ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಅದು ಹೆಸರಿಗೆ ಸರ್ಕಾರಿ ಶಾಲೆ. ಆದರೆ, ಈಗ ಅತ್ಯಾಧುನಿಕ ಸ್ಪರ್ಶದೊಂದಿಗೆ ಯಾವುದೇ ಖಾಸಗೀ ಶಾಲೆಗೆ ಕಡಿಮೆಯಿಲ್ಲದಂತೆ ಬದಲಾಗಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.
ಹೌದು ಶಿಕಾರಿಪುರ #Shikaripura ಪಟ್ಟಣದ ಶಾಲೆ ಸರ್ಕಾರಿ #GovernmentSchool ಹಿರಿಯ ಹೆಣ್ಣು ಮಕ್ಕಳ ಶಾಲೆಗೆ(ಸಿದ್ಧಲಿಂಗೇಶ್ವರ) ಬಂತು ಸ್ಮಾರ್ಟ್ ಬೋರ್ಡ್, ಸಿಸಿಟಿವಿ, ವಿದ್ಯಾರ್ಥಿಗಳಿಗೆ ಲೋಟ ತಟ್ಟೆ, ಸ್ಮಾರ್ಟ್ ಟಿವಿ #SmartTV ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಅವಶ್ಯಕವಾಗಿರುವ ಪರಿಕರಗಳನ್ನು ಒದಗಿಸಿ ಸರ್ಕಾರಿ ಶಾಲೆಯೂ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.
ಗುರುವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಪೇಟೆ(ಸಿದ್ಧಲಿಂಗೇಶ್ವರ) ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟಗಳನ್ನು ವಿತರಿಸಿ ಮಕ್ಕಳೊಂದಿಗೆ ಊಟ ಎನ್ನುವ ಕಾರ್ಯಕ್ರಮ ನಡೆಸಲಾಯಿತು.
ಸರ್ಕಾರಿ ಶಾಲೆಗಳಲ್ಲಿ ಓದಿ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯ ಪಡೆದುಕೊಂಡರು. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುವ ಈ ಕಾಲದಲ್ಲಿ ಸರ್ಕಾರಿ ಶಾಲೆಯನ್ನು ಉನ್ನತಿಕರಣ ಮಾಡಬೇಕು ಎಂದು ಒಂದಿಷ್ಟು ಸಮಾನ ಮನಸ್ಕ ತಂಡ ಪಕ್ಷಾತೀತವಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸೇವಾ ಕೈಂಕರ್ಯದಲ್ಲಿ ಮುಂದಾಗಿದೆ.
ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ#MadhuBangarappa ರಾಜ್ಯದಾದ್ಯಂತ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎನ್ನುವ ಶೀರ್ಷಿಕೆ ಅಡಿಯಲ್ಲಿ ಕಲ್ಪನೆಯೊಂದನ್ನು ಆರಂಭಿಸಿದ್ದಾರೆ.
Also read: ಮಾಡುವ ಕೆಲಸದಲ್ಲಿ ವಿಭಿನ್ನತೆ ಇದ್ದರೆ ಜಯ ಸುಲಭ ಸಾಧ್ಯ: ವಿನಾಯಕ ನಾಯ್ಕ್ ಅಭಿಪ್ರಾಯ
ಪ್ರತಿಯೊಬ್ಬರು ತಾವು ಓದಿದ ಶಾಲೆಗಳಿಗೆ ತಮ್ಮ ಶಕ್ತಿ ಅನುಸಾರ ಆಗುವ ಸಹಕಾರ ನೀಡಿ, ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಾಗಿಸುವ ಪ್ರಯತ್ನ ಮಾಡಬೇಕು. ಸರ್ಕಾರಿ ಶಾಲೆ ದೇಣಿಗೆ ನೀಡಿ ಶಾಲೆಗಳ ಅಭಿವೃದ್ಧಿಗಾಗಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಅದಕ್ಕೂ ಮೊದಲೇ ಶಿಕಾರಿಪುರ 100 ಕ್ಕೂ ಹೆಚ್ಚು ಸದೃದಯಿ ದಾನಿಗಳು 2.27 ಲಕ್ಷ ರೂ. ನಿಧಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿಸಿ ಉತ್ತಮ ಶಿಕ್ಷಣ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಪುಣ್ಯ ಕಾರ್ಯದಲ್ಲಿ ಕೈಂಕರ್ಯದಲ್ಲಿ ಯುವಕರ ತಂಡ ತೊಡಗಿದೆ ಎಂದರು ತಪ್ಪಾಗಲಾರದು.ಒಂದು ತಟ್ಟೆ ಲೋಟ ಕೊಟ್ಟರೆ ದೊಡ್ಡದಾಗಿ ಹೆಸರು ಹಾಕಿಸಿಕೊಳ್ಳುವ ಈ ದಿನಗಳಲ್ಲಿ ಈ ದಾನಿಗಳ ತಂಡ ಎಲ್ಲಿಯೂ ಕೂಡ ತಮ್ಮ ಯಾರ ಹೆಸರು ಬಹಿರಂಗಪಡಿಸದೇ ತೆರೆ ಮರೆಯಲ್ಲಿ ತಮ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ.
ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ದಾನಿಗಳ ಸಹಕಾರದಿಂದ ಈಗಾಗಲೇ ಶಾಲೆಯಲ್ಲಿ ಎಲ್’ಕೆಜಿ #LKG ಮತ್ತು ಯುಕೆಜಿ #UKG ತರಗತಿಗಳನ್ನು ಸಹ ಆರಂಭಿಸಲಾಗಿದೆ.
ಈ ರೀತಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ಈ ತಂಡಕ್ಕೆ ಇನ್ನೂ ಹೆಚ್ಚಿನ ಸೇವಾ ಭಾಗ್ಯ ಮಾಡುವಂತಾಗಲಿ. ಈ ರೀತಿ ಇನ್ನೂ ಹೆಚ್ಚು ಜನರು ತಮ್ಮ ದುಡಿಮೆಯಲ್ಲಿ ಒಂದಿಷ್ಟು ಭಾಗ ಬಡ ಜನರ ಅದರಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ರೀತಿಯಲ್ಲಿ ಸೇವೆಗೆ ಮುಂದಾಗಬೇಕಿದೆ.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಶರತ್, ಎಸ್’ಡಿಎಂಸಿ ಅಧ್ಯಕ್ಷರು ಸಿ. ನಾಗರಾಜಪ್ಪ, ಎಸ್’ಡಿಎಂಸಿ ಗೌರವಾಧ್ಯಕ್ಷರಾದ ಇಮ್ರಾನ್, ಉಪಾಧ್ಯಕ್ಷೆ ಸಹನ, ಪತ್ರಕರ್ತರಾದ ಎ.ಓ. ಹೆಬ್ಬಾರ್, ಬಾಪೂಜಿ ಸಂಸ್ಥೆ ಸಂಸ್ಥಾಪಕರಾದ ಪಾಪಯ್ಯ, ಮುಖ್ಯ ಶಿಕ್ಷಕ ಎಂ.ಕೆ. ಜಬಿವುಲ್ಲಾ, ದಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post