ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ವಿಶ್ವ ಪರಿಸರ ದಿನಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ, ಮೇಸೇಜ್ ಅಥವಾ ಸ್ಟೇಟಸ್ ಹಾಕಿದರೆ ಅಷ್ಟಕ್ಕೆ ಮುಗಿವುದಿಲ್ಲ. ಬದಲಿಗೆ ಖುದ್ದು ಪರಿಸರ ಸ್ವಚ್ಛಗೊಳಿಸುವುದೋ ಅಥವಾ ಸಸಿಗಳನ್ನು ನೆಡುವ ಕಾರ್ಯ ಮಾಡಿದರೆ ಪರಿಸರ ದಿನವನ್ನು ಆಚರಿಸಿದ ಸಾರ್ಥಕತೆ ಸಿಗುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಶ್ರೀನಾಥ್ ನಗರಗದ್ದೆ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೈವಿಕ ವಿಜ್ಞಾನ ಭವನದ ಸಂಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅವರು, ಪರಿಸರ ದಿನಾಚರಣೆ ದಿನ ಎರಡು ಗಿಡ ನೆಟ್ಟರೆ ಸಾಲದು, ಅದು ಕೇವಲ ಒಂದು ಭಾಗ ಅಷ್ಟೆ. ಆದರೆ ಪರಿಸರಕ್ಕೆ ಮಾರಕವಾಗುತ್ತಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸವುದನ್ನು ಕಡಿಮೆ ಮಾಡುತ್ತವೆ ಎಂದು ತೀರ್ಮಾನಿಸಬೇಕಿದೆ. ಮನೆಗಳಲ್ಲಿ, ಕಛೇರಿಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿಕೊಳ್ಳುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟ ಬಹುದಾಗಿದೆ. ಇವತ್ತು ಕಾಸ್ಮೊ ಹಾಗೂ ಮೆಟ್ರೊಪಾಲಿಟನ್ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ಮತ್ತು ಇ-ತ್ಯಾಜ್ಯ ವಸ್ತುಗಳ ಮರುಬಳಕೆಗೆ ಒತ್ತುಕೊಬೇಕಿದೆ. ಈ ಬಗ್ಗೆ ಗ್ರಾಮೀಣ ಭಾಗದ ಜನರು ಈಗಿನಿಂದಲೇ ಜಾಗೃತರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಯೋಗೆಂದ್ರ, ಶಂಕರ್ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಪರಿಸರ ದಿನದ ಪ್ರಯುಕ್ತ ವಿವಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿತೆ ನಡೆಯಿತು. ಇಲ್ಲಿ ಕಾರು ಕಂಪನಿಗಳಾದ ಮಾರುತಿ, ಹುಂಡೈ, ಟಾಟಾ, ಎಂಜಿ ಹಾಗೂ ದ್ವಿಚಕ್ರ ಕಂಪೆನಿ ಏಥರ್ ತಮ್ಮ ವಾಹನಗಳನ್ನು ಪ್ರದರ್ಶಿಸಿ, ಇವಿ ಬಳಕೆಯ ಅನುಕೂಲಗಳನ್ನು ತಿಳಿಸಿಕೊಟ್ಟವು.
ಚಿನ್ನದ ಪದಕ ಸ್ಥಾಪನೆ
ವಿವಿಯ ಪರಿಸರ ವಿಜ್ಞಾನ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗೆ ಬಂಗಾರದ ಪದಕ ನೀಡುವುದಾಗಿ ಹೊಯ್ಸಳ ಸೊಸೈಟಿಯ ಅಧ್ಯಕ್ಷ ಎಂ. ಶಂಕರ್ ತಿಳಿಸಿದ್ದಾರೆ. ಶೀಘ್ರ ಚಿನ್ನದ ಪದಕ ಸ್ಥಾಪನೆಗಾಗಿ ವಿವಿಗೆ ದೇಣಿಗೆ ನೀಡುವುದಾಗಿ ಅವರು ತಿಳಿಸಿದರು.










Discussion about this post