No Result
View All Result
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Wednesday, March 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಲೋಕದ ತಂದೆ-ತಾಯಿ ‘ಸೀತಾರಾಮ’ರ ನಿಜದರ್ಶನ ಪಠಣ ಬದುಕಿನ ಭಾಗವಾಗಲಿ: ಶ್ರೀವಿದ್ಯೇಶ ರಾಮ ಅಕ್ಷರ ಮಹಾಪ್ರಸಾದವಿದು

ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠೆ | ಪ್ರತಿ ರಾಮಭಕ್ತರೂ ಓದಲೇಬೇಕಾದ ಅದ್ಬುತ ಲೇಖನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 21, 2024
in Special Articles
0
ಲೋಕದ ತಂದೆ-ತಾಯಿ ‘ಸೀತಾರಾಮ’ರ ನಿಜದರ್ಶನ ಪಠಣ ಬದುಕಿನ ಭಾಗವಾಗಲಿ: ಶ್ರೀವಿದ್ಯೇಶ ರಾಮ ಅಕ್ಷರ ಮಹಾಪ್ರಸಾದವಿದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಪರಮ ಪೂಜ್ಯ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ  |

ಭಾರತೀಯ ಸನಾತನ ಶಾಸ್ತ್ರ ಪರಂಪರೆಯ ಬಗ್ಗೆ ಆಳವಾದ, ಅಪಾರವಾದ ಜ್ಞಾನದ ಪಾಂಡಿತ್ಯವನ್ನೇ ಹೊಂದಿರುವ ಶ್ರೀಭಂಡಾರಕೇರಿ ಮಠದ ಪೂಜ್ಯ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರು ಪ್ರಖರ ವಾಗ್ಮಿಗಳು, ಅದ್ವಿತೀಯ ವಿದ್ವಾಂಸರೂ ಹಾಗೂ ವಾಕ್ಪಟುತ್ವ ಹೊಂದಿರುವ ಯತಿವರೇಣ್ಯರೂ ಹೌದು. ಅಂತಹ ಯತಿವರೇಣ್ಯರು ಗೀತರಚನಾರಾರರೂ ಆಗಿ ವಿದ್ಯೇಶ ವಿಠಲಾಂಕಿತ ಎಂಬ ಅಂಕಿತದಲ್ಲಿ ಈವರೆಗೆ ಸುಮಾರು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು. ಅದರಲ್ಲೂ ರಾಮ ಬಗ್ಗೆ ಅವರ ವಿಶೇಷವಾದ ಕೃತಿಗಳು, ಸಂಗೀತ ಮತ್ತು ಸಾಹಿತ್ಯಾಸಕ್ತರ ಪಂಡಿತ ವಲಯದ ಮೇರು ವ್ಯಕ್ತಿಗಳ ಗಮನ ಸೆಳೆದಿರುವ ಮಹನೀಯರು ಎಂಬುದು ವಿಶೇಷ. ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಅವರು ತಮ್ಮ ಆಶ್ರಮವನ್ನು ಹೊಂದಿದ್ದು, ಪ್ರತಿನಿತ್ಯವೂ ಸಹ ಸಾವಿರಾರು ಭಕ್ತರಿಗೆ ಉಪನ್ಯಾಸ, ಸಂಗೀತ, ವಿಚಾರಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರು ನಮ್ಮ ಸನಾತನ ಹಿಂದೂ ಪರಂಪರೆಗೆ ಅನನ್ಯವಾದ ಕೊಡುಗೆಗಳನ್ನು ಕೊಟ್ಟು ಅನುಗ್ರಹ ಮಾಡುತ್ತಿದ್ದಾರೆ. ಉಡುಪಿಯ ಭಂಡಾರಕೇರಿ ಮಠ ಎಂದರೆ ಅದು ಮದ್ವಾಚಾರ್ಯರಿಗೆ ಆಶ್ರಮ ಕೊಟ್ಟಂತಹ ಅಚ್ಯುತಾಪ್ರೇಕ್ಷಾಚಾರ್ಯರ ಪರಂಪರೆಯ ಸನಾತನವಾದ ಮಠ. ಇಂತಹ ವಿಶೇಷ ಹಾಗೂ ಪ್ರತಿಷ್ಠಿತವಾದ ಸಂಸ್ಥಾನದ ಪೀಠಕ್ಕೆ ವಿರಾಜಮಾನರಾಗಿರುವ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರು ವಿದ್ಯೆಯ ಮೇರು ಪರ್ವತವೇ ಆಗಿದ್ದಾರೆ. ಇಂತಹ ಪೂಜ್ಯಮಾನ್ಯ ಯತಿವರೇಣ್ಯರು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗಾಗಿ ಒಂದು ವಿಶೇಷ ಲೇಖನವನ್ನು ಅನುಗ್ರಹರೂಪಿಯಾಗಿ ಪ್ರದಾನ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮಹಾರಾಜರ ಪ್ರತಿಮೆ ಪ್ರಾಣಪ್ರತಿಷ್ಠೆಯಾಗುತ್ತಿರುವ ಈ ಶುಭಗಳಿಗೆಯಲ್ಲಿ ಇಡಿಯ ವಿಶ್ವವೇ ನಮ್ಮ ಭಾರತದೆಡೆಗೆ ನೋಡುತ್ತಿದೆ. ಭೂಮಿಯಿರುವಷ್ಟೂ ಕಾಲ ಐತಿಹಾಸಿಕ ದಾಖಲೆಯಾಗುವ ಈ ಕಾಲಘಟ್ಟದಲ್ಲಿ ಜನಿಸಿರುವ ಪ್ರತಿಯೊಬ್ಬರೂ ಪುಣ್ಯವಂತರೇ. ಹೀಗಿದ್ದಾಗ, ಈ ಐತಿಹಾಸಿಕ ಪ್ರಾಣಪ್ರತಿಷ್ಠೆ ವೇಳೆ ಯಾವುದೇ ರೀತಿಯಲ್ಲಿ ನಾವು ಯಾವುದೇ ರೀತಿಯಲ್ಲಿ ಸೇವೆ ಮಾಡಿದರೂ ಅದು ರಾಮನಿಗೆ ಪ್ರೀತಿಯಾಗುತ್ತದೆ. ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಬರೆದಂತಹ ವಿಶೇಷ ಲೇಖನವನ್ನು ನಮ್ಮ ಭಕ್ತ ಕೋಟಿಗೆ ಕೊಡುವ ಸಂಭ್ರಮದಲ್ಲಿ ಕಲ್ಪ ನ್ಯೂಸ್ ತೇಲುತ್ತಿದೆ. ಈ ವಿಶೇಷ ಲೇಖನವನ್ನು ನೀವು ಓದಿ, ನಿಮ್ಮವರಿಗೂ ಶೇರ್ ಮಾಡಿ…ಶ್ರೀರಾಮಮಂತ್ರ ದರ್ಶನ
ನಿತ್ಯ ವಿಷ್ಣುಸಹಸ್ರನಾಮಾವಳಿಯನ್ನು #Vishnusahasranama ಪಠಿಸಿಯೇ ಭೋಜನ ಮಾಡುವ ಪದ್ಧತಿಯನ್ನು ಅನುಸರಿಸುವ ಪಾರ್ವತೀದೇವಿಯು, ಒಮ್ಮೆ ದ್ವಾದಶಿಯಂದು ರುದ್ರದೇವನು ಪಾರಣೆಗೆ (ವ್ರತಾಂಗ ಭೋಜನಕ್ಕೆ) ಕರೆದಾಗ, ವಿಷ್ಣುಸಹಸ್ರನಾಮ ಪಠಣವಾಗಿಲ್ಲವೆಂದು ಹೇಳಿದಳು. ಆಗ ರುದ್ರದೇವನು ರಾಮನನ್ನು ಭಕ್ತಿಯಿಂದ ಸ್ಮರಿಸಿ, ಮೂರು ಬಾರಿ ರಾಮನಾಮವನ್ನು ಪಠಿಸಿದರೆ, ವಿಷ್ಣುಸಹಸ್ರನಾಮಪಠಣದ ಫಲ ಪ್ರಾಪ್ತಿಯಾಗುವುದೆಂದು ಸೂಚಿಸುತ್ತಾ “ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ || ಸಹಸ್ರನಾಮತತ್ತುಲ್ಯಂ ರಾಮನಾಮವರಾನನೇ ||” ಎಂಬ ಶ್ಲೋಕವನ್ನು ಪಠಿಸಿದನು. ಸಾಧ್ವಿಯಾದ ಪಾರ್ವತೀ ರಾಮನಾಮವನ್ನು ಜಪಿಸಿ, ಹರನೊಂದಿಗೆ ಪಾರಣೆಯಲ್ಲಿ ಪ್ರವೃತ್ತಳಾದಳು. ಹರನು ಆಕೆಗೆ, ರಾಮನಾಮಾಷ್ಟೋತ್ತರ ಶತನಾಮಗಳನ್ನೂ ಉಪದೇಶಿಸಿದನು. ಇದಲ್ಲದೇ, ಎಲ್ಲರ ಬಾಯಲ್ಲಿ ಇಂದಿಗೂ ನಲಿದಾಡುವ ಪ್ರಸಿದ್ಧವಾದ ಮಂತ್ರತುಲ್ಯ ಪದ್ಯವನ್ನೂ ಉಪದೇಶಿಸಿದನು. ಪದ್ಮಪುರಾಣದಲ್ಲಿ #PadmaPurana ಈ ಶ್ಲೋಕದ ಉಲ್ಲೇಖವಿದೆ.

|| ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ || ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||

ಈ ಶ್ಲೋಕರೂಪದ ಮಂತ್ರದಲ್ಲಿ ಸೀತಾರಾಮರ ದರ್ಶನವನ್ನು ಮಾಡೋಣ.

ರಾಮ – ಬಾಲಕಾಂಡ
ಜ್ಞಾನಾನಂದಸ್ವರೂಪ, ಲೋಕಕ್ಕೆ ತನ್ನ ಮಾತು, ನಡತೆ, ಸೌಂದರ್ಯ, ಶೀಲಗುಣ ಸಂಪತ್ತಿನಿಂದ ಮುದ ನೀಡುವವನು. ಅದಕ್ಕೆಂದೇ ಲೋಕಾಭಿರಾಮ, ಗುಣಾಭಿರಾಮನೆಂದು ಪ್ರಖ್ಯಾತಿ ಪಡೆದವನು. ನೂರು ಅಪಕಾರಗಳನ್ನು ಕಡೆಗಣಿಸಿ, ಮಾಡಿದ ಒಂದು ಉಪಕಾರವನ್ನು ಸ್ಮರಿಸಿ, ಪ್ರತಿಕ್ರಯಿಸುವ ಮಹಾಕೃತಜ್ಞನು‌ ಅದಕ್ಕೆಂದೇ ಲೋಕರಂಜಕನು. “ರ + ಅಮ = ರಾಮ” – ಆನಂದರೂಪನು, ಪರಿಮಾಣಾತೀತ ಗುಣದಿಂದ ಸಂಪನ್ನನು, ಎಂದು ಶಾಂಡಿಲ್ಯ ಶಾಖೆಯು ರಾಮನಾಮವನ್ನು ವ್ಯಾಖ್ಯಾನಿಸಿದೆ. ಬೇರೆ ಬೇರೆ ಆಯಾಮಗಳಲ್ಲಿ ರಾಮಶಬ್ದವು ತೆರೆದುಕೊಳ್ಳುತ್ತದೆ. “ರಾ” ಶಬ್ದವು ಲಕ್ಷ್ಮೀಸ್ವರೂಪಳಾದ ಸೀತೆಯನ್ನು ಹೇಳುತ್ತದೆ. “ಅಮಾ” ಶಬ್ದವು ಸಾಮಿಪ್ಯವನ್ನು ಹೇಳುತ್ತದೆ. ಯಾರಿಗೆ ಲಕ್ಷ್ಮೀಸ್ವರೂಪಳಾದ ಸೀತೆಯು ಸಮೀಪಳಾದಳೋ, ಆ ರಾಘವನೇ (ರಾ + ಅಮಾ ಯಸ್ಯ ಸಃ = ರಾಮಃ) ರಾಮನೆಂದು ಕೀರ್ತಿತನಾಗಿದ್ದಾನೆ.
ಜನಕನು ಪಡೆದ ಶಿವಧನುಸ್ಸಿನ ಹೆದೆಯನ್ನು ಸೀತಾಸ್ವಯಂವರದಲ್ಲಿ ರಾವಣನು ಏರಿಸಲು ಪ್ರಯತ್ನಿಸಿ, ವಿಫಲನಾದನು. ಬೆವರಿನಿಂದ ತೊಯ್ದನು. ಮೂರ್ಛಿತನಾಗಿ ಬಿದ್ದನು. ಅಂತಹ ಶಿವಧನುಸ್ಸನ್ನು ಲೀಲೆಯಿಂದಲೇ, ಎಡಗೈಯಿಂದ ಎತ್ತಿ, ಹೆದೆ ಏರಿಸುವ ಭರದಲ್ಲಿ ರಾಮನು ತುಂಡೇ ಮಾಡಿದನು. ಆಗ ಸೀತೆ ರಾಮನಿಗೆ ಸಮೀಪಳಾಗಿ ವಿಜಯಮಾಲೆಯನ್ನು ಸಮರ್ಪಿಸಿದಳು. ತನ್ನಂತೆಯೇ ಗುರುಸೇವೆಗೈದರೆ ಸಾಧಕನು, ಶಿವನ ನಿಯಂತ್ರಣದಲ್ಲಿರುವ ಮನೋರೂಪ ಕಠಿಣ ಧನುಸ್ಸನ್ನು ಮುರಿದು (ಅಹಂಕಾರರೂಪ ಮನೋಧನುಸ್ಸನ್ನು ನಿಗ್ರಹಿಸಿ) ಮೋಕ್ಷಲಕ್ಷ್ಮಿಯನ್ನು ಒಲಿಸಿಕೊಳ್ಳಬಲ್ಲನು ಎಂಬ ಆಧ್ಯಾತ್ಮ ಅರ್ಥವನ್ನು ಶ್ರೀರಾಮನು ತೋರಿದ್ದಾನೆ. ವಿವಾಹ ಮಾಡಿಕೊಂಡು ಮಾರ್ಗದಲ್ಲಿ ಬರುವಾಗ, ಯುದ್ಧಕ್ಕಾಗಿ ಆಹ್ವಾನಿಸಿದ, ಪರಶುರಾಮನ ಒಳಗಿರುವ ಅತುಲ ಎಂಬ ಲೋಕಕಂಟಕ ರಾಕ್ಷಸನನ್ನು ಸಂಹರಿಸಿದನು ಶ್ರೀರಾಮ. ತಾಟಕೆ, ಸುಬಾಹು, ಮಾರೀಚಾದಿಗಳು, ಖರದೂಷಣಾದಿ ಹದಿನಾಲ್ಕು ಸಾವಿರ ರಾಕ್ಷಸರ ಗಣ ಮತ್ತು ಅಂತಿಮವಾಗಿ ಲಂಕೆಯಲ್ಲಿ ನಡೆದ ಯುದ್ಧಯಜ್ಞದಲ್ಲಿ ಆರು ಸಹಸ್ರ ಅಕ್ಷೋಹಿಣಿ ಸೈನ್ಯ, ಮೂವತ್ತು ಮಹೌಘ ಸೈನ್ಯಗಳ ಮಾರಣಹೋಮವನ್ನೇ ಏಕಾಕಿಯಾಗಿ ಮಾಡಿದ ರಾಘವನು, ಮಾರಣಾತ್ ರಾಮಃ (ಬೃಹತ್ ದುಷ್ಟಸಂಹಾರದಿಂದ ರಾಮ ಎನಿಸಿದ್ದಾನೆ.) ವಿಶ್ವಾಮಿತ್ರಾದಿ ಯೋಗಿಗಳು ಯಜ್ಞಾದಿ ರಕ್ಷಣೆಯಿಂದ ಸಂತುಷ್ಟರಾಗಿ, ರಘುವೀರನಲ್ಲಿ ಮಾನಸಿಕ ರಮಣ ಮಾಡಿ, ಕೃತಾರ್ಥರಾದರು‌ ಅದಕ್ಕೆಂದೇ ಆತ ತನ್ನ ರಾಮನಾಮವನ್ನು ಅನ್ವರ್ಥಗೊಳಿಸಿದನು.

ಸುಂದರಿಯರ ಮನವನ್ನು ಸೂರೆಗೊಳ್ಳುವ ಸೌಂದರ್ಯದಿಂದ ರಾಮ ಎನಿಸಿದನು. ಪೂರ್ಣಾನಂದ-ಪೂರ್ಣಜ್ಞಾನ ಸ್ವರೂಪವುಳ್ಳವನಾಗಿ, ರಾಮ ಎನಿಸಿದ ರಾಘವನಿಗೆ, ಸೀತೆ ಎಲ್ಲಿದ್ದಾಳೆಂದು ಮಾಹಿತಿಯಿದೆ. ಆಕೆ ಕೈಲಾಸದಲ್ಲಿ ಶಿವ-ಪಾರ್ವತಿಯರಿಂದ ಪೂಜಿತಳಾಗಿದ್ದಳೆಂದು ತಿಳಿದೂ ಕೂಡ, ಅಜ್ಞಾನಿಯಂತೆ ತೋರುತ್ತಾ, ಸೀತಾನ್ವೇಷಣ, ಆಕೆಯ ವಿರಹದುಃಖದ ನಟನೆಯನ್ನು ಮಾತ್ರ ಮಾಡಿದನು‌. ರಾವಣನು ಸೀತಾಪ್ರತಿಕೃತಿಯನ್ನು ಅಪಹರಿಸಿದಾಗ, ದುರ್ಜನರನ್ನು ಮೋಹಗೊಳಿಸುವ ಉದ್ದೇಶ ರಾಮನಿಗಿತ್ತು. ಸೀತೆಯನ್ನು ವಿವಾಹವಾದ ಬಳಿಕ 12 ವರ್ಷಗಳ ಪರ್ಯಂತ ಅಯೋಧ್ಯೆಯಲ್ಲಿ ಲಕ್ಷ್ಮೀಸ್ವರೂಪಳಾದ, ಆಕೆಯ ರಮಣಕ್ರೀಡೆಗೆ ಪಾತ್ರನಾಗಿದ್ದನು. ಆದುದರಿಂದ ಆತ ರಾಮನೆಂದು ಕೀರ್ತಿತನಾಗಿದ್ದಾನೆ. “ರಮಾಯಾ ರಮಣಸ್ಥಾನಂ ತೇನ ರಾಮಂ ವಿದುರ್ಬುಧಾಃ” ಎಂಬ ಬ್ರಹ್ಮವೈವರ್ತಪುರಾಣವು ಈ ಅರ್ಥವನ್ನು ಪ್ರತಿಪಾದಿಸಿದೆ. ಒಟ್ಟಿನಲ್ಲಿ ರಾಮನಾಮವನ್ನು ವಿಶ್ಲೇಷಿಸಿದಾಗ, ಬಾಲಕಾಂಡದ ಅರ್ಥವು ಇಲ್ಲಿ ಅಡಗಿದೆಯೆಂದು ಹೇಳಬಹುದು.
ರಾಮಭದ್ರ – ಅಯೋಧ್ಯಾಕಾಂಡ
ವೃದ್ಧನಾದ ದಶರಥನು ಜ್ಯೇಷ್ಠಪುತ್ರ ರಾಮನಿಗೆ ಪಟ್ಟಾಭಿಷೇಕದ ಪ್ರಸ್ತಾವವನ್ನು ಸಾಮಂತರಾಜ-ಪೌರ-ಮಂತ್ರಿ-ಪುರೋಹಿತರಿಂದ ತುಂಬಿದ ಸಭೆಯಲ್ಲಿ ಮಾಡಿದಾಗ ಎಲ್ಲರೂ ಏಕಕಂಠದಿಂದ ರಾಮನು ನಿನ್ನಿಂದ ಪಟ್ಟಾಭಿಷಿಕ್ತನಾಗಿ ಗಜವಾಹನನಾಗಿ ಶೋಭಯಾತ್ರೆಯಲ್ಲಿ ಹೋಗುವುದನ್ನು ನಾವು ಶೀಘ್ರವಾಗಿ ನೋಡಲು ಬಯಸುತ್ತೇವೆ. ಆತ ರಾಜನಾದರೆ, ಭ್ರಾತೃ ಭಾವದಿಂದ ನಮ್ಮನ್ನು ಚೆನ್ನಾಗಿ ಪಾಲನೆ ಮಾಡುತ್ತಾ, ನಿನಗಿಂತಲೂ ಅಧಿಕವಾಗಿ ನಮಗೆ ಹಿತವನ್ನು ಮಾಡುತ್ತಾನೆಂದು, ನಿವೇದಿಸಿಕೊಂಡು ಶುಭ ಹಾರೈಸಿದರು. ರಾಮಗುಣಾಭಿರಾಮನೆಂದು ಸಾರಿ, ಅವರೆಲ್ಲರೂ ರಾಮ ನಮಗೆ ಭದ್ರ – ನಿನಗಿಂತಲೂ ಹೆಚ್ಚು ಕಲ್ಯಾಣ(ಶುಭ) ಪ್ರದನೆಂದು ಸಾರಿದರು. ಅವನ ಪಟ್ಟಾಭಿಷೇಕಕ್ಕಾಗಿ ಹರಕೆ ಹೊತ್ತು, ದೇವತಾಪ್ರಾರ್ಥನೆಯನ್ನು ಮಾಡಿದರು. ಇದು ಅಯೋಧ್ಯಾಕಾಂಡದ ಅರ್ಥ. ರಾಮಭದ್ರ ಎಂಬ ಶಬ್ದದಲ್ಲಿ ಇದು ಅಡಗಿದೆ.
ತನ್ನ ಪಟ್ಟಾಭಿಷೇಕಕ್ಕೆ ಮಂಥರೆಯಿಂದ ಪ್ರಚೋದಿತಳಾಗಿ ಕೈಕೇಯಿ, ವಿಘ್ನ ಮಾಡಿದರೂ ಆಕೆಯಲ್ಲಿ ಗುಣಶೀಲನಾದ, ಭರತನ ಮಾತೃತ್ವವನ್ನು ಕಂಡು ಗೌರವಿಸಿದನು. ಆಕೆಯನ್ನು ಲಕ್ಷ್ಮಣನು ನಿಂದಿಸಿದಾಗಲೂ, ಅದನ್ನು ಸಹಿಸದೇ ತಡೆದನು. ಕೊನೆಗೆ ಆಕೆಗೆ ಪರಮಭದ್ರ (ಪರಮಮಂಗಳವಾದ) ಮೋಕ್ಷವನ್ನೇ #Moksha ಪ್ರದಾನ ಮಾಡಿದನು. ದೂರದಲ್ಲಿ ಕುಳಿತು ಭರತನು ಕುತಂತ್ರದಿಂದ ಮಾತೃ ಮುಖದಿಂದ ತನ್ನ ಸಿಂಹಾಸನ್ನು ಕಸಿದುಕೊಂಡನು ಎಂಬ ಕೆಟ್ಟ ಭಾವನೆಗೆ ಒಳಗಾಗದೇ, ಶ್ರೀರಾಮನು ಆತನ ಶುದ್ಧ ಸ್ನೇಹಮಯ ಮನಸ್ಸನ್ನು ಗುರುತಿಸಿ, ಪ್ರೀತಿಯಿಂದ ಆಲಂಗಿಸಿಕೊಂಡು ಭರತನನ್ನು ಸಮಾಧಾನ ಪಡಿಸಿದನು. ತನ್ನ ಪರಮಮಂಗಳವಾದ ಪಾದುಕೆಗಳನ್ನು ನೀಡಿ, ಮನಶ್ಶಾಂತಿಯಿಂದ ರಾಜ್ಯಪರಿಪಾಲನೆ ಮಾಡಲು ಅವಕಾಶವನ್ನು ಕಲ್ಪಿಸಿದನು. ಆತನ ತಾಯಿಯನ್ನು ಗೌರವಿಸಿ, ಮೋಕ್ಷಪ್ರದಾನ ಮಾಡುವ ಮುಖದಿಂದ ಆತನಲ್ಲಿ ಪರಮಮಂಗಳ ಪ್ರೀತಿಯನ್ನೂ ತೋರಿದನು. ಹೀಗೆ ಸ್ವಭಾವದಿಂದಲೂ, ದೇಹದಿಂದಲೂ ಸುಂದರಳಾಗಿ “ರಾಮಾ” ಎನಿಸಿದ ಕೈಕೇಯಿಗೆ ಹಾಗು ಕಾಮನ ಅವತಾರಸ್ವರೂಪನಾಗಿ ದೈಹಿಕ ಸಂದರನಾಗಿ, ಮಾನಸಿಕ ಸುಂದರನಾಗಿ, “ರಾಮ” ಎನಿಸಿದ ಭರತನಿಗೂ “ಭದ್ರ” ಶುಭಪ್ರದನಾದುದರಿಂದ ರಾಮಭದ್ರನೆಂದು ಕೀರ್ತಿತನಾಗಿದ್ದಾನೆ. ಹೀಗೆ ನಿರೂಪಿತವಾದ ಅಯೋಧ್ಯಾಕಾಂಡದ ಅರ್ಥಗಳನ್ನೆಲ್ಲಾ, ರಾಮಭದ್ರಶಬ್ದದಲ್ಲಿ ನೋಡಬಹುದು.

ರಾಮಚಂದ್ರ – ಅರಣ್ಯಕಾಂಡ
ದಂಡಕಾರಣ್ಯವನ್ನು ಪ್ರವೇಶಿಸಿ, ಖರದೂಷಣಾದಿ ರಾಕ್ಷಸರಿಂದ ಪೀಡಿತರಾಗಿ, ಉದ್ವಿಗ್ನರಾದ ಋಷಿಗಳ ಸಮುದಾಯಕ್ಕೆ ಅಭಯವಚನಪ್ರದಾನಗೈದು, ರಾಕ್ಷಸರ ಸಂಹಾರದ ಪ್ರತಿಜ್ಞೆಯನ್ನು ಗೈದು, ಅದನ್ನು ಏಕಾಕಿಯಾಗಿ ಮಾಡಿದನು ಶ್ರೀರಾಮ.
ಮುನಿಗಳ ಭಯವನ್ನು ದೂರ ಮಾಡಿ, ಅವರಿಗೆ ಆಹ್ಲಾದ (ಸಂತೋಷ) ವನ್ನು ಪ್ರದಾನ ಮಾಡಿದನು. ಹೀಗೆ ದುಷ್ಟಮಾರಕನಾಗಿ “ರಾಮ” ಎನಿಸಿ, ಶಿಷ್ಟ ಋಷಿಗಳಿಗೆ ಆಹ್ಲಾದಪ್ರದನಾಗಿ “ಚಂದ್ರ” ಎನಿಸಿದನು. ಚದಿ-ಆಹ್ಲಾದೇ ಎಂಬ ಕ್ರಿಯಾಪದ ಮೂಲವಾದ ಶಬ್ದವು ಈ ಅರ್ಥವನ್ನು ನೀಡುತ್ತದೆ. ಇದು ಅರಣ್ಯಕಾಂಡದ ಅರ್ಥ.

ವೇಧಸ್ ಶಬ್ದ – ಸುಂದರಕಾಂಡ & ಯುದ್ಧಕಾಂಡ & ಕಿಷ್ಕಿಂಧಾಕಾಂಡ
“ವಿಧತ್ತೇ ಇತಿ = ವೇಧಾಃ” – ವೇಧಸ್ ಶಬ್ದವು ವಿಶಿಷ್ಟ ಕರ್ತೃತ್ವ ಶಕ್ತಿಸಂಪನ್ನನು ಎಂಬ ಅರ್ಥವನ್ನು ನೀಡುತ್ತದೆ. ರಾಮಚಂದ್ರನು #LordRama ನಾನಾಕಪಿಗಳಿಂದ ಕಲ್ಲುಬಂಡೆ, ಪರ್ವತ ಶಿಖರಾದಿಗಳನ್ನು ತರಿಸಿಕೊಂಡು, ಪುಷ್ಯಮಾಸದ ಶುಕ್ಲಪಕ್ಷದ ದಶಮಿಯಂದು ಸೇತುನಿರ್ಮಾಣಕಾರ್ಯವನ್ನು ಕಪಿಗಳಿಂದ ಪ್ರಾರಂಭ ಮಾಡಿಸಿ, ತ್ರಯೋದಶಿಯಂದು ಸೇತುನಿರ್ಮಾಣಕಾರ್ಯವನ್ನು ಕಪಿಗಳಿಂದ ಪೂರ್ಣಮಾಡಿಸಿಕೊಂಡನು ಎಂದು ಸ್ಕಂಧಪುರಾಣವು ಉಲ್ಲೇಖಿಸಿದೆ. ಶತಯೋಜನ ಉದ್ದದ ಸೇತುನಿರ್ಮಾಣದ ಕಾರ್ಯವನ್ನು ನಾಲ್ಕೇ ದಿನಗಳಲ್ಲಿ ಪೂರೈಸಿದ ರಾಮನ ಕರ್ತೃತ್ವಶಕ್ತಿ ಅನುಪಮವೆಂದು ಈ ಪುರಾಣವು ಸೂಚಿಸಿದೆ. ಇದು ಯುದ್ಧಕಾಂಡದ ಅರ್ಥ. ಇದು “ವೇಧಸ್” ಶಬ್ದದಲ್ಲಿ ಅಡಗಿದೆ. ಇದಲ್ಲದೇ ಆಂಜನೇಯನೂ ಕೂಡ ರಾವಣನ ಸಭೆಯಲ್ಲಿ ರಾಮನು ಚರಾಚರ ಪ್ರಪಂಚವನ್ನು ಸಂಹಾರಗೈದು, ಪುನಃ ಅದನ್ನು ನಿರ್ಮಾಣ ಮಾಡಬಲ್ಲನು. ಅವನನ್ನು ವಿರೋಧಿಸಿದರೆ, ನಿನ್ನನ್ನು ಬ್ರಹ್ಮರುದ್ರಾದಿಗಳೂ ರಕ್ಷಿಸಲಾರರು ಎಂದು ಎಚ್ಚರಿಸುತ್ತಾನೆ. ಇದು ಸುಂದರಕಾಂಡದಲ್ಲಿ ಪ್ರಸ್ತುತವಾದ ರಾಮನ ಕರ್ತೃತ್ವಶಕ್ತಿ. ಇದನ್ನು ವೇಧಸ್ ಶಬ್ದವು ಸಾರುತ್ತಿದೆ. ಇದಲ್ಲದೇ ಆತನ ದಾಸನಾದ ಆಂಜನೇಯನ ಮುಖದಿಂದ ಲಂಕೆಯಲ್ಲಿ, ಲಂಕಾದಹನ, ವನಭಂಜನ, ಅಕ್ಷಸಂಹಾರ, ಕೋಟಿ-ಕೋಟಿ ಕಿಂಕರರಾಕ್ಷಸರ ಸಂಹಾರ. ರಾವಣನಿಗೆ #Ravana ಮಾಡಿದ ಧೂತ್ಕಾರ ಮೊದಲಾದ ಕಾರ್ಯಗಳನ್ನು ಮಾಡಿಸುವ ಮೂಲಕ ತನ್ನ ಕರ್ತೃತ್ವಶಕ್ತಿಯನ್ನು ಪ್ರಕಟಪಡಿಸಿದ್ದಾನೆ. ಇದು ವೇಧಸ್ ಶಬ್ದದಲ್ಲಿ ಅಡಗಿದೆ. ಆದುದರಿಂದ ವೇಧಸ್ ಶಬ್ದವು ಸುಂದರಕಾಂಡದ ಅರ್ಥವನ್ನು ಪ್ರತಿಪಾದಿಸುತ್ತದೆ.
ವೇಧಸ್ ಶಬ್ದದಲ್ಲಿ “ಕಿಷ್ಕಿಂಧಾಕಾಂಡದ” ಅರ್ಥವೂ ಸೇರಿದೆ. ರಾಮಚಂದ್ರನು ಆಂಜನೇಯನನ್ನು ದಾಸನನ್ನಾಗಿ, ಸುಗ್ರೀವನನ್ನು ಸಖನನ್ನಾಗಿ, ಸ್ವೀಕರಿಸಿದನು. ಏಕಬಾಣಪ್ರಯೋಗದಿಂದಲೇ, ಅಸುರಸ್ವರೂಪ ಏಳು ತಾಳವೃಕ್ಷಗಳನ್ನು ಭೇದಿಸಿ, ಪರ್ವತವನ್ನೂ ಭೇದಿಸಿ, ಭೂಮಿಯನ್ನೂ ಭೇದಿಸಿ, ಪಾತಾಳದಲ್ಲಿರುವ “ಕುಮುದಿ” ದೈತ್ಯಗಣವನ್ನೂ ಛೇದಿಸಿದನು. ಉದಾಸೀನನಾದ ಸುಗ್ರೀವನಿಗೆ ಲಕ್ಷ್ಮಣನ ಮೂಲಕ ಮಾತಿನಿಂದಲೇ ಬೆದರಿಸಿ, ಅದ್ಭುತವಾದ ಕಪಿಸಮಾವೇಶಕ್ಕೆ ಪ್ರೇರಣೆ ನೀಡಿ, ಕೋಟಿ-ಕೋಟಿ ಕಪಿಗಣಗಳನ್ನು ಸಂಪಾದಿಸಿದನು. ಮರೆಯಲ್ಲಿ ನಿಂತು ವಾಲಿಯನ್ನು ನಿಗ್ರಹಿಸಿದನು.
ಸುಗ್ರೀವನಿಗೆ ತನ್ನ ಬಲದ ಬಗೆಗೆ ವಿಶ್ವಾಸ ಹುಟ್ಟಿಸಲು, ದುಂದುಭಿಕಾಯವನ್ನೂ, ದೂರಕ್ಕೆ ಎಸೆದನು. ಸುಗ್ರೀವನಿಗೆ ರಾಜ್ಯವನ್ನು ನೀಡಿ ತನ್ನ ಕಾರ್ಯಕ್ಕೆ ಚುರುಕಾಗಿ ಚಾಲನೆ ನೀಡಿದನು. ಇಂತಹ ರಾಮನ ಕರ್ತೃತ್ವಶಕ್ತಿಯನ್ನು ಸಾರುವ ವೇಧಸ್ ಶಬ್ದವು ಕಿಷ್ಕಿಂಧಾ ಕಾಂಡದ ಅರ್ಥವೂ ಹೌದು.

ರಘುನಾಥ
ರಘುನಾಥ ಶಬ್ದವು #Raghuvamsha ರಘುವಂಶದಲ್ಲಿ ಶ್ರೇಷ್ಠನಾದ ದಶರಥರಾಜನಿಂದ ಆಶೀರ್ವಾದ ಮಾಡಿಸಿಕೊಂಡವನು ಎಂಬ ಅರ್ಥವನ್ನು ಸೂಚಿಸುತ್ತದೆ. ರಘುವಂಶದಲ್ಲಿ ಬಂದ ಎಲ್ಲಾ ರಾಜರನ್ನೂ ರಘುವಂಶಕಾವ್ಯದಲ್ಲಿ ರಘು ಎಂಬ ಪದದಿಂದಲೇ ಉಲ್ಲೇಖಿಸಲಾಗಿದೆ. ಹೀಗಾಗಿ ರಘುಶಬ್ದದಿಂದ ದಶರಥರಾಜನೂ ಉಲ್ಲೇಖಾರ್ಹನು. ನಾಥ ಶಬ್ದವು ಆಶೀರ್ವಾದಕರ್ತಾ ಎಂಬ ಅರ್ಥವನ್ನು ನೀಡುತ್ತದೆ. ನಾಥೃ ಎಂಬ ಕ್ರಿಯಾಪದಕ್ಕೆ ಆಶೀರ್ವಾದ ಎಂಬ ಅರ್ಥವು ಇದೆ ತಾನೆ.? ತಂದೆಯಾದ ದಶರಥರಾಜನು ತನ್ನ ನೆಚ್ಚಿನ ಮಗನಾದ ರಾಮಚಂದ್ರನಿಗೆ ಆಶೀರ್ವಾದ ಮಾಡಿದ್ದನ್ನು ವಾಯುಪುರಾಣವು ಉಲ್ಲೇಖಿಸಿದೆ. “ರಾಮ ನೀನು ಚಿರಕಾಲ ರಾಜ್ಯಭಾರ ಮಾಡುವಿ, ಅಯೋಧ್ಯಾ ಜನರು ಹಾಗು ತೃಣ-ಕೀಟಾದಿ ಜೀವರಾಶಿಯೊಂದಿಗೆ ವಿಷ್ಣುಲೋಕವನ್ನು ಹೊಂದುವಿ” ಎಂದು ಆಶೀರ್ವದಿಸಿದನೆಂದು ಅದು ಉಲ್ಲೇಖ ಮಾಡಿದೆ. ಇದು ರಾಮನ ಪಿತೃಭಕ್ತಿಗೆ ದ್ಯೋತಕವಾದ ಪದ ಎನ್ನಬಹುದು. ರಾಮನಿಗೆ ತಂದೆಯ ಆಶೀರ್ವಾದದಿಂದ ಏನೂ ಆಗಬೇಕಾಗಿಲ್ಲ. ಈ ಆಶೀರ್ವಾದವು ಲೋಕಶಿಕ್ಷಕನಾಗಿ ಅವನು ತೋರಿದ ಪಿತೃಭಕ್ತಿಗೆ ದ್ಯೋತಕವೆನ್ನಬಹುದು. ರಘುನಾಥಶಬ್ದವು ಇನ್ನೊಂದು ಆಯಾಮದಲ್ಲಿಯೂ ತೆರೆದುಕೊಳ್ಳುತ್ತದೆ‌. “ರಘವಃ ನಾಥಾಃ ಯಸ್ಮಾತ್ ಸಃ = ರಘುನಾಥಃ” – ಎಂಬ ವಿವರಣೆಯನ್ನು ಸ್ವೀಕರಿಸಿದಾಗ, ಇನ್ನೊಂದು ಅರ್ಥವು ಲಭ್ಯವಾಗುತ್ತದೆ. ಕುಲದೀಪಕನಾದ ತನ್ನ ಅವತಾರದಿಂದ, ಪವಿತ್ರ ಕೀರ್ತಿಯಿಂದ ಪಾವನವಾದ ವಂಶದಲ್ಲಿ ಜನ್ಮ ತಾಳಿ, ಎಲ್ಲಾ ರಘುಕುಲದಲ್ಲಿ ಬಂದ ರಾಜರೂ ರಾಜನಾಗಿ ಮೆರೆಯಲು ರಾಮಚಂದ್ರನ ಅನುಗ್ರಹವೇ ಕಾರಣ ಎಂಬ ಅಭಿಪ್ರಾಯವನ್ನೂ ಈ ಪದವು ಸೂಚಿಸುತ್ತದೆ. ಅರ್ಥಾತ್, ತನ್ನ ಕೀರ್ತಿಯಿಂದ ಪಾವನವಾದ ಕುಲದಲ್ಲಿ ರಾಜನಾಗಿ ಮೆರೆಯಲು, ಶ್ರೀರಾಮಚಂದ್ರ ಕಾರಣ ಅದಕ್ಕೆಂದೇ ಆತ ರಘುನಾಥ ಎನಿಸಿದ್ದಾನೆ.

ನಾಥ – ಯುದ್ಧಕಾಂಡ
ನಾಥ ಶಬ್ದವು ಉಪಕ್ಷಯ (ಅಲ್ಪವಿನಾಶ) ಕರ್ತಾ ಎಂಬ ಅರ್ಥವನ್ನು ನೀಡುತ್ತದೆ. ವಾಸ್ತವಿಕವಾಗಿ ರಾಮನು ಮಾಡಿದ ರಾವಣಸೈನ್ಯದ ಕ್ಷಯ. ಅರ್ಥಾತ್ ವಿನಾಶ ಅಲ್ಪವಲ್ಲ. ಅದು ಮಹತ್ತರವಾದುದು, ಆದರೂ ರಾಮನ ಅಪರಿಮೇಯ ಪರಾಕ್ರಮದ ಎದುರು ಆತನು ಮಾಡಿದ ಈ ರಾಕ್ಷಸರ ಸಂಹಾರ ಆತನಿಗೆ ನಗಣ್ಯ. ಕ್ಷುಲ್ಲಕ. ಅದನ್ನು ಅನಾಯಾಸದಿಂದ ಮಾಡಿದ ರಘುವೀರನನ್ನು ನಾಥ ಶಬ್ದವು ಬಣ್ಣಿಸುವ ಮೂಲಕ ಯುದ್ಧಕಾಂಡದ ಅರ್ಥವನ್ನು ಸೂಚಿಸಿದೆ ಎನ್ನಬಹುದು.

ಸೀತಾಯಾಃ ಪತಿಃ – ಉತ್ತರಕಾಂಡ
ಈ ಶಬ್ದವು ಉತ್ತರಕಾಂಡದ #UttaraKanda ಅರ್ಥವನ್ನು ಹೇಳಿದೆ. ರಾಮನ ಆಳ್ವಿಕೆಯ ಕಾಲದಲ್ಲಿ, ಭೂಮಿಯ ಎಲ್ಲಾ ಭಾಗವು ಸಮೃದ್ಧ ಸಸ್ಯ ಸಂಪತ್ತಿನಿಂದ ಶ್ಯಾಮಲವಾಗಿತ್ತೆಂದು, ಪುರಾಣವು ಸಾರಿದೆ. ಇಂತಹ ಸಸ್ಯಾದಿ ಸಂಪತ್ತಿನ ಒಡೆಯ ಎಂಬ ಅರ್ಥವನ್ನು ಸೀತಾಪತಿ ಎಂಬ ಶಬ್ದವು ಸಾರುತ್ತಿದೆ. ಸಂಸ್ಕೃತದಲ್ಲಿ ಸೀತಾ ಶಬ್ದಕ್ಕೆ ಸಸ್ಯವೆಂದೂ ಅರ್ಥವಿದೆ ತಾನೇ. ಇದಲ್ಲದೇ ಸೀತಾ ಶಬ್ದಕ್ಕೆ ಪರಿಶುದ್ಧಳಾದ ಭೂದೇವಿ ಹಾಗು ನಿರ್ಮಲಳಾದ ಸೀತಾದೇವಿ ಎಂಬ ಅರ್ಥವನ್ನೂ ಸ್ವೀಕರಿಸಬಹುದು. ಸಂಸ್ಕೃತದಲ್ಲಿ ಸಿತ ಶಬ್ದವು ಶ್ವೇತ ಎಂಬ ಅರ್ಥವನ್ನು ಕೊಡುತ್ತದೆ. ಇಲ್ಲಿ ಸೀತಾ ಎಂಬಲ್ಲಿ ದೈರ್ಘ್ಯವು ಆಧಿಕ್ಯವನ್ನು ಸೂಚನೆ ಮಾಡುತ್ತದೆ. ಹೀಗಾಗಿ ಸೀತಾ ಎಂಬ ಶಬ್ದವು ಅಧಿಕಶ್ವೇತಳು ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿ ಅಧಿಕಶ್ವೇತಳೆಂದರೆ, ಅಧಿಕಶುದ್ಧಳು ಎಂಬ ಅರ್ಥದಲ್ಲಿ ಪರ್ಯವಸಾನಗೊಳ್ಳುತ್ತದೆ. ಹಾಗಾಗಿ ಸೀತಾ ಶಬ್ದಕ್ಕೆ ಪರಿಶುದ್ಧಳಾದ ಭೂದೇವಿ ಮತ್ತು ನಿರ್ಮಲಳಾದ ಸೀತಾದೇವಿ ಎಂಬ ಅರ್ಥವನ್ನೂ ಸ್ವೀಕರಿಸಬಹುದು. ಇವೆರಡು ದೇವಿಯರಿಗೆ ಪತಿಯಾಗಿ ರಾಮ ಸೀತಾಪತಿ ಎನಿಸಿದ್ದಾನೆ.
ಭೂದೇವಿ ರಾಮನ ಆಳ್ವಿಕೆಯ ಕಾಲದಲ್ಲಿ ಜನರ ರೋಗ-ರುಜಿನ-ದಾರಿದ್ರ್ಯ- ವೈಧವ್ಯ ದುಃಖ – ವೈಧುರ್ಯ ದುಃಖ -ಕಲಹ-ಅಪಮೃತ್ಯು-ಅಕಾಲ ಮರಣ-ದುರ್ಭಿಕ್ಷೆ-ಅತಿವೃಷ್ಟಿ-ಅನಾವೃಷ್ಟಿ ಮುಂತಾದ ಸಕಲ ದೋಷಗಳಿಗೆ ನೆಲೆಯಾಗದೇ ಶುದ್ಧಳಾಗಿದ್ದಳು. ಜಾನಕಿಯೂ ಕೂಡ ಲೋಕಾಪವಾದ ಭಯದಿಂದ, ರಾಮನು ತನ್ನನ್ನು ವಾಲ್ಮೀಕಿ ಆಶ್ರಮದಲ್ಲಿ ಬಿಟ್ಟರೂ, ರಾಮನ ಬಗೆಗೆ ವೈಮನಸ್ಯವನ್ನು ಹೊಂದದೇ, ಪ್ರೇಮಜಲದಿಂದ ಪರಿಶುದ್ಧ ಮನಸ್ಕಳಾಗಿ ಉಳಿದು, ಪತಿವ್ರತೆಯರ ಶಿಖರಸ್ಥಾನದಲ್ಲಿ ಮೆರೆದಳು. ರಾಮನೂ ಕೂಡ ಕೊನೆಯ ತನಕ ಪ್ರಿಯತಮೆ ಸೀತೆಯನ್ನು ಸ್ನೇಹಪಾಶದಿಂದ ಎದೆಯಲ್ಲಿ ದೃಢವಾಗಿ ಬಂಧಿಸಿಕೊಂಡಿದ್ದನು. ಹೀಗೆ ಸ್ನೇಹಪಾಶದಿಂದ ದೃಢವಾಗಿ ಬಂಧಿಸಲ್ಪಟ್ಟವಳಾಗಿ, ಜಾನಕಿಗೆ ಸೀತಾ ಎಂಬ ಹೆಸರು ಅನ್ವರ್ಥವಾಯಿತು. ಅಂತಹ ಸೀತೆಗೆ ಪತಿಯಾಗಿ, ರಾಮಚಂದ್ರನು ಮೆರೆದನು ಎನ್ನುವ ಉತ್ತರಕಾಂಡದ ಅರ್ಥವನ್ನು ಸೀತಾಪತಿ ಎಂಬ ಶಬ್ದವು ಬಣ್ಣಿಸಿದೆ. ಸೀತಾರಾಮರಲ್ಲಿ ಅನ್ಯೋನ್ಯ ವೈಮನಸ್ಯವಿಲ್ಲವೆಂದು ತೋರಲು ಸೀತಾದೇವಿಯು, ರಾಮನು ಪರಂಧಾಮಕ್ಕೆ ಹೋಗುವ ಸಂದರ್ಭದಲ್ಲಿ ಶ್ರೀ-ಹ್ರೀ ರೂಪವನ್ನು ತಾಳಿ ಎಲ್ಲರ ಕಣ್ಣಿಗೆ ಗೋಚರಳಾಗಿ ಇಕ್ಕೆಲಗಳಲ್ಲಿ ಚಾಮರಸೇವೆಯನ್ನು ಮಾಡಿದಳೆಂದು ಹಯಗ್ರೀವಕೃತ ಮೂಲರಾಮಾಯಣವು ಸಾರಿದೆ.

ಹೀಗಾಗಿ ಅಧ್ಯಾತ್ಮ ದೃಷ್ಟಿಯಿಂದ ಈ ದಂಪತಿಗಳಿಗೆ, ದೈಹಿಕವಿಯೋಗವಿಲ್ಲವೇ ಇಲ್ಲ. ಪಾಮರದೃಷ್ಟಿಯಲ್ಲಿ ದೈಹಿಕವಿಯೋಗ ಕಾಣಿಸಿಕೊಂಡರೂ, ಮಾನಸಿಕ ಸ್ನೇಹದ ವಿಯೋಗವಾಗಲೇ ಇಲ್ಲ‌ ಅದು ಅಜರಾಮರವಾಗಿಯೇ ಇತ್ತು. ಅದಕ್ಕೆಂದೇ ಸೀತಾರಾಮರು ಆದರ್ಶ ಸತಿಪತಿಗಳು. ಲೋಕದ ತಂದೆ ತಾಯಿಗಳಾದ ಈ ಸೀತಾರಾಮರ ನಿಜದರ್ಶನವನ್ನು ಈ ಮಂತ್ರತುಲ್ಯದ ಪದ್ಯದಲ್ಲಿ, ನಿತ್ಯವೂ ಮಾಡುತ್ತಾ, ಅದನ್ನು ಪಠಿಸಿ, ಅವರಿಗೆ ನಮಿಸಿ ಕೃತಾರ್ಥರಾಗೋಣ. ಅಯೋಧ್ಯಾಧಾಮನಾದ ಬಾಲರಾಮಚಂದ್ರನು ತನ್ನ ಸುಂದರ ಕೀರ್ತಿರೂಪ ಚಂದ್ರನ ಬೆಳದಿಂಗಳನ್ನು ನಮ್ಮೆಲ್ಲರ ಮನಸ್ಸೆಂಬ ನೈದಿಲೆಯ ಮೇಲೆ ಬೀರಿ, ವಿಕಾಸಗೊಳಿಸಲೆಂದು ಹಾರೈಸೋಣ.

ಅಯೋಧ್ಯಾಯಾಂ ರಾಮಜ್ಯೋತಿರ್ದೀಪ್ತಂ ದೃಷ್ಟ್ವಾ ಶುಭಾವಹಂ || ಕೃತ್ವಾ ರಾಷ್ಟ್ರಂ ನಂದಿಘೋಷಂ ಜಯತಾತ್ ಸುಪಥಾ ಸದಾ ||

ರಾಮಚಂದ್ರ ಕೀ ಜೈ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Aranya KandaAyodhya KandaBala KandaKannada News WebsiteLatest News KannadaSkanda PuranaSri Vidyeshathirtha SwamijiSundara KandaYuddha Kandaಅಯೋಧ್ಯಾ ಕಾಂಡಅಯೋಧ್ಯೆಅರಣ್ಯಕಾಂಡಉತ್ತರಕಾಂಡಕಿಷ್ಕಿಂಧಾ ಕಾಂಡಪದ್ಮಪುರಾಣಯುದ್ಧ ಕಾಂಡರಾಮನಾಮರಾಮಮಂದಿರವಿಷ್ಣು ಸಹಸ್ರನಾಮಾವಳಿಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಶ್ರೀರಾಮಶ್ರೀರಾಮಮಂತ್ರಸುಂದರಕಾಂಡಸ್ಕಂಧ ಪುರಾಣ
Share196Tweet123Send
Previous Post

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ

Next Post

ಬಾಹ್ಯಾಕಾಶದಿಂದ ರಾಮಮಂದಿರ ಹೇಗೆ ಕಾಣುತ್ತೆ? ಇಸ್ರೋ ಬಿಡುಗಡೆ ಮಾಡಿದ ಫೋಟೋ ನೋಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಬ್ಬಬ್ಬಾ! ಅಯೋಧ್ಯೆ ರಾಮಮಂದಿರ ಇಷ್ಟು ವರ್ಷ ಅಲುಗಾಡುವುದಿಲ್ಲ:  ಭೂಕಂಪವಾದರೂ, ಇಷ್ಟು ತೀವ್ರತೆವರೆಗೂ ಡೋನ್ಟ್‌ಕೇರ್

ಬಾಹ್ಯಾಕಾಶದಿಂದ ರಾಮಮಂದಿರ ಹೇಗೆ ಕಾಣುತ್ತೆ? ಇಸ್ರೋ ಬಿಡುಗಡೆ ಮಾಡಿದ ಫೋಟೋ ನೋಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

March 3, 2026
ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

March 3, 2026
‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

March 3, 2026
ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

March 3, 2026
ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

March 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL