ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಸಹ ತನ್ನ ಸಿದ್ದಾಂತವನ್ನು ಯಾರ ಮೇಲೂ ಹೇರುವುದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
‘ಭವಿಷ್ಯ ಕಾ ಭಾರತ್ ಕುರಿತಾದ ಆರ್ಎಸ್ಎಸ್ ಮೂರು ದಿನಗಳ ಸಮಾವೇಶದಲ್ಲಿ ದೇಶದ ಎಲ್ಲ ವಲಯಗಳ ಜನರನ್ನು ಉದ್ದೇಶಿಸಿ ಮೋಹನ್ ಭಾಗವತ್ ಮಾತನಾಡಿದ ಅವರು, ಆರ್ಎಸ್ಎಸ್ ಸಂಸ್ಥಾಪಕರಾದ ಡಾ. ಕೆ.ಬಿ. ಹೆಡ್ಗೇವಾರ್ ರವರ ಕೊಡುಗೆ ಮತ್ತು ಜೀವನ ಅಲ್ಲದೆ ಸಾಮಾಜಿಕ ಕಲ್ಯಾಣಕ್ಕಾಗಿ ಸಂಘ ಕಾರ್ಯಕರ್ತರನ್ನು ಹೊಗಳಿದರು. ಅಲ್ಲದೆ ಈ ಎಲ್ಲಾ ವರ್ಷಗಳಿಂದ ಆರ್ಎಸ್ಎಸ್ ತಪ್ಪಾಗಿ ಗ್ರಹಿಸಲ್ಪಟ್ಟಿದೆ ಎಂದರು.
Live Address of RSS SarSanghChalak PP Dr Mohan Bhagwat #RSSVision https://t.co/8oQxuk73RO
— RSS (@RSSorg) September 17, 2018
ಆರ್ಎಸ್ಎಸ್ ಒಂದು ಶಕ್ತಿಯಾಗಿ ಹೊರಹೊಮ್ಮಿದೆ ಅದು ಎಂದಿಗೂ ಕೂಡ ಪ್ರಚಾರವನ್ನು ಬಯಸುವುದಿಲ್ಲ ಮತ್ತು ದೇಶದಲ್ಲಿನ ಯಾವುದೇ ಸಂಘಟನೆಯೂ ಸಹಿತ ಇದರ ಗುಣಮಟ್ಟಕ್ಕೆ ಸರಿಸಮಾನವಾಗಲಾರದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ನ ಕೊಡುಗೆಯ ಕುರಿತಾಗಿ ಮಾತನಾಡುತ್ತಾ ಪಕ್ಷವು ದೇಶಕ್ಕೆ ಹಲವು ಶ್ರೇಷ್ಠ ವ್ಯಕ್ತಿಗಳಿಗೆ ನೀಡಿದೆ ಎಂದರು.
Discussion about this post