ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಕಾಂಗ್ರೆಸ್ ಪಕ್ಷದ ನಾಯಕರ ಹಿಂದೂ ವಿರೋಧಿ ಮನಃಸ್ಥಿತಿ ಹಾಗೂ ತುಷ್ಟೀಕರಣ ಅತಿರೇಕಕ್ಕೆ ಹೋಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ #CaptainBrijeshChowta ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, #Udupi ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಾಡಿಸಿದ್ದಾರೆ. ಆದರೆ, ಇದನ್ನೂ ಸಹ ವಿರೋಧಿಸಿರುವುದನ್ನು ಗಮನಿಸಿದಾಗ ಕಾಂಗ್ರೆಸ್ ಪಕ್ಷದವರ ಹಿಂದೂ #Hindu ವಿರೋಧಿ ಮಾನಸಿಕತೆ ಹಾಗೂ ತುಷ್ಟೀಕರಣ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಷ್ಟೀಕರಣ ರಾಜಕಾರಣದ ಕಾಂಗ್ರೆಸ್ #Congress ಪಕ್ಷಕ್ಕೆ ಕೇಸರಿ ಕಂಡರೆ ಆಗುವುದಿಲ್ಲ. ಮತೀಯ ಶಕ್ತಿಗಳನ್ನು ಓಲೈಸಲು ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಹಾಗೂ ಹಿಂದೂ ಸಮಾಜವನ್ನು ಪದೇ ಪದೇ ಗುರಿ ಮಾಡುತ್ತಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುವ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಬುದ್ಧಿ ಕಾಂಗ್ರೆಸ್’ಗೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು.
ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಕೃತ್ಯ ಎಸಗಿದವರ ವಿರುದ್ಧವಾಗಲೀ, ಹಲವು ಕಡೆ ಪಾಕಿಸ್ಥಾನದ ಧ್ವಜ ಹಾರಾಡಿಸಿದವರ ವಿರುದ್ಧವಾಗಲೀ ಈ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಗ, ಈ ಕಾಂಗ್ರೆಸ್’ನವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಆದರೆ, ಈಗ ಉಡುಪಿ ಪರ್ಯಾಯದಲ್ಲಿ #UdupiParyaya ಸಂಪ್ರದಾಯದಂತೆ ಭಗವಾಧ್ವಜ ಹಿಡಿದ ತಕ್ಷಣ ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರ ಮನಸ್ಥಿತಿ ಏನು ಮತ್ತು ಹಿಂದೂಗಳ ಪಾವಿತ್ರತೆ, ಗೌರವದ ಸಂಕೇತವಾದ ಭಗವಾಧ್ವಜದ ಬಗ್ಗೆ ಎಷ್ಟು ದ್ವೇಷವಿದೆಎನ್ನುವುದು ರಾಜ್ಯದ ಜನರಿಗೆ ಅರಿವಾಗಿದೆ ಎಂದಿದ್ದಾರೆ.
ಭಗವಧ್ವಜ ಶೌರ್ಯ, ಜ್ಞಾನ, ತ್ಯಾಗದ ಪ್ರತೀಕ, ಸೇವೆ, ಸಂಸ್ಕೃತಿ, ಭಕ್ತಿಯ ಧ್ಯೋತಕ. ದೇವಸ್ಥಾನ, ಧಾರ್ಮಿಕ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದು ನಮ್ಮ ಹಿಂದುಗಳ ಹಕ್ಕು ಎಂದರು.
ರಮಾನಾಥ್ ರೈ #RamanathRai ಅವರೇ, ಧರ್ಮೋಪದೇಶ ಮಾಡುವುದನ್ನು ನಮಗೆ ಬಿಡಿ. ಬಂಟ್ವಾಳದಲ್ಲಿ ಪಟ್ಟಣ ಪಂಚಾಯತ್ ಚುನಾವಣೆಗಳನ್ನು ಗೆಲ್ಲಲು #SDPI ಎಸ್’ಡಿಪಿಐನಂತಹ ಸಂಘಟನೆಗಳೊಂದಿಗೆ ಒಪ್ಪಂದಗಳನ್ನು ಕಡಿತಗೊಳಿಸುವ ವ್ಯಕ್ತಿಗೆ ಹಿಂದೂಗಳು ಏನು ಮಾಡಬೇಕೆಂದು ಅಥವಾ ಅವರ ಹಬ್ಬಗಳನ್ನು ಹೇಗೆ ನಡೆಸಬೇಕೆಂದು ಹೇಳುವ ಕೆಲಸವಿಲ್ಲ. ನಮ್ಮ ನಂಬಿಕೆಯನ್ನು ಹೇಗೆ ಬದುಕಬೇಕು ಅಥವಾ ನಮ್ಮ ಚಿಹ್ನೆಗಳನ್ನು ಹೇಗೆ ಗೌರವಿಸಬೇಕು ಎಂದು ನೀವು ನಮಗೆ ಹೇಳುವುದಿಲ್ಲವೇ? ಎಂದಿದ್ದಾರೆ.
ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ, ಕಳೆದ ಸರ್ಕಾರದಲ್ಲಿ, ಶಾಲೆಯ ಮಧ್ಯಾಹ್ನದ ಊಟವನ್ನು ಬೆಂಬಲಿಸುವುದರಿಂದ ದೇವಾಲಯದ ಹಣವನ್ನು ನಿಲ್ಲಿಸಲು ಬಯಸಿದವರಿಂದ ಒಬ್ಬರು ಇನ್ನೇನು ನಿರೀಕ್ಷಿಸಬಹುದು. ದಯವಿಟ್ಟು ನಿಮ್ಮ ತಿರುಚಿದ ಜ್ಞಾನವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಹಿಂದೂಗಳು ನಮ್ಮ ಧ್ವಜ ಅಥವಾ ಧರ್ಮ – ಎರಡೂ ಕಾಲಾತೀತ – ನಿಮ್ಮಂತಹವರಿಂದ ಕೇಳಬೇಕಾಗಿಲ್ಲ ಎಂದಿದ್ದಾರೆ.
ತಾವೇನು ತಪ್ಪು ಮಾಡಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ಆ ಬಳಿಕವೂ ಅದಕ್ಕೆ ಮತೀಯ ಬಣ್ಣ ಹಚ್ಚಿ ಸಮಾಜವನ್ನು ಒಡೆಯುವ ಕಾಂಗ್ರೆಸ್ ಪಕ್ಷದ ಅತ್ಯಂತ ಕೀಳುಮಟ್ಟದ ಓಲೈಕೆ ರಾಜಕಾರಣಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















