ಕಲ್ಪ ಮೀಡಿಯಾ ಹೌಸ್
ಕುಂದಾಪುರ: ಸದಾ ಕಾರ್ಯ ನಿರ್ವಹಿಸುವ ಮೆಸ್ಕಾಂ ಸಿಬ್ಬಂದಿಗಳೊಂದಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸಭೆ ನಡೆಸಿದರು.
ತಾಲೂಕು ಪಂಚಾಯತ್ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ, ಮಳೆಗಾಲದಲ್ಲಿ ಮೆಸ್ಕಾಂ ಸಿಬ್ಬಂದಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಬಗ್ಗೆ ಮಾಹಿತಿ ಪಡೆಯಲಾಯಿತು. ಹಾಗೂ ಕೊರೋನ, ಲಾಕ್ಡೌನ್ ನಡುವೆಯೂ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.

ಆಕ್ಸಿಮೀಟರ್ ಹಸ್ತಾಂತರ:
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮೂಲಕ 15 ಲಕ್ಷ ರೂ.ಗಳ ಸುಮಾರು 1032 ಆಕ್ಸಿಮೀಟರ್ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಮುಖ್ಯವಾಗಿ ಕೊರೋನ ಸೋಂಕಿತರಾಗಿ ಹೋಮ್ ಐಸೋಲೇಷನ್ನಲ್ಲಿರುವವರ ಉಸಿರಾಟವನ್ನು ಚೆಕ್ ಮಾಡಲು ಇದನ್ನು ಆಶಾ ಕಾರ್ಯಕರ್ತರು ಉಪಯೋಗಿಸುತ್ತಿದ್ದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಇದನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post