ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭೋಪಾಲ್: ಅಯೋಧ್ಯೆ ರಾಮ ಜನ್ಮ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೋಟ್ಯಂತರ ಭಾರತೀಯರನ್ನು ಸಂಭ್ರಮದಲ್ಲಿ ತೇಲಿಸಿರುವಂತೆಯೇ, ಮಧ್ಯಪ್ರದೇಶದ ಅಜ್ಜಿಯೊಬ್ಬರು ರಾಮನಿಗಾಗಿ ತಾವು ಕೈಗೊಂಡಿದ್ದ 27 ವರ್ಷದ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ಹೌದು… ಜಬಲ್ಪುರ್ ಜಿಲ್ಲೆಯ ಸಂಸ್ಕೃತ ಶಿಕ್ಷಕಿ ಊರ್ಮಿಳಾ ಚತುರ್ವೇದಿ(81) ಅಪ್ಪಟ ರಾಮನ ಭಕ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕಾರಣದಿಂದ 1992ರಿಂದ ನಿನ್ನೆಯವರೆಗೂ ಉಪವಾಸ ವ್ರತ ಕೈಗೊಂಡ ಇವರು ಕೇವಲ ಹಾಲು ಹಾಗೂ ಹಣ್ಣುಗಳನ್ನು ಮಾತ್ರ ತಿಂದು ಕಾಲ ಕಳೆದಿದ್ದಾರೆ. ಈಗ ತೀರ್ಪು ರಾಮಮಂದಿರದ ಪರ ಬಂದ ಹಿನ್ನೆಲೆಯಲ್ಲಿ ವ್ರತವನ್ನು ಸಂಪನ್ನಗೊಳಿಸಿರುವ ಇವರು ಅನ್ನಹಾರ ಸೇವನೆ ಆರಂಭಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಬಗೆಹರಿಯಲೇಬೇಕು ಎಂದು ಸಂಕಲ್ಪ ಮಾಡಿದ್ದ ಊರ್ಮಿಳಾ ಅವರು ತಮ್ಮ 54ನೇ(1992) ವಯಸ್ಸಿನಲ್ಲಿ ಕೇವಲ ಹಣ್ಣು ಮತ್ತು ಹಾಲು ಕುಡಿಯುವ ಮೂಲಕ ಉಪವಾಸ ಆರಂಭಿಸಿದ್ದರು.
ಈ ಕುರಿತಂತೆ ಮಾತನಾಡಿರುವ ಅವರ ಪುತ್ರ ಅಮಿತ್ ಅವರು, ಅಯೋಧ್ಯಾ ವಿವಾದ ಬಗೆಹರಿಯುವವರೆಗೂ ಉಪವಾಸ ವ್ರತ ಮಾಡುವುದಾಗಿ ನನ್ನ ತಾಯಿ ಸಂಕಲ್ಪ ಮಾಡಿದ್ದರು. ಈಗ ನನ್ನ ತಾಯಿಯವರಿಗೆ 81 ವರ್ಷ. ಅಲ್ಲದೇ ತೀರ್ಪು ಈಗ ರಾಮಮಂದಿರದ ಪರವಾಗಿ ಬಂದಿರುವ ಹಿನ್ನೆಲೆಯಲ್ಲಿ ಅಪಾರ ಸಂತಸ ತರಿಸಿದೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post