No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Sunday, September 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಮಾಸೂರು, ಕಾನಲೆ, ಸೈದೂರು ಮತದಾರ ಪ್ರಭುವಿನ ಅನಿಸಿಕೆ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಲ್ಪ ನ್ಯೂಸ್ ವಿನೂತನ ಪ್ರಯತ್ನ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಾಸ್ತವ ಸಮೀಕ್ಷಾ ವರದಿ-7

kalpa News by kalpa News
April 16, 2019
in Special Articles
0
ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಮಾಸೂರು, ಕಾನಲೆ, ಸೈದೂರು ಮತದಾರ ಪ್ರಭುವಿನ ಅನಿಸಿಕೆ
Share on FacebookShare on TwitterShare on WhatsApp

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.

ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.

ಮಾಸೂರು, ಕಾನಲೆ, ಸೈದೂರು ಭಾಗಗಳಲ್ಲಿ ಒಲವು-ನಿಲುವು ಹೀಗಿದೆ:

ಸೊರಬ ತಾಲೂಕು ಮತ್ತು ಸಾಗರ ತಾಲೂಕು ಪರಸ್ಪರ ಒಂದಲ್ಲ ಒಂದು ಗ್ರಾಮವನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿವೆ. ಸಾಗರ ತಾಲೂಕಿನ ಕಾನಲೆ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ ಅವರ ಕಂದಾಯ ಇಲಾಖಾ ಕೆಲಸವೆಲ್ಲಾ ಸಾಗರ ತಾಲೂಕು ಕಚೇರಿ ವ್ಯಾಪ್ತಿಗೆ ಬರುತ್ತದೆ.

ಇಲ್ಲಿ ಈಗ ನೋಡಿದರೆ 50:50 ಇದೆ. ಬಿಜೆಪಿ ಸ್ವಲ್ಪ ಕೆಲಸ ಮಾಡಿದೆ. ಜಾತಿ ವಿಷಯ ಬಂದಾಗ ಮೆಜಾರಿಟಿ ಇರುವ ಈಡಿಗರಲ್ಲೂ ಬಿಜೆಪಿ ಮತ್ತು ಮೈತ್ರಿ ಪಕ್ಷದ ಒಲವಿದ್ದರಿದ್ದಾರೆ. ಸದ್ಯ ಮೋದಿ ಅಲೆ ಕೂಡ ಇದೆ. ನಾವು ತಾಳಗುಪ್ಪ ಹೋಬಳಿಯವರು ತ್ರಿಶಂಕುಗಳಾಗಿದ್ದೇವೆ. ಇಬ್ಬರು ಶಾಸಕರು. ಒಮ್ಮೊಮ್ಮೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಗೊಂದಲವಾಗಿ ಬಿಡುತ್ತದೆ. ಈ ಕಡೆ ಮುಂಚೆ ಜೆಡಿಎಸ್ ಇರಲಿಲ್ಲ. ಕಾಂಗ್ರೆಸ್ ಇತ್ತು, ಈಗ ಆ ಪಕ್ಷದ ಒಲವಿನ ಮತ ಯಾವ ಕಡೆ ಕಾದು ನೋಡಬೇಕಿದೆ.

-ಜಯಂತ್ ಕಾಳಿ, ಕಾನಲೆ ಗ್ರಾಮಸ್ಥ

ಏಳು ಗ್ರಾಮಗಳ ಗ್ರೂಪ್ ಪಂಚಾಯತ್, ಕಾನಲೆ ಕೇಂದ್ರ ಸ್ಥಳ. ಸುಮಾರು ಐದು ಸಾವಿರ ಮತದಾರರಿದ್ದಾರೆ. ನಮ್ಮದೆಲ್ಲ ಬಿಜೆಪಿಗೆ ಸರ್.

-ಮಂಜಪ್ಪ, ಸುಣ್ಣಬಣ್ಣ ಕೆಲಸದ ಗುತ್ತಿಗೆದಾರರು, ಕಾನಲೆ

ಬದಲಾವಣೆ ಬೇಕರೀ. ಯಡ್ಯೂರಪ್ಪ ಅವರಿಗೆ ಒಂದು ಚಾನ್ಸ್‌ ಕೊಟ್ವಿ. ಬಿಜೆಪಿಯವರಲ್ಲೇ ಕಚ್ಚಾಟ ಶುರುವಾಯಿತು. ಈಗ ಮೋದಿ ಅಂತೀರಿ ಅವರಿಗೂ ಒಂದು ಚಾನ್ಸ್‌ ಕೊಟ್ವಿ. ಆದರೆ ಈಗ ಸಾಕು. ಈಗ ಮೈತ್ರಿ ಪಕ್ಷಕ್ಕೆ ಕೊಡ್ತೀವಿ.

-ಕೃಷ್ಣಪ್ಪ, ಕಾನಲೆಯ ಕೃಷಿಕ

ನಮ್ಮಲ್ಲಿನ ಸುಮಾರು ಆರುನೂರು ಓಟುಗಳಲ್ಲಿ ನಾನ್ನೂರು ಬಿವೈಆರ್’ಗೆ ಚಲಾವಣೆಯಾಗುವುದರಲ್ಲಿ ಸಂದೇಹ ಬೇಡ. ಕಾರ್ಯಕರ್ತರು ಇಲ್ಲಿಗೆ ಭೇಟಿ ನೀಡಬೇಕು ಎಂದು ಹೇಳುವುದನ್ನು ಮರೆಯಲಿಲ್ಲ.

-ರಾಮಚಂದ್ರ, ಫ್ಯಾಬ್ರಿಕೇಟಿಂಗ್ ವರ್ಕ್ ಶಾಪ್ ಮಾಲೀಕ, ಮಾಸೂರು

ಈ ಸಾರಿ ಇಲ್ಲಿ ಸಮ ಸಮ ಕಾದಾಟ. ಮೈತ್ರಿಪಕ್ಷ ಲೀಡ್ ಪಡೆಯುತ್ತದೆ. ಆದರೆ ಮೋದಿ ಅಲೆಯಿಂದ ಈ ಶೇಕಡಾವಾರು ಹೆಚ್ಚಾಗಬಹುದು.

-ಜಗದೀಶ್, ಅರುಣ್, ವರ್ಕ್ ಶಾಪ್’ನ ಕೆಲಸಗಾರರು

ಈಗ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಮಾತು ನಡೆಯಲ್ಲ. ಆದರೂ ಇಲ್ಲಿ ಯಾರು ಯಾವ ಕಡೆ ಅಂತ ಹೇಳೋದು ಓಟು ನೀಡುವ ದಿನವೇ.

-ಗಣಪತಿಯಪ್ಪ, 80 ವರ್ಷದ ಹಿರಿಯ ನಾಗರಿಕ, ಕಾಗೋಡು

ಹಾಲಪ್ಪ ಅವರು ಅಡ್ಡಿಯಿಲ್ಲ ಕೆಲಸವಂತ. ಕಳಸವಳ್ಳಿ ಸೇತುವೆ ಶಂಕುಸ್ಥಾಪನೆ ಇತ್ಯಾದಿ ಗುರುತಿಸುವಂತಹ ಕೆಲಸ ಮಾಡಿದ್ದಾರೆ. ಈ ಸಲ ದೇಶದ ರಕ್ಷಣೆ ದೃಷ್ಟಿಯಿಂದ ನಮ್ಮ ಓಟು ಎಂದವರು ಮೋದಿಯ ಹೆಸರು ಹೇಳದೇ ಮೂಗುಮ್ಮಾಗಿ ಮಾತಾಡಿದರು.

-ರಾಜು ಸೂರಗುಪ್ಪೆ, ಕೃಷಿಕರು

ಇಲ್ಲಿ ಶೇ. 99ರಷ್ಟು ಮತ ಚಲಾವಣೆ ಆಗುವಂತೆ ಮಾಡುತ್ತೇವೆ. ಬಿಜೆಪಿಗೆ ಶೇ.60ರಷ್ಟು ಲೀಡ್ ಕೊಡುತ್ತೇವೆ.

-ಸಂದೀಪ್, ಕೃಷಿಕರು

ಇಲ್ಲಿನ ಆರುನೂರು ಓಟುಗಳಲ್ಲಿ ನಾನ್ನೂರು ಬಿವೈಆರ್’ಗೆ ಸಿಗುತ್ತವೆ.

-ಉಮೇಶ್ ಮಳವರಿಗೆ, ಕೃಷಿಕರು

ಇಲ್ಲಿ ನಾನ್ನೂರು ಓಟುಗಳು ಮೈತ್ರಿಪಕ್ಷಕ್ಕೆ ಬೀಳುತ್ತವೆ. ನಮ್ಮಲ್ಲಿ ಮೈತ್ರಿ ಅಭ್ಯರ್ಥಿಗೇ ಲೀಡ್ ಕೊಡುತ್ತೇವೆ.

-ಸರ್ವಶ್ರೀಅಣ್ಣಪ್ಪ, ರಮೇಶ್ ಮತ್ತು ಸುರೇಶ್, ಮಾಸೂರು

ಸೈದೂರು ಪಂಚಾಯತ್’ನಲ್ಲಿ ಏಳು ಹಳ್ಳಿಗಳಿವೆ. ಸದ್ಯ ಈಗ ಸಮಸಮ ಎನಿಸುತ್ತದೆ. ಪ್ರಯತ್ನಪಟ್ಟರೆ ಬಿಜೆಪಿಯವರಿಗೇ ಇಲ್ಲಿ 70:30 ಮಾಡುವ ಸಾಧ್ಯತೆಯಿದೆ.

-ವೆಂಕಟೇಶ್, ಸೈದೂರು

ನಮಗೆ ಯಾರೂ ಒಳ್ಳೇದು ಮಾಡಿಲ್ಲ. ಬ್ಯಾಂಕಿನಾಗೆ ಎಂಬತ್ತು ಸಾವಿರ ಸಾಲ ಐತೆ ಮನ್ನಾ ಮನ್ನಾ ಅಂತಾರೆ. ಈವರೆಗೂ ನಮಗೆ ಏನೂ ಆಗಿಲ್ಲ. ನಾವ್ಯಾರೂ ಓಟು ಕೊಡಾದೇ ಇಲ್ಲ.

-ಸೈದೂರಿನ ಕೂಲಿ ಕಾರ್ಮಿಕ ಮಹಿಳೆಯರು

ಸೈದೂರಿನ ಎಸ್’ಸಿ ಕಾಲನಿಗೆ ಹೊಸದಾಗಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.

ಇಲ್ಲಿ ಸಾವಿರ ಓಟುಗಳಿವೆ. ನಮಗೆ ಮೋದಿ ಪಿಎಂ ಆಗಬೇಕು. ಇನ್ನು ಹತ್ತು ವರ್ಷ ಅವರೇ ಇರಬೇಕು. ಇಲ್ಲಿಗೆ ಪ್ರಚಾರಕ್ಕೆ ಬಿವೈಆರ್ ಬಂದಿದ್ರು. ಮತ್ತೇನು ಬರಬೆರಕಿಲ್ಕ. ಇಲ್ಲಿ ನಾವು ಮಾಡುತ್ತಿರೋ ರಸ್ತೆ ಕಾಮಗಾರಿ ಸುಮಾರು ಏಳು ಲಕ್ಷ ರೂ. ಅಂದಾಜಿನದು.

-ರಮೇಶ್, ಮೇಸ್ತ್ರಿ

ಇಲ್ಲಿನ ಪರಿಸ್ಥಿತಿ ಸಮಸಮ ಇದೆ. ಮೈತ್ರಿ ಪಕ್ಷದ ಅಭ್ಯರ್ಥಿಗೆ ಅನುಕಂಪದಿಂದ ಲಾಭ ಆಗಲಿದೆ.

-ಕೇಶವ, ಸೈದೂರಿನ ಕೃಷಿಕರು

ಸುರೇಶ್, ಅಣ್ಣಪ್ಪ ಅವರು ನಮಗೆ ದೇಶ ಮುಖ್ಯ. ದೇಶ ರಕ್ಷಣೆ ಬಗ್ಗೆ ಯಾರು ಗಮನ ಹರಿಸುತ್ತಾರೋ ಅವರಿಗೆ ನಾವು ಓಟು ನೀಡುತ್ತೇವೆ.

-ಹೊಳೆಯಪ್ಪ, ಸೈದೂರು
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:

ಈ ಭಾಗದ ಹಲವು ಪ್ರದೇಶಗಳು ಸಾಗರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಗಿದೆ. ಅದರಲ್ಲಿ ತಾಳಗುಪ್ಪ ಹೋಬಳಿಗೆ ಸೇರಿಕೊಂಡಿರುವ ಗ್ರಾಮಗಳಿಗೆ ಇಬ್ಬಿಬ್ಬರು ಶಾಸಕರು. ಹೀಗಾಗಿ, ಇಲ್ಲಿನ ನಾಗರಿಕರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎನ್ನುವ ಗೊಂದಲದಲ್ಲೇ ಇರಬೇಕಿದೆ.

ಇನ್ನು, ಒಟ್ಟಾರೆಯಾಗಿ ಈ ಭಾಗದಲ್ಲಿ ನೋಡುವುದಾದರೆ, ಬಿಜೆಪಿಗೆ ಭದ್ರ ನೆಲೆ ಇದೆ ಎನ್ನಬಹುದಾಗಿದ್ದು, ಮೈತ್ರಿ ಪಕ್ಷಕ್ಕೆ ಅದರಲ್ಲೂ ಜೆಡಿಎಸ್’ಗೂ ಸಹ ಉತ್ತಮ ಬೆಂಬಲವಿದ್ದು, ಫೈಟ್ ನೀಡಲಿದೆ.

ಆದರೆ, ಇಲ್ಲಿನ ತೀರಾ ಒಳಗಿನ ಪ್ರದೇಶಗಳನ್ನು ನೋಡುವುದಾದರೆ, ಸಣ್ಣ ಸಣ್ಣ ಗ್ರಾಮಗಳಲ್ಲೂ ಸಹ ಮೋದಿ ಅಲೆ ಇದೆ. ಇದು ನಿಜಕ್ಕೂ ಮತವಾಗಿ ಬದಲಾವಣೆಯಾದರೆ ಬಿಜೆಪಿಗೆ ಇಲ್ಲಿ ಲೀಡ್ ನಿಶ್ಚಿತ. ಹಲವು ವಿಚಾರಗಳನ್ನು ಹಂಚಿಕೊಂಡಂತೆ ಕಂಡರೂ, ಇಲ್ಲಿನ ಮತದಾರ ಮಾತ್ರ ಮಗುಮ್ಮಾಗಿಯೇ ಇರುತ್ತಾರೆ ಎನಿಸಿತು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ

ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Tags: BJPcongressElection Survey in KannadaIndia election 2019JDSKalpa News Digital MediaLoksabha election 2019Malnad NewsShivamoggaSpecial Articleಕಲ್ಪನ್ಯೂಸ್ ಲೋಕಾಯಾತ್ರೆಚುನಾವಣಾ ಸಮೀಕ್ಷೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್‌, ದುರ್ಗ ಲಾಸ್ಟ್‌- ಬಾಲಕಿಯರದ್ದೇ ಮೇಲುಗೈ

Next Post

ಹನಿಮೂನ್ ಎಂದರೇನು? ಶ್ರೀಮುತ್ತು ಸಿನಿ ಸರ್ವೀಸ್’ನಲ್ಲಿ ಬರಲಿದೆ ವೆಬ್ ಸೀರೀಸ್

kalpa News

kalpa News

Next Post
ಹನಿಮೂನ್ ಎಂದರೇನು? ಶ್ರೀಮುತ್ತು ಸಿನಿ ಸರ್ವೀಸ್’ನಲ್ಲಿ ಬರಲಿದೆ ವೆಬ್ ಸೀರೀಸ್

ಹನಿಮೂನ್ ಎಂದರೇನು? ಶ್ರೀಮುತ್ತು ಸಿನಿ ಸರ್ವೀಸ್’ನಲ್ಲಿ ಬರಲಿದೆ ವೆಬ್ ಸೀರೀಸ್

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL