ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದಾಗಿ ಶ್ರೀಮಠದಲ್ಲಿ ಭಕ್ತರಿಗೆ ರಾಯರ ದರ್ಶನ ಹಾಗೂ ಪ್ರಸಾದಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಮಂತ್ರಾಲಯ ಮಠದ ಆಡಳಿತ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದ್ದು, ಮಂತ್ರಾಲಯದಲ್ಲಿ ಯಾವುದೇ ನೈಸರ್ಗಿಕ ಸಮಸ್ಯೆಯಿಲ್ಲ, ಎಂದಿನAತೆ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಯಾವ ನೈಸರ್ಗಿಕ ಸಮಸ್ಯೆ ಹಾಗೂ ಸಂಕಟ ಇಲ್ಲ ಎಂದು ತಿಳಿಸಿದ್ದಾರೆ.
ನದಿಗೆ ನೀರು ಬಿಟ್ಟಿದ್ದು, ನದಿ ಪಾತ್ರಕ್ಕೆ ಸೀಮಿತವಾಗಿ ಹರಿಯುತ್ತಿವೆ. ಇದರಿಂದ ಮಠಕ್ಕಾಗಲಿ, ಭಕ್ತರಿಗಾಗಲಿ, ಗ್ರಾಮಕ್ಕಾಗಲಿ ಅಪಾಯವಿಲ್ಲ. ಮಠದಲ್ಲಿ ದರ್ಶನ ಪ್ರಸಾದ ವಿತರಣೆ, ಇತರೇ ವಸತಿ ಸಂಕಷ್ಟಗಳಿಲ್ಲ. ಭಕ್ತರು ಯಾವುದೇ ಭಯ, ಆತಂಕವಿಲ್ಲದೆ ಮಂತ್ರಾಲಯಕ್ಕೆ Mantralaya ಬರಬಹುದು ಎಂದು ತಿಳಿಸಿದ್ದಾರೆ.
Also read: ಪ್ರಧಾನಿ ಮೋದಿ ಹತ್ಯೆಗೆ ಮತ್ತೆ ಸಂಚು: ಇಬ್ಬರು ಶಂಕಿತ ಭಯೋತ್ಪಾದಕರ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post