No Result
View All Result
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ
English Articles

Stay Hydrated to Protect Your Voice This Summer: ENT Expert Advice

by ಕಲ್ಪ ನ್ಯೂಸ್
February 10, 2026
0

Kalpa Media House  |  Bengaluru  |  Special Article  | With summer temperatures rising steadily in Bengaluru, doctors are observing an increase...

Read moreDetails
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
  • Advertise With Us
  • Grievances
  • About Us
  • Contact Us
Tuesday, February 10, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಒಂದೇ ದಿನ ಕರ್ನಾಟಕದ ಈ ಮೂರು ಕ್ಷೇತ್ರಕ್ಕೆ ಭೇಟಿ ನೀಡಿ, ಕಾಶಿ ಯಾತ್ರೆಯಷ್ಟು ಪುಣ್ಯ ಪಡೆಯಿರಿ

ಮೂಗಿನಲ್ಲಿ ಸಾಲಿಗ್ರಾಮವಿರುವ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿಯ ದರ್ಶನವೇ ಮಹಾಸೌಭಾಗ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 20, 2020
in Special Articles
0
ಒಂದೇ ದಿನ ಕರ್ನಾಟಕದ ಈ ಮೂರು ಕ್ಷೇತ್ರಕ್ಕೆ ಭೇಟಿ ನೀಡಿ, ಕಾಶಿ ಯಾತ್ರೆಯಷ್ಟು ಪುಣ್ಯ ಪಡೆಯಿರಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ
ತಸ್ಯಮೃತ್ಯು ಭಯಂನಾಸ್ತಿ ಸರ್ವತ್ರ ವಿಜಯೀ ಭವೇತ್॥

ಸನಾತನ ಪರಂಪರೆಯಲ್ಲಿ ಕಾಶಿ ಅಥವಾ ವಾರಣಾಸಿ ಕ್ಷೇತ್ರಕ್ಕೆ ವಿಶೇಷ ಐತಿಹ್ಯವಿದೆ. ಬಹುತೇಕ ಹಿಂದೂಗಳೂ ತಮ್ಮ ಜೀವಮಾನದಲ್ಲೊಮ್ಮೆ ಕಾಶಿ ಯಾತ್ರೆ ಮಾಡಬೇಕು ಎಂಬ ಮನೋಭಿಷ್ಟ ಹೊಂದಿರುತ್ತಾರೆ. ಆದರೆ, ಎಲ್ಲರಿಗೂ ಕಾಶಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳು ಕರ್ನಾಟಕದ ಈ ಮೂರು ಪುಣ್ಯ ಕ್ಷೇತ್ರಗಳಿಗೆ ಒಂದೇ ದಿನ ಭೇಟಿ ನೀಡಿ, ದೇವರ ದರ್ಶನ ಪಡೆದರೆ ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆ. ಹಾಗಾದರೆ, ಯಾವುವು ಆ ಮೂರು ಕ್ಷೇತ್ರಗಳು? ನೋಡೋಣ ಬನ್ನಿ.

ಅದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣ. ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಈ ಸ್ಥಳದಲ್ಲಿ ನೆಲೆಸಿದ್ದಾನೆ ಶ್ರೀ ಹುಚ್ಚರಾಯ ಸ್ವಾಮಿ.

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಶ್ರೀ ಆಂಜನೇಯ, ಪ್ರಾಣದೇವರು, ಹನುಮಂತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಚಿರಂಜೀವಿ ಇಲ್ಲಿ ಶ್ರೀ ಹುಚ್ಚರಾಯ ಸ್ವಾಮಿಯಾಗಿ ನೆಲೆ ನಿಂತಿದ್ದಾನೆ.

ನೂರಾರು ವರ್ಷಗಳ ಹಿಂದೆ ಇಲ್ಲಿಗೆ ಸಮೀಪವಿದ್ದ ದೇವಾಲಯವೊಂದನ್ನು ದುಷ್ಟರು ಕೆಡವಿ ಮೂರ್ತಿಯನ್ನು ಕೆರೆಗೆ ಹಾಕುತ್ತಾರೆ. ಹಾಗೇ, ಹಲವು ವರ್ಷಗಳ ನಂತರ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರನೊಬ್ಬನಿಗೆ ಸ್ವಪ್ನದಲ್ಲಿ ಕಾಣಿಸಿಕೊಳ್ಳುವ ಆಂಜನೇಯ ಸ್ವಾಮಿ, ‘ಇಲ್ಲಿನ ಕೆರೆಯಲ್ಲಿ ನಾನಿದ್ದೇನೆ. ನನ್ನ ಮೇಲೆ ಬಟ್ಟೆ ಒಗೆಯುವುದು, ಸ್ನಾನ ಮಾಡುವುದನ್ನು ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ನನ್ನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡು ಎಂದು ಆದೇಶಿಸುತ್ತಾನೆ.

ಇದನ್ನು ಅನುಸರಿಸಿದ ಪಾಳೆಗಾರ, ಇಲ್ಲಿಗೆ ಆಗಮಿಸಿ ಕೆರೆಯ ನೀರನ್ನು ಖಾಲಿ ಮಾಡಿಸಿ ನೋಡಿದಾಗ ದೊಡ್ಡ ಬಾನಿಯಲ್ಲಿ ಮಣ್ಣಿಗೆ ಅಂಟಿಕೊಂಡಿದ್ದ ಮೂರ್ತಿಯಿರುತ್ತದೆ. ಇದನ್ನು ಮೇಲಕ್ಕೆ ಎತ್ತುವಾಗ ಹಾರೆಯ ಪೆಟ್ಟಿಗೆ ಆಂಜನೇಯ ಸ್ವಾಮಿಯ ಮೂಗಿನ ಭಾಗ ಒಡೆದು ಹೋಗುತ್ತದೆ. ಇದರಿಂದ ಬೇಸರಗೊಂಡ ಪಾಳೆಗಾರನ ಸ್ವಪ್ನದಲ್ಲಿ ಒಂದು ದಿನ ಮತ್ತೆ ಕಾಣಿಸಿಕೊಳ್ಳುವ ದೇವರು, ದಂಡಕಿ ನದಿಯಲ್ಲಿ ದೊರೆಯುವ ಮತ್ಸ್ಯ ಸಾಲಿಗ್ರಾಮವನ್ನು ಮೂಗಿನ ಭಾಗದಲ್ಲಿ ಇರಿಸಿ, ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸುತ್ತಾನೆ. ಇದರಂತೆ ಈ ವಿಚಾರವನ್ನು ತಿಳಿದುಕೊಂಡ ಪಾಳೇಗಾರ ಸಾಲಿಗ್ರಾಮ ತರಲು ಜನರನ್ನು ಕಳುಹಿಸುತ್ತಾನೆ.

ಕೆಲವು ದಿನಗಳ ನಂತರ, ಮತ್ತೆ ಸ್ವಪ್ನದಲ್ಲಿ ಬರುವ ಸ್ವಾಮಿ, ಮೂರ್ತಿಯನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗು. ಎಲ್ಲಿ ಗಾಡಿಯ ಅಚ್ಚು ಮುರಿಯುತ್ತದೋ ಅಲ್ಲಿಯೇ ಪ್ರತಿಷ್ಠಾಪನೆ ಮಾಡು ಎಂದು ಆದೇಶಿಸುತ್ತಾನೆ.

ಇದರಂತೆ, ಮೂರ್ತಿಯನ್ನು ಗಾಡಿಯಲ್ಲಿಟ್ಟು ತೆಗೆದುಕೊಂಡು ಬರುವ ವೇಳೆ ಈಗ ದೇವಾಲಯವಿರುವ ಜಾಗದಲ್ಲಿದ್ದ ಓರ್ವ ಸನ್ಯಾಸಿಯ ಕುಟೀರದ ಬಳಿ ಮುರಿದು ಹೋಗುತ್ತೆ. ಆದರೆ, ಸನ್ಯಾಸಿ ಇದಕ್ಕೆ ಒಪ್ಪದೇ ತಿರಸ್ಕರಿಸುತ್ತಾರೆ.

ಆದರೆ, ಮುಂದೊಂದು ದಿನ ಮತ್ಸ್ಯ ಸಾಲಿಗ್ರಾಮ ಈ ಊರಿಗೆ ಬಂದ ನಂತರ ದೇವರು ಸನ್ಯಾಸಿಯ ಕನಸಿನಲ್ಲಿ ಬಂದು ಹಿಂದೆ ರಾಜ ನಿನ್ನ ಬಳಿ ಕೇಳಿದಂತೆ ಈ ಜಾಗವನ್ನು ದೇವಾಲಯಕ್ಕೆ ಕೊಡು. ಹಾಗೆಯೇ ನಿನ್ನ ಹೆಸರನ್ನೇ ದೇವರಿಗೆ ಇಡುವಂತೆ ಕೋರಿಕೋ ಎಂದು ಆದೇಶಿಸುತ್ತಾನೆ. ಆನಂತರ ಪಾಳೇಗಾರನನ್ನು ಭೇಟಿಯಾಗುವ ಸನ್ಯಾಸಿ ತನ್ನ ಸ್ಥಳವನ್ನು ಸ್ವೀಕರಿಸುವಂತೆಯೂ ಹಾಗೂ ದೇವರಿಗೆ ತನ್ನ ಹೆಸರು ಇಡುವಂತೆಯೂ ಹೇಳುತ್ತಾರೆ. ಆ ಸನ್ಯಾನಿಯ ಹೆಸರು ಹುಚ್ಚಪ್ಪ ಒಡೆಯರ್.

ತತಕ್ಷಣವೇ ಕಾರ್ಯಪ್ರವೃತ್ತನಾದ ಪಾಳೇಗಾರ ಪ್ರತಿಷ್ಠಾಪನೆಗೆ ಚೈತ್ರ ಮಾಸದ ಶುಕ್ಲ ಪಕ್ಷದ ಪೌರ್ಣಮಿಯನ್ನು ನಿಗದಿಪಡಿಸುತ್ತಾನೆ. ಇದೇ ವೇಳೆಯಲ್ಲಿ ಯತಿಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ವ್ಯಾಸತೀರ್ಥರ ಸ್ವಪ್ನದಲ್ಲಿ ಕಾಣಿಸಿಕೊಳ್ಳುವ ಆಂಜನೇಯ ಸ್ವಾಮಿ ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸುತ್ತಾನೆ. ಇದರಂತೆ, ಪಾಳೇಗಾರನನ್ನು ಭೇಟಿಯಾಗುವ ವ್ಯಾಸತೀರ್ಥರು ಸ್ವತಃ ತಮ್ಮ ಅಮೃತ ಹಸ್ತದಿಂದ ಶಿಕಾರಿಪುರದಲ್ಲಿ ಹುಚ್ಚರಾಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಇಂತಹ ಸ್ವಾಮಿಯ ದರ್ಶನ ಪಡೆದ ಲಕ್ಷಾಂತರ ಮಂದಿಯ ಕಷ್ಟ ಕಾರ್ಪಣ್ಯಗಳು ದೂರಾಗಿ, ತಮ್ಮ ಮನೋಭಿಲಾಷೆ ಈಡೇರಿದೆ.

ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ಸ್ವಾಮಿಯ ರಥೋತ್ಸವ ಜರುಗುತ್ತದೆ. ಇಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ದೇವಾಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೊಂದು ಸಮುದಾಯ ಭವನ, ಅತ್ಯಂತ ಸುಂದರ ಹಾಗೂ ಸ್ವಚ್ಛವಾದ ಕಲ್ಯಾಣಿಗೆ ಕಾರಣಕರ್ತರಾಗಿದ್ದಾರೆ.

ನಾವು ಆರಂಭದಲ್ಲಿ ಹೇಳಿದಂತೆ ಮೂರು ಪುಣ್ಯ ಕ್ಷೇತ್ರಗಳಲ್ಲಿ ಶಿಕಾರಿಪುರದ ಹುಚ್ಚರಾಯ ಸ್ವಾಮಿ ಕ್ಷೇತ್ರ ಮಹತ್ವವಾದುದು. ಒಂದೇ ದಿನ, ಅದರಲ್ಲೂ ಚೈತ್ರ ಮಾಸ, ಶ್ರಾವಣ ಮಾಸ, ಅಧಿಕ ಮಾಸದಲ್ಲಿ ಈ ಮೂರು ಕ್ಷೇತ್ರಗಳನ್ನು ದರ್ಶನ ಮಾಡಿದರೆ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾದರೆ, ಇನ್ನುಳಿದ ಎರಡು ಕ್ಷೇತ್ರಗಳು ಯಾವುವು? ಅವು ಹಾವೇರಿ ಜಿಲ್ಲೆಯ ಕದರಮಂಡಲಗಿ ಕಾಂತೇಶ ಹಾಗೂ ಹಿರೇಕೆರೂರು ತಾಲೂಕು ಸಾತೇನಹಳ್ಳಿಯ ಶಾಂತೇಶ. ಈ ಎರಡು ಕ್ಷೇತ್ರಗಳ ಬಗ್ಗೆ ಮುಂದಿನ ಲೇಖನದಲ್ಲಿ ಹೇಳುತ್ತೇವೆ.

Get In Touch With Us info@kalpa.news Whatsapp: 9481252093

Tags: Hindu TempleHistory of ShikaripuraKalpa Media HouseKalpa YouTube ChannelKannada News WebsiteKantesha Shantesha BranteshaLatest News KannadaMalnad NewsMatsya SaligramaPlaces to visit ShivamoggaShikaripuraSri Huccharaya Swamy Templeದೇವಸ್ಥಾನಪ್ರಾಣದೇವರುಮಲೆನಾಡು ಸುದ್ಧಿಶಿಕಾರಿಪುರಶಿವಮೊಗ್ಗ ನ್ಯೂಸ್ಶ್ರೀ ಆಂಜನೇಯ ಸ್ವಾಮಿಶ್ರೀ ಹುಚ್ಚರಾಯ ಸ್ವಾಮಿ
Share220Tweet123Send
Previous Post

ಸ್ವಚ್ಛ ಸರ್ವೇಕ್ಷಣ ಅವಾರ್ಡ್ 2020 ಘೋಷಣೆ: ಮೈಸೂರು ದೇಶದ 5ನೆಯ ಸ್ವಚ್ಛ ನಗರ

Next Post

ಕೊರೋನಾ ಆತಂಕದ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಭದ್ರಾವತಿಯಲ್ಲಿ ಭರ್ಜರಿ ವ್ಯಾಪಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೊರೋನಾ ಆತಂಕದ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಭದ್ರಾವತಿಯಲ್ಲಿ ಭರ್ಜರಿ ವ್ಯಾಪಾರ

ಕೊರೋನಾ ಆತಂಕದ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಭದ್ರಾವತಿಯಲ್ಲಿ ಭರ್ಜರಿ ವ್ಯಾಪಾರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಮೈಸೂರು ಸ್ಯಾಂಡಲ್ ಸೋಪಿಗೆ ಇಂದಿನಿಂದ ನಟಿ ತಮನ್ನಾ ಭಾಟಿಯಾ ರಾಯಭಾರಿ

ಮೈಸೂರು ಸ್ಯಾಂಡಲ್ ಸೋಪಿಗೆ ಇಂದಿನಿಂದ ನಟಿ ತಮನ್ನಾ ಭಾಟಿಯಾ ರಾಯಭಾರಿ

February 10, 2026
ಮಲೆನಾಡಿನಲ್ಲಿ ತೀರಾ ಕೆಳಭಾಗದಲ್ಲಿ ಲಘು ವಿಮಾನ ಹಾರಾಟ | ಸ್ಥಳೀಯರಲ್ಲಿ ಆತಂಕ

ಮಲೆನಾಡಿನಲ್ಲಿ ತೀರಾ ಕೆಳಭಾಗದಲ್ಲಿ ಲಘು ವಿಮಾನ ಹಾರಾಟ | ಸ್ಥಳೀಯರಲ್ಲಿ ಆತಂಕ

February 10, 2026
ಮಸ್ಕತ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ | ಉಡುಪಿಯ ಯುವಕ ಸಾವು

ಮಸ್ಕತ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ | ಉಡುಪಿಯ ಯುವಕ ಸಾವು

February 10, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಫೆ.11, 12ರಂದು ಶಿವಮೊಗ್ಗ ಗ್ರಾಮಾಂತರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

February 10, 2026
ಶಿವಮೊಗ್ಗ | ಮೂರು ಅಪರಾಧ ಪ್ರಕರಣ ಸುದ್ದಿ ಒಂದೇ ಕ್ಲಿಕ್’ನಲ್ಲಿ

ಮೂವರು ಅಂತರ್‌ರಾಜ್ಯ ಸರಗಳ್ಳರ ಬಂಧನ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

February 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL