ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮನುಷ್ಯ ಕುಲಕ್ಕೆ ಅಹಿಂಸೆಯೇ ಮೂಲ ಧರ್ಮವಾಗಿರಬೇಕು ಎಂದು ತೇರ ಪಂಥ್ನ ಆಚಾರ್ಯ ಮಹಾಶ್ರಮಣ್ ಜೀ ಸಂದೇಶ ನೀಡಿದರು.
ಪ್ರಸ್ತುತ ಪ್ರಪಂಚ ಅನ್ಯಾಯ ಮತ್ತು ಅಧರ್ಮದ ದೋರಣೆಯ ನಿಲುವುಗಳತ್ತ ಸಾಗುತ್ತಿದೆ. ಪ್ರಕೃತಿಯ ನಾಶ, ಪ್ರಾಣಿ-ಪಕ್ಷಿಗಳ ಅವನತಿ, ಯುದ್ದಗಳು, ಭಯೋತ್ಪಾದನೆ ತಾಂಡವವಾಡುತ್ತಿದೆ. ಈ ಕಾಲಮಾನದಲ್ಲಿ ಭಗವಾನ್ ಮಹಾವೀರರ ಅಹಿಂಸಾ ತತ್ವ ಜಗತ್ತಿನೆಲ್ಲಡೆ ರೂಡಿಗೆ ಬರಬೇಕಿದೆ. ಜನರಲ್ಲಿ ಅಹಿಂಸ ಭಾವನೆ ಮೂಡಬೇಕು. ಆಗ ಮಾತ್ರ ಜಗತ್ತನ್ನು ವಿನಾಶದ ಅಂಚಿನಿಂದ ರಕ್ಷಿಸಲು ಸಾಧ್ಯ ಎಂದರು.



ಈ ಸಂದರ್ಭದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಛೇರ್ಮನ್ ಟಿ. ಸುಬ್ಬರಾಮಯ್ಯ, ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ಟ್ರಸ್ಟಿಗಳಾದ ಡಾ. ಎಸ್. ಶ್ರೀನಿವಾಸ್, ಡಾ. ವಿನಯಾ ಶ್ರೀನಿವಾಸ್, ವಿಶ್ವನಾಥ್, ಡಾ. ಪುಷ್ಪಲತಾ, ಡಾ. ಆರ್.ಪಿ. ಪೈ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್, ಉಪಪ್ರಾಂಶುಪಾಲ ಡಾ. ಮಿಥುನ್, ತೇರಾ ಪಂಥ್ನ ಶ್ವೇತಾಂಭರ ಸಂಘದ ಅಧ್ಯಕ್ಷ ಮದನ್ಲಾಲ್ ಜೀ ಸಂಚೇತ್, ಕಾರ್ಯದರ್ಶಿ ಹನುಮಾನ್ ಚಂದ್ ಕೊಠಾರಿ, ಜೈನ ಮುಖಂಡರಾದ ನರೇಂದ್ರ ಜೈನ್ ಇನ್ನಿತರರು ಉಪಸ್ಥಿತರಿದ್ದರು.
(ಫೋಟೋ ಕೃಪೆ: ವೆಂಕಟೇಶ್)
















