ಭರತ ಖಂಡ, ಸನಾತನ ಧರ್ಮ ಇಲ್ಲಿನ ದೇವಸ್ಥಾನಗಳು ಹಿಂದುಗಳ ಅಸ್ಮಿತೆ. ಇದನ್ನು ನಾಶ ಮಾಡುವುದಿರಲಿ, ಅಲುಗಾಡಿಸಲೂ ಸಹ ಎಷ್ಟೇ ಪ್ರಯತ್ನ ಪಟ್ಟರು ನೀವೇ ಸುಟ್ಟು ಭಸ್ಮವಾಗಿ ಹೋಗುತ್ತಿರೋ ಹೊರತು ಸನಾತನಿಯರಿಗೆ ಕಿಂಚಿತ್ತೂ ಏನು ಆಗೋದಿಲ್ಲ ನೆನಪಿರಲಿ.
ಹಿಂದೂ ಹಾಗೂ ಜೈನ ಪರಂಪರೆಯು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ಎರಡು ಧರ್ಮಗಳು ಸಹ ಸನಾತನ ಧರ್ಮಕ್ಕೆ ಸೇರಿದ್ದು. ಕಾಲಾಂತರದಲ್ಲಿ ಕೆಲವು ವಿಭಿನ್ನ ಆಚರಣೆಯಲ್ಲಿ ಏರುಪೇರುಗಳು ಇದ್ದಾವೆ ಅಷ್ಟೇ. ಹೊರತಾಗಿ ಹಿಂದೂ ಜೈನ ಧರ್ಮಗಳು ಸನಾತನ ಧರ್ಮವೇ. ಮಹಾಕುಂಭದಲ್ಲಿ ಹಿಂದೂಗಳು ಎಷ್ಟು ಸಂಖ್ಯೆಯಲ್ಲಿ ಹೋಗಿ ಬಂದರೊ ಅಷ್ಟೇ ಸಂಖ್ಯೆಯಲ್ಲಿ ಜೈನರು ಕೂಡ ಮಹಾಕುಂಭದಲ್ಲಿ ಅಮೃತ ಸ್ನಾನ ಮಾಡಿ ಬಂದಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳಬೇಕು ನೆಚ್ಚಿನ ಬಾಂಧವರೇ.

ಒಟ್ಟಾರೆಯಾಗಿ ಸನಾತನ ಧರ್ಮದ ನೆಮ್ಮದಿ ಶಾಂತಿಯನ್ನು ಹಾಳು ಮಾಡುತ್ತೇವೆ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಈಗಲೇ ತೆಗೆದುಹಾಕಿ. ಅದು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಅರೆ ಬೆಂದ ಹಿಂದೂ ಅಂದುಕೊಳ್ಳುವ ಮನಃಸ್ಥಿತಿಗಳು ಮಾತನಾಡಿದರೆ ಯಾವ ಪ್ರಯೋಜನವೂ ಕೂಡ ಆಗುವುದಿಲ್ಲ ಎನ್ನುವುದು ನೆನಪಿರಲಿ.

ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನುವುದೇ ಕೋಟ್ಯಾಂತರ ಹಿಂಗೂಗಳ ಆಗ್ರಹ. ಆದರೆ, ಇದನ್ನೇ ನೆಪ ಮಾಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿನ ತಂಟೆಗೆ ಬಂದರೆ ಸನಾತನಿಯರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎನ್ನುವ ಪರಿಜ್ಞಾನ ಕೂಡ ಎಲ್ಲರ ಮನಸಲ್ಲಿ ಇರಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: Bhanuprakash AcharyaHindu DharmaKannada News WebsiteLatest News KannadaWestern cultureಧರ್ಮೋ ರಕ್ಷತಿ ರಕ್ಷಿತಃಪಾಶ್ಚಾತ್ಯ ಸಂಸ್ಕೃತಿಭಗವಾನ್ ಶ್ರೀಕೃಷ್ಣಭಾನುಪ್ರಕಾಶ್ ಎಸ್. ಆಚಾರ್ಯಮಹಾಭಾರತರಾಮಕೃಷ್ಣ ಪರಮಹಂಸಶ್ರೀ ಶಂಕರಾಚಾರ್ಯರುಸನಾತನ ಧರ್ಮಸ್ವಾಮಿ ವಿವೇಕಾನಂದರುಹಿಂದೂ ಧರ್ಮ
Previous Post

ಬೆಂಗಳೂರು ವಿವಿ ಮರುನಾಮಕರಣ ಓಕೆ-ವಿವಿಗಳ ಪುನರ್ ವಿಲೀನದ ಬಗ್ಗೆ ಸ್ಪಷ್ಠತೆ ನೀಡಿಲ್ಲ ಏಕೆ?

Next Post

ಮಾ. 9ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ದಾಸವಾಣಿ ಕಾರ್ಯಕ್ರಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಾ. 9ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ದಾಸವಾಣಿ ಕಾರ್ಯಕ್ರಮ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!