ಕಲ್ಪ ಮೀಡಿಯಾ ಹೌಸ್ | ಮೂಡಿಗೆರೆ |
ಇಲ್ಲಿನ ಪುಚ್ಚೆಮೊಗೇರಿ ಪ್ರದೇಶದ ಗಣಪತಿ ಕಟ್ಟೆಯಲ್ಲಿ ಅನ್ಯಧರ್ಮದ ಹಸಿರು ಧ್ವಜವನ್ನು ಕಿಡಿಗೇಡಿಗಳು ಇರಿಸಿದ್ದು, ದಕ್ಷ ಪೊಲೀಸ್ ಅಧಿಕಾರಿಯ ಖಡಕ್ ಕಾರ್ಯಾಚರಣೆಯಿಂದ ಸಂಭವನೀಯ ಗಲಭೆ ತಪ್ಪಿದಂತಾಗಿದೆ.
ಇಲ್ಲಿನ ಗಣಪತಿ ಕಟ್ಟೆಯಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಶಾಂತಿ ಕದಡುವ ಉz್ದೆÃಶದಿಂದ ಕಿಡಿಗೇಡಿಗಳು ಅನ್ಯಧರ್ಮದ ಹಸಿರು ಧ್ವಜವನ್ನು ಇರಿಸಿದ್ದರು.

ಧ್ವಜವನ್ನು ಇರಿಸಿರುವ ವಿಚಾರವನ್ನು ಸಾರ್ವಜನಿಕರು ಪಿಡಿಒಗೆ ತಿಳಿಸಿದ್ದರು. ಆದರೆ, ಅದನ್ನು ನಿರ್ಲಕ್ಷಿಸಿದ ಪಿಡಿಒಗೆ ಅಧಿಕಾರಿ ಸಂದೇಶ್ ಅವರು ಸಾರ್ವಜನಿಕರ ಎದುರಿಗೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊನೆಯಲ್ಲಿ ಸಂದೇಶ್ ಅವರು ಹಸಿರು ಧ್ವಜವನ್ನು ತೆರವುಗೊಳಿಸಿ, ಸಂಭವನೀಯ ಗಲಭೆಯನ್ನು ತಪ್ಪಿಸಿದ್ದಾರೆ. ಸಂದೇಶ್ ಅವರ ಖಡಕ್ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.











Discussion about this post