ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡುವಾಗ ಏನು ಕೊಡಲಿದ್ದಾರೆ ಅದು ಮುಖ್ಯವಾಗುವುದಿಲ್ಲ. ಕೊಡುವವರ ಮನಸ್ಸು ಒಳ್ಳೆಯದಾಗಿರಬೇಕು. ಕೊಡುವ ಹಂಬಲವಿರಬೇಕು ಎಂದು ಜಿ.ಕೆ. ಹೆಬ್ಬಾರ್ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ ಜಿಸಿಸಿ ಶಿಕಾರಿಪುರ ಚಂದನ್ ಬ್ಯಾನರ್ ಅಡಿಯಲ್ಲಿ ಪ್ರಮೀಳಾ ಬಾಯಿ ಅವರು ಕೊರೋನಾ ಸಂದರ್ಭದಲ್ಲಿ ಸಂಬಳ ಇಲ್ಲದೆ ಸಂಕಷ್ಟದಲ್ಲಿರುವ ಅಥಿತಿ ಉಪನ್ಯಾಸಕರ ಪರಿಸ್ಥಿತಿ ಗಮನಿಸಿ, ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಥಿತಿ ಉಪನ್ಯಾಸಕರ ಪರಿಸ್ಥಿತಿ ಅವಲೋಕಿಸಿ ಪ್ರಮೀಳಾ ಬಾಯಿ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ಕೆಲಸ ಭಗವಂತ ಮೆಚ್ಚುವಂತಹದ್ದು, ಸರಸ್ವತಿ ಅರಾಧಕರನ್ನು ಗೌರವಿಸಿ ಸಹಾಯ ಮಾಡಿರುವುದು ಸ್ವಾಗತಾರ್ಹ. ಇದು ಬೇರೊಬ್ಬ ದಾನಿಗೆ ಪ್ರೇರೇಪಣೆಯಾಗಲಿದೆ ಎಂದು ಹೇಳಿದರು.
ಮೊದಲಿನಿಂದಲೂ ಜನಪರ ಕಾಳಜಿಯ ಈ ತಾಯಿ, ಇತ್ತೀಚೆಗೆ ಗ್ರಂಥಾಲಯದಲ್ಲಿ ಓದುಗರಿಗೆ ಕುಡಿಯುವ ನೀರಿನ ಯಂತ್ರವನ್ನು ನೀಡಿ ಕಲಿಯುಗದ ಭಾಗೀರತಿಯಾಗಿ ಹೊರಹೊಮ್ಮಿದ ಸುದ್ಧಿಯನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಓದುಗರ ಧಣಿವಾರಿಸಿದ ಈ ತಾಯಿಯ ಗಮನ ಈಗ ಸರಸ್ವತಿ ಪುತ್ರರಾದ, ಬೇರೆಯವರಿಗೆ ವಿದ್ಯಾದಾನ ಮಾಡುವ ಅಥಿತಿ ಉಪನ್ಯಾಸಕರ ಕಷ್ಟಕ್ಕೆ ಸ್ವಂದಿಸಿ ಆಹಾರ ಸಾಮಗ್ರಿಗಳ ಕಿಟ್ ನೀಡಿ ಮಾನವೀಯ ಮೌಲ್ಯ ಪ್ರತಿಪಾದನೆ ಮಾಡಿದಂತಾಗಿದೆ ಎಂದರು.
ಪ್ರಮೀಳಾ ಬಾಯಿ ಮಾತನಾಡಿ, ಇದು ನನ್ನ ಸಂಕಲ್ಪ. ಇದು ಒಂದು ದಿನಕ್ಕೆ ಬಳಕೆಯಾಗಬಹುದು. ಅನ್ಯತಾ ಬಾವಿಸಬಾರದು ಇದನ್ನು ನೋಡಿ ಉಳ್ಳವರು ಇನ್ನೂ ಹೆಚ್ಚಿನ ನೆರವು ನಿಮಗೆ ನೀಡಲಿ ಎಂದು ಹಾರೈಸಿದರು.
ಜೆಸಿಐ ಚಂದನ್ ಶಿಕಾರಿಪುರದ ಅಧ್ಯಕ್ಷ ಮಧುಕೇಶ್ವರ ಮಾತನಾಡಿ, ನಮ್ಮ ಸಂಸ್ಥೆ ಅಡಿಯಲ್ಲಿ ಅನೇಕ ಜನೋಪಕಾರಿ ಕೆಲಸ ಮಾಡುತ್ತಾ ಬಂದಿದ್ದೇವೆ. ನಮಗೆ ಪ್ರಚಾರ ಬೇಡ. ಸಂಕಷ್ಟದಲ್ಲಿರುವ ಜನರಿಗೆ ಪ್ರತಿಯೊಬ್ಬರೂ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಪ್ರಚೋದಿಸಬೇಕು. ಈ ಕಾರ್ಯಕ್ರಮದಿಂದ ನಮ್ಮ ತಾಯಿಯವರ ಸಂಕಲ್ಪ ಈಡೇರಿದಂತಾಗಿದೆ. ಎಂದು ತಮ್ಮ ಮನದಾಳದ ಮಾತನ್ನು ಹೇಳಿದರು.
ನೆರೆದ ಅತಿಥಿ ಉಪನ್ಯಾಸಕರಿಗೆ ಕಿಟ್ ವಿತರಿಸಲಾಯಿತು. ಈ ಸಂರ್ಭದಲ್ಲಿ ಗಜೇಂದ್ರ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post