ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಬರಹವೇ ಬದುಕು, ಬದುಕೇ ಬರಹ. ಹೀಗಾದಾಗ ಮಾತ್ರ ಬರಹಕ್ಕೆ ಮಹತ್ವ ಬರುತ್ತದೆ ಎಂದು ಪತ್ರಕರ್ತ, ಕವಿ ರವಿಕುಮಾರ್ ಟೆಲೆಕ್ಸ್ ಅಭಿಪ್ರಾಯಪಟ್ಟರು.
ಕುವೆಂಫು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಇಂದು ನಗರ ಕಛೇರಿಯಲ್ಲಿ ಆಯೋಜಿಸಿದ್ದ ಬರವಣಿಗೆಯ ಕೌಶಲಗಳು ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಸಿವು, ಬಡತನ, ನೋವು ಬರವಣಿಗೆಯ ಮೂಲ ಧಾತುಗಳು. ಬದುಕಿನ ಅನುಭವಗಳು ಪ್ರಾಮಾಣಿಕವಾಗಿದ್ದು, ಬರಹ ರೂಪಕ್ಕೆ ಬಂದಾಗ ಅದು ಮತ್ತೊಬ್ಬರ ಅನುಭವವೂ ಆಗುವ ಶಕ್ತಿ ಹೊಂದುತ್ತದೆ. ಯುವ ತಲಮಾರಿನ ವಿದ್ಯಾರ್ಥಿಗಳು ಆಧುನಿಕ ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡು ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಆಶಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಕಾರ್ಯಾಗಾರದ ಆಯೋಜಕರಾಗಿ ಕುವೆಂಪು ವಿ.ವಿ. ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಮತ್ತು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜು ಕಾರ್ಯಕ್ರಮಾಧಿಕಾರಿ ಡಾ. ಪ್ರಕಾಶ್ ಮರ್ಗನಳ್ಳಿ ಕಾರ್ಯಕ್ರಮದ ಸಂಚಾಲಕರಾಗಿ ಭಾಗವಹಿಸಿದ್ದರು.
ಶಿವಮೊಗ್ಗ ಎಸ್ಆರ್ಎನ್ಎಂ ಕಾಲೇಜು ಗಗನಾ ಪ್ರಾರ್ಥಿಸಿದರು. ಕಾರ್ಯಾಗಾರವನ್ನು ಸಾಂಕೇತಿಕವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಸಂಪನ್ಮೂಲವ್ಯಕ್ತಿಗಳು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮೊದಲ ಗೊಷ್ಠಿಯಲ್ಲಿ ಮಾತನಾಡಿದ ಪತ್ರಕರ್ತ ಶಶಿ ಸಂಪಳ್ಳಿಯವರು, ವಿದ್ಯಾರ್ಥಿ ದೆಸೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಲೋಕವನ್ನು ಅರ್ಥಮಾಡಿಕೊಳ್ಳುವ ಯತ್ನ ಮಾಡಬೇಕು. ಬರವಣಿಗೆ ನಮ್ಮ ಅಂತರಂಗದ ಶೋಧನೆಗೆ ಸಹಾಯಕ ವಾಗುತ್ತದೆ. ಸೂಕ್ಷ್ಮ ಮನಸ್ಸಿನ ಯುವ ಬರಹಗಾರರು ಇಂದು ನಮ್ಮ ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಧ್ಯಾಹ್ನದ ಗೋಷ್ಠಿಯಲ್ಲಿ ಮಾತನಾಡಿದ ಪರಿಸರ ಬರಹಗಾರ ನಾಗರಾಜ ಕೂವೆ ಅವರು ಪರಿಸರ ಆಸಕ್ತಿಯ ಬರವಣಿಗೆಯನ್ನು ಹೇಗೆ ಮಾಡಬಹುದೆಂದು ವಿವರಿಸಿದರು. ಎನ್.ಎಸ್.ಎಸ್. ಸಂಬಂಧಿ ಬರವಣಿಗೆಯನ್ನು ಮಾಡುವ ಬಗೆಗಳನ್ನು ಡಾ. ಶುಭಾ ಮರವಂತೆ ತಿಳಿಸುತ್ತಾ, ಪ್ರತಿಯೊಬ್ಬರಲ್ಲೂ ಬರಹಗಾರ ಇರುತ್ತಾನೆ. ಅದನ್ನು ಗುರುತಿಸಿಕೊಳ್ಳುವ ಪ್ರಯತ್ನ ನಮ್ಮಿಂದಲೇ ಆಗಬೇಕು. ಬರವಣಿಗೆ ಮಾಡುತ್ತಾ ಹೋದಲ್ಲಿ ಮಾತ್ರ ಅದರ ಮೇಲೆ ಹಿಡಿತ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಡಾ. ಪ್ರಕಾಶ್ ಮರ್ಗನಳ್ಳಿ ಎಲ್ಲಾರನ್ನು ಸ್ವಾಗತಿಸಿ, ಕಾರ್ಯಾಗಾರ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ನವೀನ್, ಶಿವಮೊಗ್ಗ ಇವರನ್ನು ಕರೋನಾ ವಾರಿಯರ್ಸ್ ಪರವಾಗಿ ಸನ್ಮಾನಿಸಲಾಯಿತು.
8 ಜನ ಎನ್ಎಸ್ಎಸ್ ಸ್ವಯಂ ಸೇವಕ/ಸೇವಕಿಯರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.
ಮಾಲಾ ಕೆ. ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರೆ, ಶ್ರೀ ರಾಚಪ್ಪ ವಿ. ಕೆ. ವಂದನಾರ್ಪಣೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post