ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಂದೇ ವಾಂಛಿತಲಾಭಾಯ್ಚಂದ್ರಾರ್ಧಕೃತಶೇಖರಾಮ್|
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿವಿನೀಮ್||
ಮೊದಲನೇ ದಿನ ಪಾಡ್ಯದಂದು ಶೈಲಪುತ್ರಿಯನ್ನು ಪೂಜಿಸುತ್ತೇವೆ. ಶೈಲಪುತ್ರಿ ಎಂದರೆ ಹಿಮವಂತ ರಾಜನ ಮಗಳು ಎಂದು ಪಾರ್ವತಿ ದೇವಿಯ ಅಂಶವಾಗಿದ್ದಾಳೆ. ಪತಿಯನ್ನು ಅವಮಾನ ಮಾಡಿದ ತಂದೆಯಾದ ದಕ್ಷ ಪ್ರಜಾಪತಿಯ ಹೋಮದಲ್ಲಿ ಸತಿದೇವಿಯು ಹೋಮಕುಂಡದಲ್ಲಿ ಜಗಿದು ಭಸ್ಮಳಾದ ನಂತರದಲ್ಲಿ ಹಿಮವಂತ ರಾಜನ ಕುಮಾರಿಯಾಗಿ, ಮೊದಲಿಗೆ ಶೈಲಪುತ್ರಿಯಾಗಿ ಜನಿಸಿ ಶಿವನ ಕುರಿತು ತಪಸ್ಸು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿ ಒಲಿದು ಬಂದ ಶಿವ ಅವಳನ್ನು ಪರೀಕ್ಷಿಸಿ ವಿವಾಹವಾಗುತ್ತಾನೆ.


ತುಪ್ಪವನ್ನು ಅರ್ಪಿಸಿ ಅವಳ ಪ್ರೀತಿಗೆ ಪಾತ್ರರಾಗಿ ಉತ್ತಮ ಅರೋಗ್ಯವನ್ನು ಬೇಡುತ್ತಾರೆ. ಯೋಗಿಗಳು ತಮ್ಮ ಮನದ ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಿ ಶೈಲಪುತ್ರಿಯ ಆರಾಧನೆಯನ್ನು ಮಾಡುತ್ತಾರೆ. ಇಲ್ಲಿಂದ ಅರಂಭವಾಗಿ ಅವರ ಯೋಗ ಸಾಧನೆಯು ಮುಂದುವರೆಸುತ್ತಾರೆ.
ಪರ್ವತ ರಾಜ ಹಿಮವಂತನ ಮಗಳಾದ್ದರಿಂದ ಅವಳು ಸ್ಥಿರತೆ ಮತ್ತು ಬಲಕ್ಕೆ ಪ್ರತೀಕಳಾಗಿದ್ದಾಳೆ, ತಾಳ್ಮೆಯ ಪ್ರತೀಕಳೂ ಆಗಿರುವಳು. ಎತ್ತರವಾದ ಉನ್ನತ ವ್ಯಕ್ತಿತ್ವದವಳು, ಶುಭ್ರ ಶುದ್ಧತೆಯ ಪ್ರತೀಕಳು, ಭಕ್ತರ ನಂಬಿಕೆಗೂ ಸ್ಥಿರವಾಗಿಟ್ಟುಕೊಂಡು ತಮ್ಮ ಸಾಧನೆಯ ಆರಂಭಕ್ಕೆ ಪ್ರೇರಣಾದಾಯಕಳು ಮತ್ತು ಆಧ್ಯಾತ್ಮ ಜೀವನದ ಮೂಲ ಪ್ರೇರಕಳೂ ಆಗಿರುತ್ತಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















Discussion about this post