ಶಹಜಹಾನ್ಪುರ: ನಿನ್ನೆಯಷ್ಟೆ ಸಂಸತ್ನಲ್ಲಿ ವಾದ-ವಿವಾದಗಳು ಏರ್ಪಟ್ಟ ಬೆನ್ನಲ್ಲೇ ಇಂದು ಮತ್ತೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ಗೆ ಪ್ರಧಾನಿ ಕುರ್ಚಿ ಬಿಟ್ಟು ಬೇರೇನು ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ನಮ್ಮ ಸರ್ಕಾರ ಜನರ ವಿಶ್ವಾಸ ಗಳಿಸಿದೆ. ಹೀಗಾಗಿ, ನಾವು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲೇ ಇದ್ದೇವೆ ಎಂದರು.
ಅವರು ನಮ್ಮ ಬಗ್ಗೆ ನಂಬಿಕೆಯಿಲ್ಲ ಎಂದು ಕಾರಣಗಳನ್ನು ಕೇಳಿದರು. ಆದರೆ, ಅವರು ಅವಿಶ್ವಾಸ ನಿರ್ಣಯದಲ್ಲಿ ಅವರು ಸೋತಾಗ ಬಂದು ಅಪ್ಪಿಕೊಂಡರು ಎಂದು ಲೇವಡಿ ಮಾಡಿದರು.
ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ನಾನು ಮಾಡಿರುವ ಅಪರಾಧ ಹಾಗೂ ನಾನು ಸರಿಯಾದ ಮಾರ್ಗದಲ್ಲಿ ಹೋಗುತ್ತಿರುವುದೇ ಅವರ ದೃಷ್ಠಿಯಲ್ಲಿ ತಪ್ಪು ಎಂದು ಕಿಡಿ ಕಾರಿದರು.
ನೀವು ನೋಡಿ, ರಾಹುಲ್ ಗಾಂಧಿ ಪ್ರಧಾನಿ ಕುರ್ಚಿಯ ಕಡೆಗೆ ಓಡುತ್ತಲೇ ಇದ್ದಾರೆ. ಆದರೆ, ಅವರು ಯಾವುದೇ ರೀತಿಯ ಕೆಲಸ ಮಾಡದೇ ಪ್ರಧಾನಿ ಕುರ್ಚಿಯ ಕಡೆಗೆ ಓಡುತ್ತಿದ್ದಾರೆ ಎಂದರು.
Discussion about this post