Sunday, July 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Editorial

ಹಾಗಾದರೆ, ರಾಜೀನಾಮೆ ನೀಡಿ ಮನೆಗೆ ಹೋಗಿ ಮುಖ್ಯಮಂತ್ರಿಗಳೇ!

June 12, 2018
in Editorial
0 0
0
Share on facebookShare on TwitterWhatsapp
Read - 2 minutes

ನೀವೆಷ್ಟು ಸೀಟು ಪಡೆದಿದ್ದೀರೋ ಅದು ಮುಖ್ಯವಲ್ಲ. ಆದರೆ, ಸಂವಿಧಾನಬದ್ದವಾಗಿ ಸೃಜನೆಯಾಗಿರುವ ಮುಖ್ಯಮಂತ್ರಿಯ ಸ್ಥಾನದಲ್ಲಿ ನೀವಿಂದು ಕುಳಿತಿದ್ದೀರಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ.. ಈ ರಾಜ್ಯದ ಪ್ರಭಾವಿ ಸ್ಥಾನದಲ್ಲಿ ಕುಳಿತು ಇಂತಹ ಮಾತನ್ನು ನೀವು ಆಡುತ್ತೀರಿ ಎಂದರೆ, ಅದು ನಮ್ಮ ರಾಜ್ಯದ ದೌರ್ಭಾಗ್ಯ.

ವಿಚಾರ ಏನೆಂದರೆ,
ಬೆಂಗಳೂರಿನ ಗಾಂಧಿ ಭವನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಿರಿಯ ಗಾಂಧೀವಾದಿಗಳನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಭ್ರಷ್ಟಾಚಾರವನ್ನು ತಾವು ಸ್ವಚ್ಛ ಮಾಡಲು ಯತ್ನಿಸಿದರೆ ತನ್ನನ್ನು ಅಧಿಕಾರದಲ್ಲಿರಲು ಬಿಡುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ.

ಇದನ್ನು ಅವರು ಯಾವ ಉದ್ದೇಶವಿಟ್ಟುಕೊಂಡು ಹೇಳಿದರೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಯಂತಹ ಸ್ಥಾನದಲ್ಲಿ ಕುಳಿತು ಇಂತಹ ಮಾತು ಆಡುವುದು ಸರ್ವಥಾ ಸರಿಯಾದುದಲ್ಲ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂದು ನಾನು ಹೊರಟರೆ 2 ನಿಮಿಷ ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಅಲ್ಲಾ ಸ್ವಾಮಿ ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಂತಹ ಪ್ರಭಾವಿ, ವಿಶೇಷಾಧಿಕಾರ ಹೊಂದಿರುವ ವ್ಯಕ್ತಿಯಾಗಿ ಇಂತಹ ಮಾತನ್ನಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನೀವೇ ಚಿಂತಿಸಿ.

ಭ್ರಷ್ಟಾಚಾರ ಇದೆ ಎಂಬುದನ್ನು ರಾಜ್ಯದ ಜನರ ಮುಂದೆ ಒಪ್ಪಿಕೊಂಡರೆ ತಾವು ಸತ್ಯವಂತರು, ಇರುವುದನ್ನು ಒಪ್ಪಿಕೊಂಡರು ಮುಖ್ಯಮಂತ್ರಿಗಳು ಎಂಬ ಕರುಣೆ ನಿಮ್ಮ ಮೇಲೆ ಬರುತ್ತದೆ ಎಂದು ನೀವೆಣಿಸಿದ್ದರೆ ಅದು ಶುದ್ದ ಸುಳ್ಳು.

ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಬೇಕೆಂದು ನಾನು ಹೊರಟರೆ 2 ನಿಮಿಷ ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ ಎನ್ನುತ್ತೀರಲ್ಲಾ, ಹಾಗಾದರೆ, ನಿಮ್ಮ ಸ್ಥಾನ ಅಷ್ಟು ಅಭದ್ರವಾಗಿದೆ ಎಂದಾಯಿತು ಅಲ್ಲವೇ? ಇಂತಹ ಅಭದ್ರ ಅಧಿಕಾರದಲ್ಲಿ ಕುಳಿತು ಈ ರಾಜ್ಯದ ಜನತೆ ಅದಿನ್ನೆಂತಹ ನ್ಯಾಯವನ್ನು ತಾವು ಒದಗಿಸಲು ಸಾಧ್ಯ? ಸಮ್ಮಿಶ್ರ ಸರ್ಕಾರವೋ ಎಂತಹ ಮಣ್ಣೋ ಅದೆಲ್ಲಾ ಮುಖ್ಯವಲ್ಲ. ತಾವೀಗ ಮುಖ್ಯಮಂತ್ರಿ, ಸಂವಿಧಾನ ಬದ್ದವಾಗಿ ತಮಗೆ ಇರುವ ಅಧಿಕಾರವನ್ನು ಉಪಯೋಗಿಸಿ ಭ್ರಷ್ಟಾಚಾರ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಡುತ್ತೇನೆ ಎಂದು ಹೇಳುವ ಧೈರ್ಯ ತಮಗಿಲ್ಲ ಎಂದಾದರೆ, ನೀವು ಆ ಸ್ಥಾನಕ್ಕೆ ಲಾಯಕ್ಕಲ್ಲ ಎಂಬುದು ಸತ್ಯ.

ಭ್ರಷ್ಟಾಚಾರ ಇದೆ ಎಂದು ಗೊತ್ತಾದ ಇಲಾಖೆಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಇದಕ್ಕಿರುವ ಉಪಾಯ ಎಂದಿದ್ದೀರಲ್ಲಾ, ನೀವೇನು ಮುಖ್ಯಮಂತ್ರಿ ಅಂದುಕೊಂಡಿದ್ದೀರೋ? ಅಥವಾ ಗೋಲಿ ಆಡುವ ಹುಡುಗ ಅಂದುಕೊಂಡಿದ್ದೀರೋ? ಭ್ರಷ್ಟಾಚಾರ ಇದೆ ಎಂದು ಗೊತ್ತಾದಾಗ ಇಲಾಖೆಯಿಂದ ವರ್ಗಾವಣೆ ಮಾಡಿ, ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದ ಮಾತ್ರಕ್ಕೆ ಆ ಭ್ರಷ್ಟ ಅಧಿಕಾರಿ ಸತ್ಯ ಹರಿಶ್ಚಂದ್ರನಾಗಿಬಿಡುತ್ತಾನೆಯೇ?

ಹಾಗಾದರೆ ಒಂದು ಕೆಲಸ ಮಾಡಿ… ಒಂದು ತಂಡ ರಚನೆ ಮಾಡಿ ಯಾವ ಯಾವ ಇಲಾಖೆಯ, ಯಾವ ಯಾವ ಕಚೇರಿಯಲ್ಲಿ ಭ್ರಷ್ಟಾಚಾರವಿದೆ ಎಂಬುದನ್ನು ಒಂದು ಪಟ್ಟಿ ಮಾಡಿ… ಆ ಎಲ್ಲಾ ಕಚೇರಿಗಳಿಗೆ ಭ್ರಷ್ಟರನ್ನು ಸಾರಾಸಗಟಾಗಿ ವರ್ಗಾವಣೆ ಮಾಡಿಬಿಡಿ. ಅಲ್ಲಿಗೆ ನಿಮ್ಮ ಪ್ರಕಾರ ನಮ್ಮ ರಾಜ್ಯ ಭ್ರಷ್ಟಾಚಾರ ಮುಕ್ತ ರಾಜ್ಯವಾದಂತಾಯಿತು ಅಲ್ಲವೇ.. ಈ ಯೋಚನೆ ಮಕ್ಕಳ ಕಾಮಿಕ್ ಪುಸ್ತಕಕ್ಕೂ ಲಾಯಕ್ಕಲ್ಲ ತಿಳಿಯಿರಿ..

ಇನ್ನು, ಇಲ್ಲಿಯವರೆಗೆ ಎಷ್ಟು ದುಡ್ಡು ಮಾಡಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ನಾನು ಕೇಳುವುದಿಲ್ಲ, ಆದರೆ ಇನ್ನು ಮುಂದೆ ರಾಜ್ಯ ಮತ್ತು ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದೀರಿ.. ಅಲ್ಲಿಗೆ ಇಲ್ಲಿಯವರೆಗೂ ಭ್ರಷ್ಟಾಚಾರದಲ್ಲಿ ದುಡ್ಡು ಮಾಡಿರುವ ಎಲ್ಲರಿಗೂ ಕ್ಲೀನ್ ಚಿಟ್ ದೊರೆತಂತಾಯಿತು ಅಲ್ಲವೇ?

ಅಲ್ಲರೀ ಸ್ವಾಮಿ ಮುಖ್ಯಮಂತ್ರಿಗಳೇ, ಯಾರಪ್ಪನ ಮನೆ ದುಡ್ಡು ಈ ಭ್ರಷ್ಟರೆಲ್ಲಾ ತಿಂದಿರುವುದು? ಜನಗಳು ಕಷ್ಟಪಟ್ಟು ದುಡಿದು, ಪಾವತಿಸಿದ ತೆರಿಗೆ ಹಣವನ್ನು ಹೆಗ್ಗಣಗಳಂತೆ ಭ್ರಷ್ಟರು ತಿಂದು ತೇಗಿರುವುದು. ಇಲ್ಲಿಯವರೆಗೂ ಎಷ್ಟು ದುಡ್ಡು ಮಾಡಿಕೊಂಡಿದ್ದೀರಿ ಎಂದು ಕೇಳುವುದಿಲ್ಲ ಎಂದು ನೀವು ಹೇಳುವುದಕ್ಕೆ ಅವರೇನು ನಿಮ್ಮನೆ ಹಣ ತಿಂದಿಲ್ಲ.

ಅಷ್ಟಕ್ಕೂ ನಿಮಗೆ ಭ್ರಷ್ಟರ ಬಗ್ಗೆ ಅಷ್ಟೊಂದು ಪ್ರೀತಿಯಿದ್ದರೆ, ಯಾವ ಯಾವ ಅಧಿಕಾರಿ ಎಷ್ಟು ಹಣ ತಿಂದಿದ್ದಾನೆ ಎಂಬುದನ್ನು ತನಿಖೆ ನಡೆಸಿ, ಪಟ್ಟಿ ಮಾಡಿ, ಅಷ್ಟೂ ಹಣವನ್ನು ನಿಮ್ಮ ಸ್ವಂತ ಖಜಾನೆಯಿಂದ ಸರ್ಕಾರಕ್ಕೆ ಕಟ್ಟಿಕೊಡಿ.. ಆಗ ಒಪ್ಪಿಕೊಳ್ಳೋಣ.

ಮುಖ್ಯಮಂತ್ರಿಯಂತಹ ಸ್ಥಾನದಲ್ಲಿ ಕುಳಿತು, ಕಣ್ಣೀರು ಹಾಕುವುದು, ಕರುಣೆ ಪಡೆದುಕೊಳ್ಳುವ ರೀತಿಯಲ್ಲಿ ಮಾತನಾಡುವುದು, ನಡೆದುಕೊಳ್ಳುವುದು ಓರ್ವ ಸಮರ್ಥ ನಾಯಕನಿಗೆ ಇರಬೇಕಾದ ಲಕ್ಷಣವಲ್ಲ. ನಾಯಕನಾದವರು ಯಾವುದಕ್ಕೂ ಹೆದರದೇ, ಏನೇ ಬಂದರೂ ಚಾಣಕ್ಷತನದಿಂದ ಎದುರಿಸುತ್ತೇನೆ, ತನ್ನನ್ನು ಸಮರ್ಪಿಸಿಕೊಂಡಾದರೂ ತನ್ನ ರಾಜ್ಯ ಅಥವಾ ರಾಷ್ಟ್ರದ ಜನರ ಹಿತವನ್ನು ಕಾಪಾಡುತ್ತೇನೆ ಎಂದು ಮುನ್ನುಗ್ಗಬೇಕು. ಅದಾಗದಿದ್ದಾಗ, ಅಂತಹ ಸ್ಥಾನದಲ್ಲಿ ಕುಳಿತುಕೊಳ್ಳಬಾರದು..

ಚಿಂತಿಸಿ ನೋಡಿ ಏನು ಮಾಡುತ್ತೀರಿ ಎಂದು… ಸಮರ್ಥವಾಗಿ ಭ್ರಷ್ಟಾಚಾರನ್ನು ತೊಳೆಯುವ ಪ್ರಯತ್ನ ನಿಮ್ಮಿಂದ ಸಾಧ್ಯವಾದರೆ ಮಾಡಿ.. ಅದು ನಿಮ್ಮಿಂದ ಸಾಧ್ಯವಿಲ್ಲ ಎಂದರೆ, ರಾಜೀನಾಮೆ ನೀಡಿ ಮನೆಗೆ ಹೋಗಿ.. ಆಯ್ಕೆ ನಿಮ್ಮದು.

-ಎಸ್.ಆರ್. ಅನಿರುದ್ಧ ವಸಿಷ್ಠ

Tags: Chief Minister of Karnatakacorruption in karnatakaCorruption in Karnataka GovtH D Kumaraswamy
Previous Post

ಸದ್ಯದಲ್ಲೇ ತೆರೆಗೆ ಬರಲಿದೆ ಎಂಎಲ್‌ಎ

Next Post

Highlights: 13.05.2018

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Highlights: 13.05.2018

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಖಾಯಂ ಲೋಕ ಅದಾಲತ್‌ನ ಸದ್ಬಳಕೆ ಮಾಡಿಕೊಳ್ಳಿ: ನ್ಯಾ. ಮಂಜುನಾಥ ನಾಯಕ್ ಕರೆ

July 26, 2025

ಕಾರ್ಗಿಲ್‌ ವಿಜಯೋತ್ಸವ | ಸೈನಿಕರು ಗೌರವದ ಸಂಕೇತ: ಡಿಸಿ ಗುರುದತ್ತ ಹೆಗಡೆ

July 26, 2025
File Image

ಪತ್ರಿಕೆಗಳು ಸಮಾಜಕ್ಕೆ ದಿಕ್ಸೂಚಿ: ಸಂಸದ ರಾಘವೇಂದ್ರ

July 26, 2025

ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ: ದಿನೇಶ್ ಅಮೀನ್‌ಮಟ್ಟು ಬೇಸರ

July 26, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಖಾಯಂ ಲೋಕ ಅದಾಲತ್‌ನ ಸದ್ಬಳಕೆ ಮಾಡಿಕೊಳ್ಳಿ: ನ್ಯಾ. ಮಂಜುನಾಥ ನಾಯಕ್ ಕರೆ

July 26, 2025

ಕಾರ್ಗಿಲ್‌ ವಿಜಯೋತ್ಸವ | ಸೈನಿಕರು ಗೌರವದ ಸಂಕೇತ: ಡಿಸಿ ಗುರುದತ್ತ ಹೆಗಡೆ

July 26, 2025
File Image

ಪತ್ರಿಕೆಗಳು ಸಮಾಜಕ್ಕೆ ದಿಕ್ಸೂಚಿ: ಸಂಸದ ರಾಘವೇಂದ್ರ

July 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!